Posts

Showing posts from July, 2020

308 ಇನಿಯನೊಲವು

Image

307ಅರಿವಿರದ ಹಾದಿಯಲಿ

ಇಂದಿನ ಥೀಮ್## ಸಾಲಿಗೊಂದು ಕವನ## ಅರಿವಿರದ ಹಾದಿಯಲಿ ******************* ಅರಿವಿರದ ಹಾದಿಯಲಿ  ಅರಿವೇ ಇಲ್ಲದೆ ನಡೆದೇ ತನ್ನಿರಿವಿನ ಅರಿವಿಲ್ಲ... ದಾರಿ ಸಾಗುತಿದೆ ಮೆಲ್ಲ... ಎಲ್ಲಿಗ್ಹೊರಟಿಹೆನೋ ಕಾಣೆ ಗುರಿಯಿಲ್ಲ... ಗುರುತಿಲ್ಲ ಮನವೂ ಮುದುಡಿ ಮಲಗಿದೆ ಯೋಚಿಸಲು ಅರಿವಿಲ್ಲ... ಭ್ರಾಂತಿಯಾಗಿದೆ ಮನಕೆ ಶಾಂತಿ ಇಲ್ಲದ ನೆಪಕೆ ಉರುಳುತಿದೆ ಬಾಳ ಬಂಡಿ ಅರ್ಥವಿಲ್ಲ ಜೀವನಕೆ ನೋವು ನಲಿವಿನ ಆಗರ ಬದುಕಿನ ಮಾಹಾಸಾಗರ ಕಷ್ಟಗಳ ಅಲೆಯೆದ್ದೆದ್ದು ಅಪ್ಪಳಿಸುತ್ತಿದೆ ಬಾಳ ತೀರ ಎಚ್ಚೆತ್ತುಕೊಳಬೇಕು ಈಗಲೇ ದಾರಿ ತಪ್ಪುವ ಮುನ್ನ ಅರಿತು ಮುನ್ನಡಿಯಿಡಬೇಕು ಜಾರಿ ಬೀಳುವ ಮುನ್ನ ಅರಿವಿರದ ದಾರಿಯ ಬಿಟ್ಟು ಅರಿತು ಮುನ್ನಡೆದಾಗ  ದಾರಿಯದು ಹೂ ಹಾಸು ನಳನಳಿಸುವುದು ಮನಸು ಅರಿವಿರಬೇಕು ಮನುಜಂಗೆ ಜಗದ ರೀತಿ ನೀತಿಗಳಲಿ ಎಲ್ಲರೊಳಗೊಂದಾಗಿ  ಬದುಕಬೇಕು ಬಾಳಿನಲಿ            .ಶೈಲೂ.........

306 ಅಡಿಗಡಿಗೆ ಕಾಡುವ ನೆನಪುಗಳೇ

ಶೀರ್ಷಿಕೆ :  ಅಡಿಗಡಿಗೆ ಕಾಡುವ ನೆನಪುಗಳೇ *************************** ಅಡಿಗಡಿಗೆ ಕಾಡುವ ನೆನಪುಗಳೇ ವಿರಮಿಸಿ ಸ್ವಲ್ಪ ಸಮಯ ನೆನಪಿನ ಬೇಗೆಯಲಿ ಬೆಂದಿರುವೆ ಸಾವರಿಸಿಕೊಳ್ಳುವೆ ಭ್ರಮೆಯ ಚಂದಿರನ ಕಂಡ ಅಲೆಗಳಂತೆ ಅಪ್ಪಳಿಸುವಿರೇಕೆ ಮನದ ದಡಕೆ? ದೂರದಲ್ಲೆಲ್ಲೋ ಇರುವನವನು ಹೊಯ್ದಾಟದ ಭ್ರಾಂತಿಯೇಕೆ.? ಬಿಕೋ ಎನುತಿದೆ ಮನದ ಮನೆಯು ಬಣಗುಟ್ಟುತ್ತಿದೆ ಮೌನ ತುಂಬಿದೆದೆಯು ನೆನಪ ಮೂಟೆ ಹೊತ್ತು ತಂದು ಕಾಡುವಿರಿ ಏಕೆ ಹೀಗೆ ಮನವನಿಂದು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ತಾಕಿತೇಕೆ ಪ್ರೇಮ ಸುಧೆಯು..? ಬತ್ತಿದ ಕನಸು ಕಂಗಳಲ್ಲಿ ಬಿತ್ತಿದಿರೇಕೆ ನೆನಪ ಬೆಳೆಯು ಭಾವ ಬದುಕಿಗೆ ಬೆಂಕಿಯಿಟ್ಟು ಸುಡುವಿರೇಕೆ ಮನದ ಶಾಂತಿ ಸುಕ್ಕುಗಟ್ಟಿದೀ ಬರಡು ಬದುಕ ಹಿಂಡುವಿರೇಕೆ ಮನವ ಹೊಕ್ಕಿ ತಾಳಿ ನಿಲ್ಲಿ ಅಲ್ಲೇ ದೂರ ದೂರ ಮರೆಯಬೇಕಿದೆ ಎಲ್ಲವನ್ನೂ ನಸುನಗೆಯಲೇ ಮೋಡಿ ಹಾಕಿ ಮನದಲಿ ಮಡುವುಗಟ್ಟಿದ ನೋವನು ಮನದ ಮೂಲೆಯಲಿ ಬೀಡುಬಿಟ್ಟು ಸವಿನೆನಪಿನ ಮುಖವಾಡ ಹೊತ್ತು ಕನಸಿಗೇ ಲಗ್ಗೆ ಇಟ್ಟು ನೆನಪಾಗಿ ಕಾಡುವೆ ಇರು ಒಂದರೆಗಳಿಗೆ ಮರೆತೆಲ್ಲ ಬದುಕುವೆ            ಶೈಲೂ.....

305 ಪಚ್ಚೆ ಪೈರಿನ ಸಿರಿಯು ಬಳುಕಲು

Image
ಸಾಲಿಗೊಂದು ಕವನ ಶೀರ್ಷಿಕೆ :-- ಪಚ್ಚೆ ಪೈರಿನ ಸಿರಿಯು ಬಳುಕಲು ************************** ಪಚ್ಚೆ ಪೈರಿನ ಸಿರಿಯು ಬಳುಕಲು ಭೂತಾಯಿಗಂದು ಸಂಭ್ರಮದ ಹೊನಲು ಉತ್ತು ಬಿತ್ತಿದ್ದ ಕಾಳು ತೆನೆಯೊಡೆದು ತುಳುಕಲು ಸ್ವರ್ಗವೇ ಧರೆಗಿಳಿದಂತೆ ನಲಿಯಲು ಸುಗ್ಗಿ ಸಂಭ್ರಮದ ಸಂಕ್ರಾಂತಿ ಎಲ್ಲೆಲ್ಲೂ.! ಕೃಷಿಕರಿಗೆ ದುಡಿಮೆಯ ಪ್ರತಿಫಲ ತೊನೆಯುವ ತೆನೆಯ ಒಡಲಲ್ಲಿ ರಸತುಂಬಿ ಕಟ್ಟಿದ ಕಾಳುಗಳ ಮಡಿಲಲ್ಲಿ ರೈತ ಸಂಭ್ರಮದಿ ನಲಿವನಿಲ್ಲಿ.! ಸುಗ್ಗಿ ಸಂಭ್ರಮದ ಸಂಕ್ರಾಂತಿ ಎಲ್ಲೆಲ್ಲೂ ಬೆಳೆದ ಪೈರುಪಚ್ಚೆಯ ಒಕ್ಕಣೆ ಮಾಡಿ ಹಸಿವೆ ನೀಗಿಸುವ ಸಿರಿಧಾನ್ಯವನು ನೋಡಿ ವರ್ಷದ ದುಡಿಮೆಯ ಫಲ ಧಾನ್ಯ ರಾಶಿಯಲ್ಲಿ ಸುಗ್ಗಿ ಸಂಭ್ರಮದ ಸಂಕ್ರಾಂತಿ ಎಲ್ಲೆಲ್ಲೂ ಮನೆ ಮನೆಯಲ್ಲೂ ಸಿಹಿ ಹುಗ್ಗಿಯ ಘಮಲು               ಶೈಲೂ......

304 ದೇಶಭಕ್ತಿ - ನಮ್ಮ ಶಕ್ತಿ

Image
ಸಾಲಿಗೊಂದು ಕವನ## ದೇಶಭಕ್ತಿ - ನಮ್ಮ ಶಕ್ತಿ ****************** ವೇಷ ಭಾಷೆ ಯಾವುದಾದರೇನು? ನಮ್ಮ ದೇಶವೊಂದೇ ಭಾರತ..! ಜಾತಿ ಬೇಧ ಭಾವ ಮರೆತು ಎಲ್ಲರಲಿರಲಿ ಒಮ್ಮತ..!! ದೇಶಭಕ್ತಿ  - ನಮ್ಮಶಕ್ತಿ ಒಗ್ಗಟ್ಟಿನಲ್ಲಿದೆ ಬಲ ...!! ಕಾದುವ ಅರಿಗಳ ಹಿಮ್ಮೆಟ್ಟಿಸಿ ತೋರಿಸೋಣ  ಭುಜಬಲ..!! ಕಾಶ್ಮೀರ ಕಣಿವೆಯಿಂದಿಡಿದು ಕನ್ಯಾಕುಮಾರಿಯ ವರೆವಿಗೂ ವಿವಿಧ ಸಂಸ್ಕೃತಿ ವೇಷ ಭಾಷೆ ಇದು ತಾಯ್ನಾಡಿಗೆ ಮೆರುಗು..!! ನಾವೆಲ್ಲರೊಂದೇ ಇಲ್ಲಿ ಭಾರತಾಂಬೆಯ ಸುತರು ಭಾವೈಕ್ಯತೆಯ ಸಾರುವ ಮಂದಿ ನಮಗೆಲ್ಲ ಹಿತರು..!! ಸಾಮರಸ್ಯ ಸಹಬಾಳ್ವೆ ನಮಗಾಗಲಿ ಸೂತ್ರ..!! ಒಂದೇ ಮಾತರಂ ಇದು ಭಾವೈಕ್ಯತೆಯ ಮಂತ್ರ..!! ದೇಶಭಕ್ತಿಯೇ ನಮ್ಮ ಶಕ್ತಿ ಇರಲಿ ಪ್ರೀತಿ  ಸಂತತ..!! ತನು ಮನ ಧನವೆಲ್ಲವೂ ಭರತ ಮಾತೆಗೆ ಅರ್ಪಿತ..!!              ಶೈಲೂ......

303 ತೆರೆಯುತ ಬದುಕಿಗೆ ಹೊಸ ಅಧ್ಯಾಯವ

ಸಾಲಿಗೊಂದು ಕವನ## ಶೀರ್ಷಿಕೆ:-- ತೆರೆಯುತ ಬದುಕಿಗೆ ಹೊಸ ಅಧ್ಯಾಯವ ********************************* ಸಾಗುತಿದೆ ಜೀವನ ದಿಕ್ಕು ತಪ್ಪಿದ ಹಾದಿಯಲ್ಲಿ ಮನವ ಆವರಿಸಿರುವ ಕತ್ತಲೆಯ ಬಯಲಿನಲಿ ಮನದಾಗಸದಲಿ ಕಿಕ್ಕಿರಿದಿರುವ ಕಾರ್ಮುಗಿಲು ಕಾತರಿಸುತ್ತಿದೆ ಕಣ್ಣ ನೀರ ಹನಿ ಬಿಕ್ಕಿ ಬಿಕ್ಕಿ ಅಳಲು ನಡೆದ ಹಾದಿಯ ಹಿಂತಿರುಗಿ ಒಮ್ಮೆ ನೋಡಿದೆ ಹೊರಳಿ ಜೊತೆ ಜೊತೆಗೆ ಸಾಗಿ ಬರುತ್ತಿದೆ ನೋವುಗಳು ಮರಳಿ ಅರಿಯಲಾರದೆ ಹೋದೆ ಸೋಲಿನ ವ್ಯಥೆಗೆ ಕಾರಣ ಅಸ್ತವ್ಯಸ್ತ ಬದುಕಲಿ ತುಂಬಿದೆ ಅಹಮಿನ ಹೂರಣ ಇನ್ನೆಷ್ಟು ದಿನ ಈ ಹೊಯ್ದಾಟದ ಬದುಕು? ಭಾವಬಂಧನದಲಿ ಸಿಲುಕಿದ್ದ ಜೀವಕೆ ಬೇಕು ಬೆಳಕು ಜಿಡ್ಡುಗಟ್ಟಿದ ಹಳೆಬೇರಲಿ ಚಿಗುರೀತೆ ಹೊಸಕನಸು? ಹೊಸಬದುಕಿನ ಹೊಸದಾರಿಗೆ ತೆರೆಯಬೇಕು ಮನಸು ಗೊಂದಲಗಳ ದೊಂಬಿಯಲಿ ಬಿದ್ದು ಒದ್ದಾಡಿದ್ದು ಸಾಕು ಇನ್ನಾದರೂ ಅರಿತು ಬೆರೆಯುವುದ ಕಲಿಯಬೇಕು ತೆರೆಯುತ ನನ್ನೀ ಬದುಕಿಗೆ ಹೊಸ ಅಧ್ಯಾಯವನು ಬರೆಯುವೆ ಹೊಸ ಭಾಷ್ಯದ ಚಿಂತನೆಗೆ ಮುನ್ನುಡಿಯನು                ಶೈಲೂ.........

302 ಕೊಳಲ ಸವಿಗಾನ

Image
ಸಾಲಿಗೊಂದು ಕವನ## ದೂರದ ಕರೆಯೊಂದು ಸೆಳೆಯುತಿದೆ ******************************* ಎಲ್ಲಿಂದಲೋ ಕೇಳುತಿದೆ ಕೊಳಲ ಸವಿಗಾನ ನನ್ನ ಪಾಲಿಗದುವೆ ಅಮೃತ ಸುಧಾಪಾನ ಗರಿಗೆದರಿ ಹಾರುತಿದೆ ಮನಸು ಮಾಧವನ ನೆನೆದು ಮನದಲಿ ನವಿರಾದ ಕಂಪನ ಸವಿಗನಸ ಹೊಸೆದು ತೆರೆತೆರೆಯಾಗಿ ಬರುತಿದೆ ಮಧುರ ಸ್ವರದಾಲಾಪ ಎದೆಯಲ್ಲಿ ನವರಾಗ ಹೊಮ್ಮುವ ಒಲವ ಪ್ರತಾಪ ಎದೆಯಲಚ್ಚೋತ್ತಿದೆ ಮಾಧವನ ಮೋಹಕ ರೂಪ ಆದರೆಕೋ ಮುನಿಸು.. ತುಸು ಕೋಪದ ತಾಪ😔 ದೂರದಲಿ ಕರೆಯೊಂದು ಬಳಿಸಾರಿ ಕರೆಯುತಿದೆ ನಿಂತಲ್ಲಿ ನಿಲಲಾರದೆ ಮನವು ಚಡಪಡಿಸುತ್ತಿದೆ ಕಾಣದೇ ನಿಲಲಾರೆ ಮಾಧವನ  ಮರೆತು ಓಡುವುವು ಮುನಿಸವನ ಕಂಡೊಡನೆ ಮರೆತು ಅವನೆನ್ನ ಜೀವ, ನವಿರಾದ ಸವಿಭಾವ..!! ರಮಿಸುತಲಿ ಮರೆಸುವನು ಮನವ ಹಿಂಡುವ ನೋವ ಮಾಧವನ ಮರೆತರೆಕ್ಷಣವೂ ಜೀವಿಸದು ಈ ಜೀವ ಬೀಸಿದನೇಕವನು ತನ್ನ ಮಾಯೆಯ ಪ್ರಭಾವ..!!           ಶೈಲೂ......

301ಕರೆಯದೇ ಬರುವ ಬಂಧುವೀ ಪ್ರೀತಿ

ಸಾಲಿಗೊಂದು ಕವನ ## ಕರೆಯದೇ ಬರುವ ಬಂಧುವೀ ಪ್ರೀತಿ ****************************** ನಾನೇನೂ ಬಯಸಿರಲಿಲ್ಲ ಕನಸುಮನಸಲೂ ಎಣಿಸರಲಿಲ್ಲ ಅದ್ಹೇಗೆ ಹುಟ್ಟಿತೋ ಒಲವು ನಿನ್ನನುರಾಗವೇ ನನಗೆ ಬಲವು ನಿನ್ನಂದ ಚಂದ ಕಂಡಿರಲಿಲ್ಲ ಸಿರಿತನ ಬಡತನದರಿವಿರಲಿಲ್ಲ ಅದ್ಹೇಗೆ ಬಂದಿತೋ ಪ್ರೀತಿ ಅರಗಳಿಗೆಯೂ ಬಿಟ್ಟಿರದ ರೀತಿ ಜಾತಿ ಮತದ ಅರಿವಿರಲಿಲ್ಲ ಕುಲಗೋತ್ರ ಗಣನೆಗೆ ಇಲ್ಲ ಅದ್ಹೇಗೆ ಅರಳಿತೋ ಪ್ರೇಮ ನಮ್ಮೊಲವಲಿಹುದು ನಿಷ್ಕಾಮ ಸರಿದ ಸಮಯದ ಅರಿವಿಲ್ಲ ನಿನ್ನೊಡನಾಟವೇ ಸಿಹಿ ಬೆಲ್ಲ ಅದ್ಹೇಗೆ ಕಳೆಯಿತೋ ವರುಷ ಮರೆಯಲಾಗದ ರಸನಿಮಿಷ ಕರೆಯದೇ ಬರುವ ಬಂಧುವೀ ಪ್ರೀತಿ ಕುರುಡಲ್ಲವಿದು ನಿಜದೊಲವ ರೀತಿ ಹಂಚಿದಷ್ಟೂ ವಿಸ್ತಾರ ಬಾನಗಲದಂತೆ ಮನವೊಪ್ಪಿರೆ ಸ್ವರ್ಗ ಧರೆಗಿಳಿದಂತೆ ಮೊಗೆದಷ್ಟೂ ಬತ್ತದ ಪ್ರೀತಿಯೊರತೆ ಬರದಿರಲೆಂದಿಗೂ ಒಲವಿಗೆ ಕೊರತೆ ನೀ ನನಗಾಗಿ, ನಾನೆಂದಿಗೂ ನಿನಗೆಂದೇ ತನ್ನವರೆಲ್ಲರ ತೊರೆದು ನಾ ಬಳಿಬಂದೆ ಇರಲೆಂದಿಗೂ ಗೆಳೆಯ ಹೀಗೇ ಪ್ರೀತಿ ದೇಹದೊಳು ಉಸಿರು ಬೆರೆತ ರೀತಿ ಉಕ್ಕಿ ಹರಿಯಲಿ ನಿತ್ಯ ಸ್ನೇಹ ಸಿಂಧು ಬಾಳ ದೋಣಿ ಆಗ ಸರಾಗ ಸಾಗುವುದು               ಶೈಲೂ......

300 ಭಾಷೆಗೂ ನಿಲುಕದ ಭಾವನೆಯ ಹೊನಲು

ಥೀಮ್ :-  ಸಾಲಿಗೊಂದು ಕವನ ಶೀರ್ಷಿಕೆ :-- ಭಾಷೆಗೂ ನಿಲುಕದ ಭಾವನೆಯ ಹೊನಲು ********************************* ಎಲ್ಲಿರುವೆ ನಾನು ಎಂದೆನ್ನ ಕೇಳದಿರು ಮನದಲ್ಲಿ ನೆಲೆಯಾಗಿದೆ ನಿನ್ನ ರೂಪ ಅಂತರಂಗದ ವೀಣೆ ಹಿತವಾಗಿ ಮೀಟುತಿರು ಹೃದಯದಲಿ ಸೆರೆಯಾಗಿದೆ ನಿನ್ನ ರೂಪ ಹರಿದಿದೆ ನಿನ್ನ ಪ್ರೀತಿಯ ಸಾಗರದೆಡೆಗೆ ಎನ್ನ ಭೋರ್ಗರೆವ ಮನದ ಭಾವಗಳ ಹೊನಲು ಕಣ್ಣಂಚಿನ ಭಾಷೆಗೆ ಬರೆಯಲಾರದು ಭಾಷ್ಯ ಭಾಷೆಗೂ ನಿಲುಕದ ಭಾವನೆಯ ಹೊನಲು ಭಾವಾಂತರಂಗದಲಿ ಏನೋ ಕೋಲಾಹಲ ಮನಸುಮನಸುಗಳ ನಡುವೆ ಮಾತು ಸ್ಥಬ್ದ ಪ್ರೀತಿಯ ಭಾಷೆಯಲ್ಲಿ ಏಕೋ ಕುತೂಹಲ ಉತ್ಕರ್ಷಿಸುವ ಭಾವನೆಗಳಿಗೆ ನಾನು ಬದ್ಧ ನಿನ್ನೊಲವ ತೇರಿನಲಿ ಮೌನ ಮೆರವಣಿಗೆ ಆರ್ದ್ರತೆಯ ಪ್ರೀತಿಯಲ್ಲಿ ಪ್ರೇಮೋತ್ಸವ ಪುಟಿದೇಳುವ ಆಸೆಯಲಿ ಕಾವ್ಯ ಬರವಣಿಗೆ ಅನೂಹ್ಯ ಅನುಬಂಧದ ನವರಾಗಪಲ್ಲವ ನಿನ್ನೊಡನಾಟದ ನೆನಪುಗಳು ವರ್ಣನಾತೀತ ನಿತ್ಯ ಭೋರ್ಗರೆವ ಸಾಗರ ಸಂಗಮ ನಿತ್ಯಹರಿದ್ವರ್ಣದಂತೆ ರಮ್ಯ ನಮ್ಮೊಲವು ಕೋಕಿಲದ ಸಖೀಗೀತದಂತೆ ಹೃದಯಂಗಮ              ಶೈಲೂ.......

278 ನಮೋ_ಸಂತ_ಯಮನೂರೇಶ

Image
#ಚಿತ್ರಕಾವ್ಯ_ಅಭಿಯಾನ_೩೦ #ನಮೋ_ಸಂತ_ಯಮನೂರೇಶ ಪುರದಾಳದಲುದ್ಭವಿಸಿದ ಪುಣ್ಯಪುರುಷ ಅಪಾರ ಭಕ್ತವೃಂದವ ಗೆದ್ದ ಹೃದಯೇಶ ಸಾವಿರದ ತತ್ವ ಪದಗಳ ಮಹಾಜನಕ ಈತನದು ನಿಜನಾಮ ಯಮನೂರೇಶ.!! ಆಧುನಿಕ ತತ್ವ ಪದಗಳ ಹರಿಕಾರ ಸಾವಿರದ ಹಾಡುಗಳ ಸಂತ ಸರದಾರ ಅದ್ವೈತ ಭಾರ್ಗವನೀತ ಸಾರ್ಥಕ ಜೀವ ಈತನೇ ಯಮನೂರೇಶ ಬಿರಾದಾರ ಟೀಕಾತಾತ್ಪರ್ಯ ರಚಿತ ಟೀಕಾಚಾರ್ಯ ಬರೆದನೆಷ್ಟೋ ಮಹಿಮರ ಜೀವನ ಚಾರಿತ್ರ್ಯ ಅಂಕಿತ ನಾಮವದು ಭೀಮಾಶಂಕರ ಯಮನೂರೇಶ ಶರಣ ಸಂತತಿಯ ಪಾವಿತ್ರ್ಯ ತಿದ್ದಿದರು ತತ್ವಪದದಲೇ ಜಗವ ಸಾಹಿತ್ಯ ಕ್ಷೇತ್ರದಲ್ಲಿ ಕಾಣುತ ಭವವ ಗುರುಗೀತಾಮೃತದಲಿಟ್ಟು ಜೀವನಸಾರ ಭವ್ಯ ಗೊಳಿಸಿದರೆಲ್ಲ ಶರಣರ ಭಾವ ದೇಸಿಮಾತಿನ ಧಾಟಿಯಲೇ ಪದ ಭಂಡಾರ ಕಲಿಸುತೆಲ್ಲರಿಗೆ ತಾನೂ ಕಲಿತ ಗುರುವರ್ಯ ಪದಗಟ್ಟಿನಲೇ ಅಧ್ಯಾತ್ಮ ಬೆರೆಸಿ ರಚಿಸಿದ ಅಗಣಿತ ಸಂತಶರಣ ಮನದ ತಾತ್ಪರ್ಯ ಅಸ್ತಮವಾದರು ಪುರದಾಳದ ರವಿ ಕಣ್ಣೀರಿಟ್ಟಿಹಳು ಅಗಲಿಕೆಗೆ ಭುವಿ ಶಿವನಡಿಯಲಿ ಲೀನವಾದ ಶಿವಾಚಾರ್ಯ ಮತ್ತೊಮ್ಮೆ ಉದ್ಭವಿಸಿ ಬನ್ನಿ ಸಂತ ಕವಿ       ಡಾ: B.N.ಶೈಲಜಾ ರಮೇಶ್

299 ನೆರಳು

Image
ಸಾಲಿಗೊಂದು ಕವನ## ಶೀರ್ಷಿಕೆ ;--- ಬೆಳಕಿನ ಜೊತೆಯಾಗಿ ನಡೆದು ಬರುವುದು ನೆರಳು ****************************************** ಬೆಳಕಿನ ಜೊತೆಯಾಗಿ ನಡೆದು ಬರುವುದು ನೆರಳು ಸುಖದುಃಖ ಒಟ್ಟೊಟ್ಟಿಗಿರುವುದು ಬಾಳಿನ ತಿರುಳು ಒಂದರಹಿಂದೊಂದರಂತೆ ನೋವು ನಲಿವಿನ ಪಾಠ ಕುಗ್ಗದಂತೆ ತಲೆಯೆತ್ತಿ ನಡೆಯಲು ಕಷ್ಟಗಳೇ ಓಟ ಅಳುಕಿರದ ಬದುಕಲ್ಲಿ ಗೆಲುವಿನ ಹಾದಿ ನಿಶ್ಚಿತ ಆತ್ಮವಿಶ್ವಾಸದ ದಿಟ್ಟ ಹೆಜ್ಜೆಗೆ ಗೆಲುವು ಖಚಿತ ಜೊತೆಜೊತೆಗೆ ಹೊಂದಿಕೊಂಡಂತೆ ಹಗಲು ಇರುಳು ಇರುಳಾದ ಮೇಲೇ ಇಹುದು ಹೊಳೆಯುವ ಹಗಲು ಜೊತೆಯಿದ್ದರೂ ಕೈಗೆ ಸಿಗದ ಮಾಯೆ ಈ ನೆರಳು ಮನದ ಓಟದ ಓಘಕೆ ನೀಡಬಾರದು ಕೊರಳು ಸಾವಧಾನ ಚಿತ್ತವಿರೇ ಮನಸ ಅರ್ಥೈಸಲು ಸಾಧ್ಯ ದುಡುಕು ಬುದ್ಧಿಯ ಕೈಲಿಟ್ಟರೆ ಬದುಕು ಅಭೇದ್ಯ ಬಿಡಿಸಲಾರದ ಅನುಬಂಧ ಬೆಳಕಿಗೂ ನೆರಳಿಗೂ ಅಂತೆಯೇ ಸಂಘರ್ಷ ಬುದ್ಧಿಗೂ ಮನಸ್ಸಿಗೂ ಎಂದೆಂದಿಗೂ ಜೊತೆಗಿರುವ ನೆರಳು ಸಂಗಾತಿ ದೇಹದೊಳು ಸಮವಾಗಿ ಉಸಿರು ಬೆರೆತ ರೀತಿ               ಶೈಲೂ......

298ಕಾವನವನು

ದೃಶ್ಯ ಕವನ## ಶೀರ್ಷಿಕೆ :--  ಕಾವನವನು ******************** ಯಾರಿಲ್ಲ ನನ್ನ ಮುಂದೆ ಎಲ್ಲವೂ ತೃಣವೆಂದೇ ಹೆಚ್ಚಿ ಮೆರೆದೆ ಓ ಮನುಜ ಈಗ ಇದೆ ನೋಡು ನಿನಗೆ ಸಜಾ ಜಗವೇ ಹಿಡಿಮುಷ್ಟಿಯಲಿ ಬಿಟ್ಟರಿಲ್ಲವೆಂದೇ ಸಮಷ್ಟಿಯಲಿ ಎಲ್ಲೆಡೆ ಸೋರಿ ವೈರಸ್ ಬಿತ್ತರ ನೋಡಿ0ದು ಜಗವೇ ತತ್ತರ.!! ಮುಖಕ್ಕಿಂದು ಮುಸುಕು ಜಗಜೀವನವೇ ಮಸುಕು ಎಲ್ಲರೊಡನೆ ಕಾಯ್ದು ಅಂತರ ಜೀವ ಭಯವೇ ನಿರಂತರ ಬಂದಳಿಲ್ಲಿ ಮಹಾಮಾರಿ ಮಾನವನ ಬೆನ್ನಮೇಲೇರಿ ಆದ್ಯಂತವವಳೇ ಕೊರೊನಾ ಮಾಡುತಿಹಳು ಪ್ರಾಣಹರಣ ಏರುಪೇರಾದಾಗ ಪ್ರಕೃತಿ ಜನ ಜೀವನವೇ ವಿಕೃತಿ ಅವಸಾನದಂಚಿಗೆ ದೂಡಿದೆ ಆಧುನಿಕತೆಯ ಪರಮಾವಧಿ ಉಸಿರಾಡಲೂ ಭಯವೀಗ ಆವರಿಸಿಬಿಟ್ಟಿದೆ ಮಹಾರೋಗ ಕಾವನವನೇ ಹರ ಶಿವಶಂಕರ ಶ್ರದ್ಧಾಭಕ್ತಿ ಇರಲಿ ನಿರಂತರ ಶರಣಾಗು ನಂಬಿ ದೈವದೆಡೆಗೆ ಕಾಯುವನವನು ಅಡಿಗಡಿಗೆ ನಡೆನುಡಿ ಭಕ್ತಿಯಿರಲಿ ಸ್ವಚ್ಛ ತಾನೆಂದು ಮೆರೆವವರ ಮೆಚ್ಚ ಜಗವನುಳಿಸಲಂದು ಶಿವ ಹಾಲಾಹಲವ ಕುಡಿದನವ ಹಾಲಾಹಲಕಿಂತ ಘೋರ ಕೊರೊನಾದಿಂದ ರಕ್ಷಿಸುವ              ಶೈಲೂ......

297 ಸಂಸಾರನೌಕೆ

#ಸಂಸಾರನೌಕೆ ಬಂಡಿಯ ತೆರನಂತೆ ಈ ಬದುಕು ಎಳೆವರಲಿ ತಾಳ್ಮೆ ಸಮರಸವಿರಬೇಕು ನೊಗಕ್ಕೆ ಕಟ್ಟಿದ ಎತ್ತುಗಳಂತೆ ಸತಿಪತಿ ಸರಾಗ ನಡೆಸೆ ಬದುಕು ಹೂವಿನ ರೀತಿ ಬದುಕೊಂದು ಅನಂತ ವಿಶಾಲ ಶರಧಿ ಸಂಸಾರ ನೌಕೆಗೆ ದಾಂಪತ್ಯವೇ ಪರಿಧಿ ಕಷ್ಟ -  ಸುಖದ  ಏರಿಳಿತಗಳು  ಸಹಜ ಮುಳುಗದಂತೆ ನಡೆಸಬೇಕು ಮನುಜ ಎರಡು ಶುಭ್ರ ಮನಸುಗಳ ಶುಭ ವೇದಿಕೆ ಸಂಸಾರ  ಬಂಧನದಲ್ಲಿ ಈ  ಬಾಳ  ನೌಕೆ ಸುಖದುಃಖಗಳ ಭಾರಿ ಅಲೆಗಳಿಗ್ಹೆದರದೆ ಸುಖದ ತರಂಗ ಪ್ರವಹಿಸುತ್ತಿರಲಿ ಮನದೆ ನಂಬಿಕೆ ಮೇಲೆಯೇ ನಿಂತಿಹುದು ಬಾಳು ಸುಖದಾಂಪತ್ಯದಲಿ ಸವಿಯಿಹುದು ಕೇಳು ತಾಳ್ಮೆ ಸಹನೆಯೇ ಸುಖಸಂಸಾರದ ಗುಟ್ಟು ನಗುತ್ತಿರಬೇಕು  ನೋವುಗಳ  ಅವಿತಿಟ್ಟು             ಶೈಲಜಾ ರಮೇಶ್

296 ದ್ವಿರುಕ್ತಿ_ಕವನ

#ದ್ವಿರುಕ್ತಿ_ಕವನ ಕದ್ದು-ಕದ್ದು ನೋಡಬೇಡ ಗೆಳತಿ ಯಾಕ್ಹೀಗೆ ಮುಸಿ-ಮುಸಿ ನಗುತಿ? ಏನಿದೆ ನನ್ನ ಮೊಗದಲ್ಲಿ ಅಂಥದ್ದು? ಕಣ್ -ಕಣ್ ಬಿಟ್ಟು ನೋಡುವಂಥದ್ದು? ಹೇ..ಬೇಡ -ಬೇಡವೋ ದೊರೆಯೇ ನೀ ಮಾತು - ಮಾತಲ್ಲೇ ಚುಚ್ಚುವೆ ಪ್ರೀತಿ ಮಾಡಿದರೂ ತಪ್ಪೇನು? ಹೋಗು - ಹೋಗು ನಾನಿನ್ನ ಒಪ್ಪೆನು ಹೇ ಕಿಲ - ಕಿಲ ನಗುವ ಜಾಣೆ ಬಾ ಗಲ- ಗಲ ಮಾತಾಡು ಚೆನ್ನೆ ಯಾಕೇ ಕೋಪಗೊಳ್ಳುವೆ ನೀನು? ಗಪ್ -ಚುಪ್ ಎಂದ್ಹೇಳಿದ್ದಕ್ಕೇ ನಾನು? ಮೆಲ್ಲ - ಮೆಲ್ಲನೆ ಹೆಜ್ಜೆಯಿಡುವ ನೀರೆ ಮುದ್ದು - ಮುದ್ದು ಮಾತಾಡು ಬಾರೇ ಕೋಪ ಮಾಡಬೇಡವೇ ಚಿನ್ನಾ ನೀ ನಗು - ನಗುತ್ತಿದ್ದರೇ ಚೆನ್ನ ಫಳ - ಫಳನೆ ಹೊಳೆವ ಮೊಗದಲ್ಲಿ ನಗುವು ಬಿರಿ - ಬಿರಿದು ನಲಿಯಲಿ ಆ ನಗುಮೊಗದ ಅಂದ ಕಾಣುತ ನಾ ನಲಿ - ನಲಿದು ಬಾಳುವೆ ಅನವರತ          ಶೈಲಜಾ ರಮೇಶ್

295 ಶಿಶುಗೀತೆ

Image
#ಚಿತ್ರ_ಕಾವ್ಯ_ಅಭಿಯಾನ #ಶಿಶುಗೀತೆ ಅಮ್ಮ ಬಾರೇ ನೋಡು ಚಂದದ ಕಾಡು ಮೇಡು ಬಿಡಿಸಿರುವೆ ನಾನು ಪುಸ್ತಕದಲಿ ಚಿತ್ರದ ಜೊತೆಗೆ ಪಾಠ ಓದುತ್ತಾ ಆಡಿ  ಆಟ ವಿಷಯವ ಗ್ರಹಿಸಿದೆ ಮಸ್ತಕದಲಿ ಬಂದೇ ಇರು ಕಂದಾ ತೋರೆ ಬರಹದ ಅಂದ ಬಿಡಿಸಿದೆ ಏನದು ಚಿತ್ರದಲೀ ಪಾಟದೊಂದಿಗೆ ಕಲೆ ಕಲಿತರೆ ಬಾಳಿಗೆ ಬೆಲೆ ಎಲ್ಲವೂ ಇರಲಿ ಚಿತ್ತ ಭಿತ್ತಿಯಲಿ ಮಾಡದೆ ರಜೆಯ ವ್ಯರ್ಥ ತಿಳಿದೆನು ಓದಿನ ಅರ್ಥ ವಿದ್ಯೆಯೇ ಮನುಜಗೆ ಭೂಷಣವು ಬಾಲ್ಯದಲೆರಡು ಅಕ್ಕರದ ವಿದ್ಯೆಯನ್ನು ಕಲಿಯದ ಮನುಜ ನೀತಿಯನರಿಯದ ಪಶುವು ಅಬ್ಬಾ ಎಂಥಾ ಜಾಣೆ ಓದಿನಲ್ಲಿ ಪ್ರವೀಣೆ ಮಗಳೇ ನೀನೇ ಹೆಮ್ಮೆಯ ಮುಕುಟ ಮಗನಿಲ್ಲದ ಚಿಂತೆ ನೀಗಿದ ನೀನೇ ಪ್ರಣತೆ ಗಂಡಿಗಿಂತಲೂ ಹೆಣ್ಣೇ ಮಾತೆಗೆ ನಿಕಟ ಯೋಚಿಸಬೇಡವೆ ಅಮ್ಮ ಅಳುತ್ತಾ ನೋಯದಿರಮ್ಮ ಗಂಡು ಮಗನಂತೆಯೇ ನಾ ಸಾಕುವೆನು ಚಂದದಿ ವಿದ್ಯೆಯ ಕಲಿತು ಎಲ್ಲರೊಡನೆಯೂ ಬೆರೆತು ತರುವೆನು ತಾಯ್ನಾಡಿಗೆ ಕೀರ್ತಿಯನು    ಡಾ: B.N. ಶೈಲಜಾ ರಮೇಶ್

294 ರೈತನ_ಸಂಭ್ರಮ

Image
#ಚಿತ್ರಕಾವ್ಯ_ಅಭಿಯಾನ #ರೈತನ_ಸಂಭ್ರಮ ಮಳೆಯು ಸುರಿದು ಕೆರೆಯು ತುಂಬಿ  ಜೀವ ಸೆಲೆಯು ನಲಿಯಿತು ಕಾವ ದೈವ ಕೃಪೆಯು ತೋರಿ ಹಸಿರ ಸಿರಿಯ  ತಣಿಸಿತು ಹದದಿ ನೆನೆದ ಹೊಲವ ನೋಡಿ ರೈತ ಹರುಷಗೊಂಡನು ಜೋಡೆತ್ತು ಸಹಿತ ನೇಗಿಲ್ಹೊತ್ತು ಹೊಲದ ಕಡೆಗೆ ನಡೆದನು ಬುತ್ತಿ ಹೊತ್ತ ಮಡದಿ ತಾನು ರೈತನೊಂದಿಗೆ ಹೊರಟಳು ಮಳೆಯು ತಂದ ಹರುಷದಿಂದ ಮಕ್ಕಳೂ ಅವರ ಜೊತೆಯಾದರು ಉತ್ತು ಬಿತ್ತು ಬೆಳೆಯ ಬೆಳೆದು ರೈತನ ಬದುಕುಬವಣೆ ನೀಗಿತು ಸಾಲ ಶೂಲ ಎಲ್ಲಾ ಹರಿದು ಬದುಕು ಹಸನಾಯಿತು ರೈತಮಿತ್ರ ವರುಣ ದೇವ ಕಾಲಕಾಲಕ್ಕೆ ವೃಷ್ಟಿ ಹರಿಸು ನಾಡಿಗೆಲ್ಲ ಅನ್ನವಿಕ್ಕುವ ಒಕ್ಕಲುಮಕ್ಕಳನ್ನು ಪೋಷಿಸು ಸುಗ್ಗಿ ಸಂಭ್ರಮ ತುಂಬಲೆಲ್ಲೆಡೆ ಹಸಿರು ಕ್ರಾಂತಿ ಮೊಳಗಲಿ ಶ್ರಮಿಕ ರೈತನ ಶ್ರಮಕೆ ಉತ್ತಮ ಫಲಕೆ ಬೆಲೆಯು ದೊರೆಯಲಿ      ಶೈಲಜಾ ರಮೇಶ್

293 ಕಸದಿಂದ_ರಸ

Image
#ಚಿತ್ರಕಾವ್ಯ_ಅಭಿಯಾನ_೧೨ #ಕಸದಿಂದ_ರಸ ಎಲ್ಲಾ ಕೆಲಸ ಮುಗಿಯಿತೆ ಅಮ್ಮಾ ಬಾ ಇಬ್ಬರೂ ಆಟ ಆಡೋಣ ಎಲ್ಲಿ ಮುಗಿಯುತ್ತೆ ಕೆಲಸ ಮಗಳೇ ಬಾ ಹರಿದ ಬಟ್ಟೆ ರಿಪೇರಿ ಮಾಡೋಣ ಬೇರೆ ಚಂದದ ಬಟ್ಟೆ ಇದೆಯಲ್ಲ ಯಾಕೆ ಹರಿದದ್ದು ಹೊಲೆಯುತ್ತಿ? ಹರಿದದ್ದನ್ನೂ ಬಿಸುಟುವುದೇಕೆ? ಹಾಕುವೆ ಇದರಲ್ಲೇ ಕಸೂತಿ ಕಸೂತಿ ಎಂದರೆ ಏನಮ್ಮ.? ನನಗೂ ಕೂಡ ಕಲಿಸಿಕೊಡು ಕಸೂತಿ ಅಂದರೆ ಕಲೆಯಮ್ಮ ಕಸದಲ್ಲೇ ರಸ ತೆಗೆಯೋದು.! ಹರಿದ ಈ ಬಣ್ಣದ ಸೀರೆಯಲಿ ಅಮ್ಮ ಏನೇನು ಮಾಡಬಹುದು? ಹರಿದಿದೆ ಅಷ್ಟೇ ಬಣ್ಣ ಹೊಸತಿದೆ ತಲೆದಿಂಬಿನ  ಚೀಲ ಹೊಲಿಬಹುದು ಬೇರೆ ಬಟ್ಟೆಯ ತುಣುಕು ಸೇರಿಸಿ ಬಣ್ಣಬಣ್ಣದ ದಾರದಿ ಪೋಣಿಸಿ ನನ್ನ ಮುದ್ದು ಕಂದಗೆ ಫ್ರಾಕು ಚಂದದ ಲಂಗವ ಹೊಲಿಬಹುದು ಹೌದೇ ಅಮ್ಮಾ.. ಜಾಣೆ ನನ್ನಮ್ಮ ಎಲ್ಲವನೂ ಮರು ಉಪಯೋಗಿಸುವೆ ನಿನ್ನಂತೆಯೇ ನಾನೆಲ್ಲವ ಕಲಿತು ನಿನಗಿಂತಲೂ ಜಾಣೆ ಎಂದೆನಿಸುವೆ      ಡಾ: B.N. ಶೈಲಜಾ ರಮೇಶ್

292 ಅಪರಂಜಿಯಾಗು_ಮನವೇ

Image
#ಚಿತ್ರಕಾವ್ಯ_ಅಭಿಯಾನ_೧೩ #ಶೀರ್ಷಿಕೆ #ಅಪರಂಜಿಯಾಗು_ಮನವೇ ಅಂತರಂಗದಲೆದ್ದ ಅಲೆ ಬೀಸಿದೆ ಅನುರಾಗದ ಬಲೆ ಸೋಕಿಸಿ ಮೈಯ್ಯ ಕಾವ ಸುಟ್ಟುಬಿಟ್ಟೆಯೆಲ್ಲ ಕಾಯವ ಚೆಂದ ಚೆಲುವಲಿ ಮಾತು ಆಡಿದೆಯಲ್ಲ ಬಳಿ ಕುಳಿತು ಮಾತಿನಲ್ಲೇ ವಿಷ ಉಣಿಸಿ ದಹಿಸಿಬಿಟ್ಟೆಯೆಲ್ಲ ಮನವ ದಿಕ್ಕು ದೆಸೆ ಇಲ್ಲದ ಮನ ಕಳೆದುಕೊಂಡಿತ್ತು ತನ್ನತನ ಮೋಹದಮಲಲ್ಲಿ ತೋಯಿಸಿ ಕೊಂದು ಬಿಟ್ಟೆಯೆಲ್ಲ ತನುವ ಯೌವನವೆಂಬ ಮಾಯೆ ಆವರಿಸಿದ್ದೆಲ್ಲವೂ ಛಾಯೆ ಕುರುಡು ಪ್ರೇಮದ.ಬೆಂಕಿ ದಹಿಸಿ ಬಿಟ್ಟಿತ್ತೆಲ್ಲ ಸೋಕಿ ಬದುಕು ಬಣ್ಣದ ಬೆರಗು ಅತಿಯಾಸೆ ಸಾವಿನ ಸೆರಗು ಭ್ರಮರದಂತಾವರಿಸಿ ನೀನು ಹೀರಿಬಿಟ್ಟೆಯಲ್ಲ ಸವಿಜೇನು ಅರಳಿ ನಗುತಲಿದ್ದ ಹೂವು ಸೋಕಿತು ಕಾಮದ ಕಾವು ಹಚ್ಚಿಬಿಟ್ಟನೇ ಉರಿ ಬೆಂಕಿ ಧಗ ಧಗಿಸಿ ಉರಿಸುತ್ತಾ ಬೆಂಕಿಯದು ಉರಿದಾಡೇ ಬಂಗಾರ ತಾ ಕರಗದೇ? ಪುಟಕ್ಕಿಟ್ಟ ಚಿನ್ನದಂತೆ ನೀ ಅಪರಂಜಿಯಾಗು ಮನವೇ     ಡಾ: ಶೈಲಜಾ ರಮೇಶ್

291ಬಿಡು_ಮುನಿಸು_ಕೊಡು_ಮನಸು

Image
#ಚಿತ್ರಕಾವ್ಯ_ಅಭಿಯಾನ_೧೪ #ಶೀರ್ಷಿಕೆ #ಬಿಡು_ಮುನಿಸು_ಕೊಡು_ಮನಸು ಕೋಪವೇಕೆ ಚಿನ್ನ ನೀ ನಗುನಗುತಿರೇ ಚೆನ್ನ ಚಿನಕುರಲಿ ಮಾತಿಲ್ಲದೇ ನೀ ಮೌನವಾದರೇನು ಚೆನ್ನ? ಹಂಬಲಿಸಿ ನಾ ಬಂದೆ ಚೆಲುವ ಮೊಗ ನೋಡಲೆಂದೇ ಆದರೆಕೋ ಈ ಮುನಿಸು ಮುದ್ದು ಮುಖ ಬಾಡಿದೆ..!! ನೀನಿಲ್ಲದೇ ಸೊಗವೆಲ್ಲಿ? ನಲಿವಿರದು ಬಾಳಲ್ಲಿ ಚಂದ್ರನಿಲ್ಲದ ಬಾನಂತೆ ನೀನಿಲ್ಲದೇ ತಂಪೆಲ್ಲಿ? ಅರಳಿರುವ ಹೂ ನೋಡು ದುಂಬಿಯದೇ ಸವಿ ಹಾಡು ಬಿರಿದಿದೆ ಮನ ಮಲ್ಲಿಗೆ ಮುದುಡಿದರೆ ಘಮ್ಮೆನ್ನದು..!! ಬೇಡ ಕಂಬನಿ ಧಾರೆ ದುಗುಡವೇಕೆ ನೀರೆ? ಏನಿದೆ ಮನದಲಿ ನೋವು ಹೇಳಿ ಬಿಡು ಮನಸಾರೆ..!! ಬಿಡುಮುನಿಸು ಕೊಡು ಮನಸು ನೀನಲ್ಲವೇ ನನ್ನ ಕನಸು? ನೀ ಮೌನವಾದರೆ ಹೀಗೆ ಎಲ್ಲಿದೆ ಬಾಳಲ್ಲಿ ಸೊಗಸು?             ಶೈಲೂ...... ಡಾ: ಶೈಲಜಾ ರಮೇಶ್

290 ನೋಯದಿರು_ಮಗಳೇ

Image
#ಚಿತ್ರಕಾವ್ಯ_ಅಭಿಯಾನ_೧೫ #ನೋಯದಿರು_ಮಗಳೇ ನೋಯದಿರು ಮಗಳೇ ಹೀಗೆ ಇದೆ ನಿನಗೆ ಈ ಅಮ್ಮನ ಹೆಗಲು ಯಾರಿಲ್ಲವೆಂದು ಕೊರಗದಿರು ಅತ್ತು ನೀ ನನ್ನ ಪ್ರಾಣಕ್ಕಿಂತ ಮಿಗಿಲು ಈ ಪುರುಷ ಸಮಾಜದಲ್ಲಿ ಏಕೋ ಸ್ತ್ರೀಯ ಸ್ಥಾನಮಾನ ತೃಣಕ್ಕಿಂತ ಕಡೆ ಅರಿಯರವರು ಮೂಢ ಜನರು ಹೆಣ್ಣವಳು, ಛಾಪಿತ್ತಳು ಎಲ್ಲ ಕಡೆ ಮುದುಡದಿರು ಮನನೊಂದು ಮಗು ಹೆಣ್ಣೆಂದು ಜರಿವವರೆಲ್ಲರೂ ಮೂಢರು ಹೆಣ್ಣಿನಿಂದಲೇ ಬಾಳ ಬೆಳಕು ಅವಳೇ ಆ ದೈವ ಸ್ವರೂಪಿಣಿ ಎಂದರಿಯರು ತೊತ್ತಿನಾಳಲ್ಲ, ತುತ್ತಿತ್ತು ಸಲಹುವಳು ಎಂದೇಕರಿಯರೊ ಅವರು ನಾ ಕಾಣೆ ಗಂಡಿನ ಸರಿಸಮಕೆ ದುಡಿದರೂ ಏಕೋ.. ಗಂಡೆ0ಬ ಹಮ್ಮಿಗೇ ಮಣೆ ಕಷ್ಟ ಸಹಿಷ್ಣುತೆ, ಸುಖ ದುಃಖ ನೋವುನಲಿವುಗಳಿಗಿದೆ ಒಂದು ಮಿತಿ ಗಂಡಿನಾಶ್ರಯವಿಲ್ಲದೆ ಸಾಗಿಸಬಹುದು ಬದುಕು ಆ ದೇವ ಮೆಚ್ಚುವ ರೀತಿ ಎದ್ದೇಳು.. ತೋರಿಸು ಬಾ ಮಗಳೇ ಹೆಣ್ಣೆಂಬ ಶಕ್ತಿಯ ವಿರಾಟ್ ರೂಪವ ಅಚ್ಚರಿಗೊಳ್ಳಲೀ ಜಗ, ಮೆಚ್ಚಿ ಹೆಣ್ಕುಲವ ತೊಡೆದು ಕೊಳ್ಳಲೀ ತಾ ಮಾಡಿದ ಪಾಪವ ಡಾ: B.N. ಶೈಲಜಾ ರಮೇಶ್

289 ಮನದಲುದಿಸಿದ_ಭಾವ

Image
#ಚಿತ್ರಕಾವ್ಯ_ಅಭಿಯಾನ_೧೬ #ಮನದಲುದಿಸಿದ_ಭಾವ ಚಿತ್ತ ಭಿತ್ತಿಯಲಿ ಬಿತ್ತಿದ್ದ  ಎರಡಕ್ಷರವು ಮೊಳೆತು ನೀಡಿದೆ ಬರವಣಿಗೆಯ ಫಸಲ ಅಧ್ಯಯನದ ನೀರು ರಸಗೊಬ್ಬರವೆರೆದು ಸಲಹಿದರೆ ಅತಿ ಕಾಳಜಿಯಲಿ ಬರಹ ಸಫಲ ಬರೆದಿದ್ದೆಲ್ಲವೂ ಮಹಾಕಾವ್ಯವಾಗಬೇಕಿಲ್ಲ ಕವಿ ಕಬ್ಬಿಗರು ಬರೆದಿಟ್ಟ ಮಹಾ ಗ್ರಂಥದಂತೆ ಮನದ ಮದನಿಕೆಗೆ ಮುದವಾದರೆ ಸಾಕು ಬೇರೇನಾಸೆಯಿಲ್ಲೆನಗೆ ಜೀವ ನಿಶ್ಚಿಂತೆ ಮನದಲುದಿಸಿದ ಬಾವವ ಚಂದದಕ್ಷರದ ಚೌಕಟ್ಟಿನಲಿ ಬಂಧಿಸಿ ಪದಕ್ಕೆ ಪದ ಬೆಸೆಯಬೇಕು ಭಾವಪೂರ್ಣ ಪದಗಳಲಿ ಸದ್ಭಾವನೆಯ ತುಂಬಿ ಓದುಗರ ಮನ ಹಿಡಿದಿಡುವಂತೆ ಹೊಸೆಯಬೇಕು ಬರೆದೆನೆಂಬ ಹಮ್ಮು ಭಾದಿಸದಿದ್ದರೆ ಸಾಕು ರೆಕ್ಕೆಪುಕ್ಕ ಕಟ್ಟಿ ಆಗಸದಲಿ ಹಾರಿ ತೇಲಿ ದಾಸರ ಮನೆಯ  ದಾಸನಾನೆಂಬಂತಿರಲಿ ಮನಕೆ ಹಾಕಬೇಕು ಸೌಮ್ಯ ಸಭ್ಯತೆಯ ಬೇಲಿ ನಾ ಹೆಚ್ಚೆ0ಬ ಮದ ತಲೆಗೇರಿಬಿಟ್ಟರೆ ಕಷ್ಟ ಅಲ್ಲೇನೂ ಇರದು ಬರಹದಲ್ಲಿ ತಿರುಳು ಮೂಡಿದಕ್ಷರವೆಲ್ಲರ ಮನಸೆಳೆದರಷ್ಟೇ ಬೆಳಕು ಮೂಡಿದಂತೆ ಸಂತಸ, ಕಳೆದು ಇರುಳು     ಡಾ: B.N. ಶೈಲಜಾ ರಮೇಶ್

288 ವಿಧವೆ_ಹೆಣ್ಣಿನ_ಗೋಳು

Image
#ಚಿತ್ರಕಾವ್ಯ_ಅಭಿಯಾನ_೧೮ #ವಿಧವೆ_ಹೆಣ್ಣಿನ_ಗೋಳು (ರುಬಾಯಿ ಮಾದರಿಯಲ್ಲಿ ) ಹೆಣ್ಣಾಗಿ ಹುಟ್ಟಿದ್ದೇ ಶಾಪ ದೇವಾ ಇದೆಂಥಾ ಪರಿತಾಪ ಹುಟ್ಟಿನಿಂದ ಸಾವಿನವರೆಗೂ ಗೋಳು ನಾ ಬೇಡಿ ಬಂದಿದ್ದೇನೆ ಈ ಪಾಪ? ಬಾಲ್ಯದಲ್ಲಿ ತಾಯಿತಂದೆಯಾಸರೆ ಯೌವನಕೆ ಗಂಡನಾಸರೆ ಮುಪ್ಪಿನ ಕಾಲಕ್ಕಂತೆ ಮಕ್ಕಳು ಬಾಳೆಲ್ಲವೂ ಮತ್ತೊಬ್ಬರ ಕೈಸೆರೆ ಮಕ್ಕಳಿದ್ದರೆನೇ ನಾಕ ಬಂಜೆಯಾದರಾಯ್ತು ನರಕ ಕೈಹಿಡಿದವ ಕಣ್ಮುಚ್ಚಿದರಂತೂ ಸಾಗಿಸಲ್ಹೇಗೆ ಈ ಒಂಟಿ ಬದುಕ? ದುಡಿಮೆ ಇದ್ದರಷ್ಟೇ ಬಾಳು ಒಂದೊಪ್ಪತ್ತು ಗಂಜಿ ಕೂಳು ಕಂಡವರ ಕೈಸೆರೆಯಾದರಾಯ್ತು ಸಾಕು ಗಂಡನಿಲ್ಲದ ವಿಧವೆ ಗೋಳು ಇಷ್ಟೊ ಅಷ್ಟೋ ಇದ್ದರೆ ಆಸ್ತಿ ಬಂಧುಗಳ ತೋರಿಕೆ ಪ್ರೀತಿ ಜಾಸ್ತಿ ಆಸ್ತಿಗೆ ಬಾಂಧವರಲೇ ಕಿತ್ತಾಟ ಕಚ್ಚಾಟ ಒಬ್ಬರಿಗೊಬ್ಬೊಬ್ಬರಲೂ ಕುಸ್ತಿ ಸಾಕು ಮಾಡು ಪ್ರಭುವೇ ಈ ಜನ್ಮ ಬೇಡವೆಂದಿಗೂ ಹೆಣ್ಣಾಗುವ ಕರ್ಮ ಸ್ವಂತಿಕೆಯಿಲ್ಲದ ಬದುಕೇತಕೆ ಹೇಳು? ಇದೇ ಏನು ನಿನ್ನ ಸೃಷ್ಟಿಯ ಧರ್ಮ? ಡಾ: B.N. ಶೈಲಜಾ ರಮೇಶ್

287 ಹರಿಕಥಾಮೃತಸಾರ

Image
#ಚಿತ್ರಕಾವ್ಯ_ಅಭಿಯಾನ_೧೯ #ಹರಿಕಥಾಮೃತಸಾರ ಶ್ರೀಗುರುವಿನಡಿಗೆರಗಿ ಗಣಪತಿಗೆ ಶರಣೆಂದು ಸರಸ್ವತಿಯ ಪದತಲದಿ ವಂದಿಸುತ ಪೇಳುವೆನು ಶ್ರೀ ಹರಿಕಥಾಮೃತಸಾರ ಬನ್ನಿರೈ ಬನ್ನಿ ಪುರಜನರೆ ಬನ್ನಿರೈ ಬನ್ನಿ ಹಿರಿಜನರೆ ದೇವನೊಬ್ಬನೇ ಕೇಳಿ ವಿವಿಧ ರೂಪವ ತಾಳಿ ಅವರವರ  ಭಾವಕ್ಕೆ ಅವರವರ  ಭಕುತಿಗೆ ಅವರವರಲೋಂದಾಗಿ ಪೊರೆಯುತಿಹನವನು ಸಕಲ ಜನ ಸಾಗರವ ಅಮ್ಮನೆಂದರೆ ಲಾಲಿಸುತ ಅಪ್ಪನೆಂದರೆ ಪೋಷಿಸುತ ಗುರುವೆನ್ನಲು ಜ್ಞಾನವನಿತ್ತು ಸಖನೆನ್ನೆ ಸಕಲ ಸುಖವಿತ್ತು ಸರಿಯಾದ ಮಾರ್ಗದಲವ ಕೈಹಿಡಿದೆತ್ತಿ ಮುನ್ನಡೆಸುತ್ತಾ ಕಾಯುತಿಹನೆಲ್ಲರ ಶ್ರೀ ಕೇಶವ ಅವನು ದೂರದಲೇನಿಲ್ಲ ಇಹನವನು ಬಳಿಯಲ್ಲೇ ಮಾಯೆಯ ಮುಸುಕೆಳೆದು ನಗುತಿಹನು ಎಲ್ಲರ ನೋಡಿ ಮನವಿಟ್ಟು  ಅವನಲ್ಲೇ ಸರಿಸಿದರೆ ಮಾಯೆಯ ತೆರೆ ಕಾಣುವನವ ಶ್ರೀ ಮಾಧವ ಇದು ಬರೀ ಪುರಾಣವಲ್ಲ ಆಸ್ತಿಕ ಭಕ್ತರ ನಿಜಪ್ರಾಣ ನಂಬಿದರೆ ಜಯವುಂಟು ಜಯವಿರೇ ಭಯ ಎಲ್ಲುಂಟು ಕ್ಷಣಕ್ಷಣವೂ ನಂಬಿದವರ ಪೊರೆವ ನಮ್ಮ ಬಾಂಧವ ಬನ್ನಿರೆಲ್ಲರವನ ಭಜಿಸುವ ಡಾ: B.N. ಶೈಲಜಾ ರಮೇಶ್

286 ಹಾರುತಿದೆ_ಮನದಹಕ್ಕಿ

Image
#ಚಿತ್ರಕಾವ್ಯ_ಅಭಿಯಾನ_೨೦ #ಹಾರುತಿದೆ_ಮನದಹಕ್ಕಿ ಇದು ಹುಚ್ಚುಕೋಡಿ ಮನಸು  ಹಾರುತಿದೆ ಹೊತ್ತು ನೂರಾರು ಕನಸು ನನಸಾಗುವುದಾವುದೋ ಕಾಣೆ ಬರೀ ಆಸೆಗಳ ಮೂಟೆ ಹೊತ್ತ ಜಾಣೆ ಹದಿ ಹರೆಯದ ಹುಚ್ಚುಕುದುರೆ ತೇಲುತಿದೆ ಮನ ಕುಡಿದಂತೆ ಮದಿರೆ ತಣಿಯಬಹುದೇ ಕಾಮನೆಗಳ ದಾಹ ಹುಚ್ಚೆದ್ದು ಕುಣಿಯುತ್ತಿದೆ ಕಾಣದ ಮೋಹ ಬಯಕೆಗಳ ರೆಕ್ಕೆ ಕಟ್ಟಿ ಬಾನಿಗೆ ಹಾರಿ ಸಿಗದ ಮರೀಚಿಕೆಯ ಬೆನ್ನತ್ತಿ  ಏರಿ ಘಾಸಿಯಾಯ್ತು ಮನಕೆ ಬೆಂಕಿಯ ಸಂಗ ಬಲಿಯಾಯ್ತು ಆಸೆಯ ಬೆಂಕಿಗೆ ಪತಂಗ ಕಟ್ಟಿಕೊಳಬೇಕು ಮತ್ತೆ ಚಂದ ಬದುಕು ಹಿಂದೆ ಬರದಂತೆ ಕಾಯುತ ಅಂಥ ದುಡುಕು ಮನವ ಹಿಡಿದಿಟ್ಟು ಬಿಗಿದು ಭದ್ರ ಕೋಟೆಯೊಳಗೆ ನುಸುಳದಂತೆ ಆಸೆ ಕಾರ್ಮೋಡ ಮನದೊಳಗೆ ಭಾವ ಬಲವಾದರೆ ಮನ ಉಕ್ಕಿನ ಕೋಟೆ ಯಾವುದೂ ಸುಳಿಯಲಾರದು ಹುಡುಕುತ ಬೇಟೆ ನೋವಿರಲಿ ನಲಿವಿರಲಿ ಅದು ನನ್ನ ಹಣೆಬರಹ ಹುಡುಕಿ ಹೋಗಲಾರೆ ಇನ್ನು ಅಲೆಮಾರಿ ತರಹ ಡಾ: B.N. ಶೈಲಜಾ ರಮೇಶ್

285 ನಡೆ_ಶಾಲೆಗೆ

Image
#ಚಿತ್ರಕಾವ್ಯ_ಅಭಿಯಾನ_21 #ನಡೆ_ಶಾಲೆಗೆ ವಿದ್ಯೆ ಕಲಿಯಬೇಕು ಜಾಣೆ ನಡೆ ಶಾಲೆಗೆ ಕಲಿತು, ಬೆಳೆದು ಬೆಳಕಾಗಬೇಕು  ಬಾಳಿಗೆ ವಿದ್ಯೆಯೊಂದೇ ಯಾರೂ ಕದಿಯಲಾರದ ಸಂಪತ್ತು ಕಲಿಕೆಯಿಲ್ಲದ ಬಾಳು ತರುವುದು ದೌರ್ಭಾಗ್ಯ ಆಪತ್ತು ಇಂದಿನ ಕಲಿಕೆ ನಾಳಿನ ಬಾಳಿಗೆ ಬೆಳಕು ಅಜ್ಞಾನ ತೊಡೆವ ವಿಜ್ಞಾನ ಬೇಕೇ ಬೇಕು ಅಕ್ಷರ ಜ್ಞಾನವಿದ್ದರೇ ಗೌರವ ಈ ಸಮಾಜದಲಿ ನಿರಕ್ಷರ ಕುಕ್ಷಿಗಳು ಮಿಂದೇಳುವರು ಅವಮಾನದಲಿ ಸಾಕ ನಾವು ಬಳಲಿದ್ದು ವಿದ್ಯೆ ಕಲಿಯದೆ ನಿತ್ಯಸೋಲು ಸಾಮಾನ್ಯಜ್ಞಾನದ ಅರಿವಿಲ್ಲದೆ ನೀನೂ ನಮ್ಮಂತಾಗುವುದು ಬೇಡ ಮಗಳೇ ವಿದ್ಯೆಯಿಲ್ಲದ ಬಾಳು ಶುನಕನಂತೆ ನಿತ್ಯ ರಗಳೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅಜ್ಞಾನವ ತೊಲಗಿ ಜ್ಞಾನದ ಬೆಳಕು ಹರಿದಂತೆ ಸಮಯೋಚಿತ ನಿರ್ಧಾರಕ್ಕೆ ಬುದ್ಧಿಯಿರಬೇಕು ವಿದ್ಯೆಯೇ ಸಾಧನೆಗೆ ಪೂರಕ ಬೆಳಗುವುದು ಬದುಕು ನಡೆ ಮಗಳೇ ಶಾಲೆಗೆ ಬಿಟ್ಟು ಬರುವೆ ಕಲಿತು ಗಳಿಸು ನೀನು ಸುಜ್ಞಾನವೆಂಬ ಒಡವೆ ಅಲ್ಲಿಲ್ಲ ಜಾತಿಮತ ಮೇಲುಕೀಳಿನ ಅಂತರ ಶಾಲೆ ದೇವಮಂದಿರದಂತೆ ಮಾಡು ನಮಸ್ಕಾರ ಡಾ: B.N. ಶೈಲಜಾ ರಮೇಶ್

284. ಕಳಚಿಬಿದ್ದಿತೇ_ಮುಖವಾಡ

Image
#ಚಿತ್ರಕಾವ್ಯ_ಅಭಿಯಾನ_೨೬ #ಶೀರ್ಷಿಕೆ #ಕಳಚಿಬಿದ್ದಿತೇ_ಮುಖವಾಡ ಕಳಚಿಬಿದ್ದಿತೇ ತೊಟ್ಟ ಮುಖವಾಡ ಈ ಜಗದ ಸಂತೆ ಬಯಲಿನಲಿ ಅದೆಷ್ಟು ಅಹಂಕಾರದ ತೆವಲಿತ್ತು ದೇಹದ ಈ ಕಂತೆ ಬೊಂತೆಯಲಿ ಸಜ್ಜನಿಕೆಯ ಸೋಗು ಎಷ್ಟು ದಿನವಿದ್ದೀತು? ಅಪ್ರಮಾಣಿಕತೆ ಹೊರಬರಲೇಬೇಕು ನೈಜತೆಯ ಮುಚ್ಚಿಟ್ಟು ಬದುಕಲಾದೀತೆ? ಒಂದು ದಿನ ಬಣ್ಣ ಬಯಲಾಗಬೇಕು ಮರುಳು ಮಾಡುತ್ತೆಲ್ಲರನು ಸತ್ಯ ಮುಚ್ಚಿಡಲಾದೀತೆ ಹೇಳು ಕೊನೆಗೆ ಎಲ್ಲವೂ ಬಯಲಾಯ್ತು ತಿಳಿ ಮೂರು ದಿನವೀ ಬಾಳು ವಿಧವಿಧದ ವೇಷವ ಧರಿಸಲಾದೀತೆ? ಜಗದೊಡೆಯ ಮೇಲಿಹನು ನೋಡುತ ವಿಧಿ ಬರಹವನ್ನು ಬದಲಿಸಲಾದೀತೇ? ಸೃಜಿಸಿದವನ ಆಜ್ಞೆಯನು ಮೀರುತಾ ಇನ್ನಾದರೂ ತಿಳಿ ಮನುಜ ನೀತಿ ನಿಯಮ ಭುವಿಗೆ ಬಂದದ್ದು ಆ ದೇವನ ಅರಿಯಲು ಸತ್ಯಮಾರ್ಗದಲಿ ನಡೆವುದೇ ಸದ್ಧರ್ಮ ಆಗಲೇ ಸೇರಲಾದೀತು ಅವನ ಮಡಿಲು ಮುಖವಾಡ ತರವಲ್ಲ ಜೀವ ಶಾಶ್ವತವಲ್ಲ  ನೀರ ಮೇಲಿನ ಗುಳ್ಳೆಯಂತೆ ಬದುಕು ಅವನ ಕರೆ ಬಂದೊಡನೆಯೇ ಪಯಣ ಇದ್ದಷ್ಟು ದಿನ ನಮ್ಮ ನಡೆ ಜಗಮೆಚ್ಚಬೇಕು      ಡಾ: B.N.ಶೈಲಜಾ ರಮೇಶ್

283 ನಾನಾಗಲಾರೆ_ಬುದ್ಧ

Image
#ಚಿತ್ರಕಾವ್ಯ_ಅಭಿಯಾನ_೨೭ #ನಾನಾಗಲಾರೆ_ಬುದ್ಧ ಮಧ್ಯರಾತ್ರಿಯಲೆದ್ದು ಮಡದಿಮಕ್ಕಳ ಬಿಟ್ಟು ರಾಜಭೋಗವ ತೊರೆದು ಹೊರಟನಂತೆ ಸಿದ್ಧಾರ್ಥ.! ಅವನಿಗೇನಿತ್ತೋ ಹಾಗೆ ಜೀವನದಲ್ಲಿ ಅನಾದರ.! ಕಾಷಾಯ ಧರಿಸಿದ ಮಾತ್ರಕ್ಕೆ ಬದಲಾದೀತೆ ಪ್ರಪಂಚ.? ಪ್ರತಿದಿನವೂ ಯುದ್ಧವೇ ಹೆಣ್ಣು ಹೊನ್ನು ಮಣ್ಣಿಗಾಗಿ.! ಬುದ್ಧನೊಬ್ಬ ತೊರೆದೆದ್ದರೆ ನಿಂತೀತೇ... ಕದನ? ಜಗವೆಲ್ಲವೂ ದ್ವೇಷ _ ಅಸೂಯೆಗಳ ಸದನ.! ತಿದ್ದಿ ತೀಡಲೆದ್ದು ಹೊರಟ ಬುದ್ಧ ಉಪದೇಶಿಸಿದ ಶಾಂತಿಮಂತ್ರ! #ಆಸೆಯೇ_ದುಃಖಕ್ಕೆ_ಮೂಲ ಅವನೊಬ್ಬ ತೊರೆದರಾದೀತೆ ಆಸೆ? ಮತ್ತದೇ ಅತಿಯಾಸೆಯ ಸುತ್ತ ಗಿರಕಿ ಹೊಡೆಯುತ್ತಿದೆ ಜಗ.! ಅರಿಷಡ್ವರ್ಗಗಳ ಅವನೊಬ್ಬ ಗೆದ್ದ.! ಜಗವೇನನ್ನೂ ಗೆಲ್ಲಲಿಲ್ಲ.! ರಾಜಭೋಗದ ನಡುವೆಯೂ ಮಾಡಬಹುದಿತ್ತಲ್ಲವೇ ಜನಸೇವೆ.! ಉಪದೇಶಿಸಬಹುದಿತ್ತು ಸದ್ಭುದ್ಧಿ.! ಸಂಸಾರದಲ್ಲಿದ್ದೆ ಗೆಲ್ಲಬಹುದು ಮನವ.! ಮಾಯೆಯ ತೆರೆ ಸರಿಸಬಹುದು.! ಇದ ತೋರಿಸಿದವರಿಹರು ಹಲವಾರು.! ನನ್ನದೂ ಅವರಂತೆಯೇ ನಡೆ.! ಸಂಸಾರಸಾಗರದಲಿ ಈಸಲು ಸಿದ್ಧ.! ಹಾಗಾಗಿ... ನಾನಾಗಲಾರೆ ಬುದ್ಧ.!!       ಡಾ: B.N. ಶೈಲಜಾ ರಮೇಶ್ 

282 #ಯಶೋಧರೆಯ_ಮನದಳಲು

Image
#ಚಿತ್ರಕಾವ್ಯ_ಅಭಿಯಾನ_೨೭ ಕ್ಕೆ ನನ್ನ ಇನ್ನೊಂದು ಕವನ😊 #ಯಶೋಧರೆಯ_ಮನದಳಲು ನಡುರಾತ್ರಿಯಲ್ಲೆದ್ದು ನಡೆದೆಯೆಲ್ಲಿಗೆ ದೊರೆ.? ನಾನಾಗಿದ್ದೇನೇನು ನಿನಗೆ ಹೊರಲಾರದ ಹೊರೆ.? ನೀ ಎದ್ದು ಹೊರಟಾಗ ನೆನಪಾಗಲಿಲ್ಲವೇ ನಾನು.? ಮುದ್ದುಕಂದನ ನಗುಮೊಗವು ಮರೆತೆಯೇನು.? ನಡುದಾರಿಯಲ್ಲಿ ಸಾವು ಕಂಡು ಖಿನ್ನನಾದವಗೆ ಕಾಣಲಿಲ್ಲವೇ ನನ್ನ ಮನದ ಸಾವಿನ ಬಗೆ? ಬಂಧುಬಾಂಧವ, ಸುಖಸಂಪತ್ತಿನಿಂದ ದೂರಾದರೆ ದೂರಾದೀತೇ ಸಾವುನೋವಿನಳಲು ಹೇಳು ದೊರೆ? ನೀ ಕರುಣಾಮೂರ್ತಿಯೆಂದು ನನಗೆ ಗೊತ್ತು ಆ ಕರುಣೆಯ ಕಡಲಿಗೆ ನಾನಾದೆನೇ ತೊತ್ತು? ಅನ್ಯರ ಹಂಗಿಲ್ಲದಂತೆ ನೀನೇನೋ ಹೊರಟೆ ಅರಮನೆಯ ಹಂಗಿನ ತೊತ್ತಾಗಿ ನನ್ನೇಕೆ ಬಿಟ್ಟೆ? ಸಹಜವಲ್ಲವೇ ವೃದ್ಧಾಪ್ಯ ನಿತ್ಯ ಸುಖ ದುಃಖ ರೋಗ ರುಜಿನ ಮರಣಗಳು ಆ ದೇವನ ಲೆಕ್ಕ.! ಜಯಿಸಿದೆಯೇನು ದುಃಖ ಸಂತಾಪಗಳ ಗೊಡವೆ.? ತಂದೆಯೇನು  ಸಾವಿಲ್ಲದ ಮನೆಯ ಸಾಸಿವೆ.? ಸಮಚಿತ್ತವಿರಬೇಕು ಕೇಳು ಸಾಧನೆಯ ಹಾದಿಗೆ ಸನ್ಯಾಸವೇ ಉತ್ತರವಲ್ಲ ಮೂಡಿ ಬರುವ ಪ್ರಶ್ನೆಗೆ.! ನೀನಿಲ್ಲಿದ್ದೂ ಎಲ್ಲಕ್ಕೂ ಮಿಗಿಲಾಗಿ ಸಾಧಿಸಬಹುದಿತ್ತು ನಿನ್ನ ಸಾಧನೆಗೆ ಪೂರಕವಾಗಿ ನನ್ನ ನೆರವಿರುತ್ತಿತ್ತು.! ಇರಬಹುದಿತ್ತೊಟ್ಟಿಗೆ  ವಿರಕ್ತಿಯ ಪಥದಲ್ಲಿ ಬರುತ್ತಿದ್ದೆ ನಾನೂ ನಿನ್ನೊಟ್ಟಿಗೇ ಸಾಧನೆಯಲ್ಲಿ ಅಶಕ್ತರ ಸೇವೆಗೈಯ್ಯಲು ನಾನೂ ನೆರವಾಗುತ್ತಿದ್ದೆ ನಿನ್ನ ಬಾಳ ದಾರಿಗೆ ಬೆಳಕೀವ ಹಣತೆಯಾಗುತ್ತಿದ್ದೆ.! ಮುಕ್ತವಾಗಿಸಬಹುದಿತ್ತು ಸಂಸಾರದಲ್ಲಿದ್ದೇ ದುಃಖವನು ಇಲ್ಲಿದ್ದೇ

281 ಹೀಗೇಕೆ?

Image
#ಚಿತ್ರಕಾವ್ಯ_ಅಭಿಯಾನ_೨೮ #ಹೀಗೇಕೆ? ಚಿಗುರಿಸಿ ಆಸೆಯ ಬಳ್ಳಿಯನು ಮರೆತು ಹೊರಟಳೆಲ್ಲಿಗೆ.? ಹನಿಸದೆ ಪ್ರೀತಿ ಧಾರೆಯನು ತೊರೆದು ನಡೆದಳೆ ಮೆಲ್ಲಗೆ.? ಬರೆದಿದ್ದಳು ಕಣ್ಣೋಟದಲ್ಲೇ ಒಲವ ಬಾಳಿಗೆ ಮುನ್ನುಡಿ ಜಾರಿ ಹೋದಳು ಕೈಗೆ ಸಿಗದೆ ತೋರಿ ಬಾಳಪುಟಕೆ ಬೆನ್ನುಡಿ ಮೋಡಿ ಮಾಡಿತ್ತೆನಗವಳ ತೂಗುವ ಮುಂಗುರಳ ಲಾಸ್ಯ ಬರೆದಳೇ ಕೇಶದಲ್ಲೆ ಕೊನೆಗೆ ವಿರಹದುರಿಗೆ ಭಾಷ್ಯ ಓರೆ ನೋಟದಲ್ಲೆ ಕರೆದು ಹಾಡಿದ್ದಳು ಸವಿ ರಾಗವ ಕೋರೆ ಮಾತಲ್ಲೆ ಕೆಣಕಿ ಜರಿದಳು ಅನುರಾಗವ ಜೇನೆಂದು ಭ್ರಮಿಸಿದ್ದೆ ನಿನ್ನ ಪ್ರೇಮದಕ್ಕರೆ ನುಡಿಯ ಹಾವಂತೆ ವಿಷವುಣಿಸಿ ಇರಿದೆಯೇಕೆನ್ನೆದೆಯಾ.? ಡಾ: B.N. ಶೈಲಜಾ ರಮೇಶ್

280 ತಂಗಾಳಿಯ_ತಂಪಿನಲಿ_ಸಿಹಿಗನಸು_ಕಾಣುತಲಿ

Image
#ಚಿತ್ರಕಾವ್ಯ_ಅಭಿಯಾನ_೨೮ #ತಂಗಾಳಿಯ_ತಂಪಿನಲಿ_ಸಿಹಿಗನಸು_ಕಾಣುತಲಿ ಇಳಿ ಸಂಜೆಯ ಈ ತಂಪಿನಾ ಸಮಯ ಮನದಲಿ ನಿಂತ ನಿನ್ನ ನೆನೆಯುತಿರುವೆ ಇನಿಯ ನೆನೆದೊಡನೆ ಏನೋ ಸುಖ ತನುವಲ್ಲಿ ಕಂಪನ ಹೊಸಬಗೆಯ ಅನುಬಂಧ ತಂದ ರೋಮಾಂಚನ ಆಹ್ಲಾದಕರ ಈ ಮುಸ್ಸಂಜೆ ನಿನ್ನೊಲವ ಗಾನ ಅನುರಣಿಸಿ ಎಲ್ಲೆಡೆ ನುಡಿಸಿದೆ ತೋ0ತನನ ಮನಸೆಳೆವ ಆ ಮೋಹಕ ನಗೆಯ ನೆನಪಲ್ಲಿ ತಂಗಾಳಿಯ ತಂಪಿನಲಿ ಸಿಹಿಗನಸು ಕಾಣುತಲಿ ಆಗಸದ ಬೆಳ್ಮುಗಿಲಲ್ಲಿ ತೇಲಿ ಹೋದಂತೆ ಭಾಸ ಕೈಗೆಟುಕಿದಂತೆ ಕಂಡೆ ಚಂದ್ರಮನ ಮಂದಹಾಸ ಕಂಡ ಕನಸನೆಲ್ಲ ನನಸಾಗಿಸುವ ಬಯಕೆಯೀಗ ನೀನಿಲ್ಲದೇ ಸಗ್ಗದಲೂ ಸೊಗವಿಲ್ಲ ಬಾರೋ ಬೇಗ ಉಕ್ಕಿ ಹತಿಯುತ್ತಿದೆ ಮನದಲ್ಲಿ ಪ್ರೀತಿ ಚಿಲುಮೆ ಅನುರಾಗದಾನಂದ ಹೊತ್ತು ತಂದ ನಿನ್ನೊಲುಮೆ ಜುಳುಜುಳನೆ ಹರಿದಿದೆ ನದಿಯಂತೆ ನಿನ್ನೆಡೆಗೆ ನಿನ್ನೊಡಲ ಮಡಿಲಲ್ಲಿ ಲೀನವಾಗುವ ಬಯಕೆಗೆ         ಡಾ: B.N. ಶೈಲಜಾ ರಮೇಶ್

279 ಅವನೊಲಿಯುವ_ಪರಿ

Image
#ಚಿತ್ರಕಾವ್ಯ_ಅಭಿಯಾನ_೨೯ #ಶೀರ್ಷಿಕೆ #ಅವನೊಲಿಯುವ_ಪರಿ ಆಗಸಕೆ ಕೈಚಾಚಿದರೆ ನಿಲುಕೀತೇ ಗಗನ.? ಕೈಗೆಟುಕಬೇಕೆಂದರೆ ಶತ ಪ್ರಯತ್ನ ಬೇಕಣ್ಣ ನಿಂತಲ್ಲಿಂದಲೇ ಎಲ್ಲ ಬೇಕೆಂದು ಕೈಚಾಚಲು ಅದೇನು ತೊತ್ತೇ ಕೇಳಲು ನಿನ್ನ ಅಹವಾಲು.? ಪ್ರಯತ್ನವಿದ್ದರೇ ತಾನೇ ಸುಖ ಭೋಗಗಳು ಸ್ವಂತ ತೀವ್ರತರ ಪರಿಶ್ರಮವಿರೇ ಅಂಗೈಲೇ ದಿಗಂತ ಬರೆದೇ ಕನಸು ಕಂಡರಾಗದು ಎದ್ದೇಳು ಮರುಳ ಕುಳಿತುಂಡವರು ಬಾಳಿ ಬದುಕಿ ಹೆಸರಾದದ್ದು ವಿರಳ.! ಹೆಜ್ಜೆಯಿಡು ನನಸಾಗುವೆಡೆಗೆ ನೇಯ್ದ ಕನಸನು ಶ್ರದ್ಧೆಯಿಡು ಮಾಳ್ಪ ಕಾರ್ಯದಲಿ ಊರಿ ಮನಸನು ಸಂಘ ಜೀವನ ನಮ್ಮದು ಅತಿಶ್ರೇಷ್ಠ ಮಾಡು ಸತ್ಸಂಗ ನಾನೇ ಹೆಚ್ಚೆಂಬ ಗರ್ವಭಾವದಲಿರೆ ಅಭಿಮಾನ ಭಂಗ.! ಎಸೆ ಕಾಮಕ್ರೋಧ  ಮತ್ಸರ ಅರಿಷಡ್ವರ್ಗದ ಕಸವ ಬಿತ್ತಿ ಬೆಳೆ ಕರುಣೆ ಪ್ರೇಮ ಮಮತೆ ವಾತ್ಸಲ್ಯದ ವನವ ಸಚ್ಚಾರಿತ್ರ್ಯವೇ ಸತ್ಫಲ ನೀಡುವ ಕಲ್ಪವೃಕ್ಷ ಕಾಣೋ ಸನ್ನಡತೆಯೇ ಆ  ದೇವನೊಲಿಸುವ ಪರಿ ಮಾಣೋ.! ✍️ ಡಾ: B.N. ಶೈಲಜಾ ರಮೇಶ್

277 ರೂಪದ_ಗತ್ತು

Image
#ಚಿತ್ರಕಾವ್ಯ_ಅಭಿಯಾನ_೩೩ #ರೂಪದ_ಗತ್ತು ಚಂಚಲ ಚಿತ್ತ ಅಡ್ಡಾಡಿ ಅತ್ತಿತ್ತ ಮತ್ತಲ್ಲಿಗೇ ಬಂತು ಅಹಮಿನ ಸುತ್ತ..!! ಕಲ್ಪನೆಯ ಮೊತ್ತ ಗಿರಕಿ ಹೊಡೆಯುತ್ತ ಚೆಲುವ ಚಂದ್ರಿಕೆ ತಾನೆಂದೆನುತ್ತಾ..!! ನಾ ಸುರದ್ರೂಪಿ ಉಳಿದವರೆಲ್ಲ ಪಾಪಿ ಸೌಂದರ್ಯದೇವತೆ ಅತಿ ಶೀಘ್ರ ಕೋಪಿ..!! ದರ್ಪಣದ ತುಂಬ ತನ್ನದೇ ಬಿಂಬ ಅಣಕಿಸಿದಂತಾಯ್ತು ಆ ಪ್ರತಿಬಿಂಬ..!! ಚಂದ್ರ ಮೊಗದ ಬಾಲೆ ನೋಡ ನೋಡುತ್ತಲೇ ಕರಗಿತ್ತವಳ ರೂಪ ಏನಿದರ ಲೀಲೆ..!! ಸುಕ್ಕುಗಟ್ಟಿತು ಮುಖ ಕಪ್ಪಿಟ್ಟಿತು ರೂಪ ಬೆತ್ತಲಾಯಿತು ಎಲ್ಲ ಇಳಿದಿತ್ತು ಪ್ರಾಯ..!!  ರೂಪಮದದ ಗತ್ತೆಲ್ಲ ನಿನ್ನ ಸ್ವತ್ತೇನಲ್ಲ ಕಾಲ ಮಾಗಿದ ಮೇಲೆ ಜಾರಿ ಹೋಗುವುದೆಲ್ಲ..!!     ಡಾ:B.N. ಶೈಲಜಾ ರಮೇಶ್

276 #ಎಷ್ಟು_ಬದಲಾಗಿದೆ_ಕಾಲ..!!

Image
#ಚಿತ್ರಕಾವ್ಯ_ಅಭಿಯಾನ_೩೪ #ಎಷ್ಟು_ಬದಲಾಗಿದೆ_ಕಾಲ..!! ಎಷ್ಟು ಬದಲಾಗಿದೆ ಕಾಲ ಮೊದಲಿನ ತರಹ ಏನೂ ಇಲ್ಲ ಬರೀ ತೋರಿಕೆ ದೇಶಭಕ್ತಿ.! ಅಂತರಾಳದಲ್ಲಿ ಬರೀ ಕಶ್ಮಲ.! ಬರಿದೆ ಶಾಂತಿಯ ಮುಖವಾಡ ಒಡಲು ದ್ವೇಷಾಸೂಯೆಯ ಅಖಾಡ.!! ತೂರಿಬಿಟ್ಟರೇ ನನ್ನ ಶಾಂತಿಮಂತ್ರ.? ಭಾರತಿಯ ರಕ್ಷಣೆ ಯಾರಿಗೂ ಬೇಡ.! ಹೆಸರಿಗಷ್ಟೇ ಸೀಮಿತ ಗಾಂಧಿ ವರ್ಷಕ್ಕೊಮ್ಮೆ ನೆನೆವ ಪ್ರವಾದಿ.! ಅನುಸರಿಸುವರಾರಿಲ್ಲ ಪಥವ ಕಷ್ಟವಿಲ್ಲದೆ ಏರಲ್ಹವಣಿಕೆ ಗಾದಿ..!! ಎಲ್ಲಿ ಹೋಯಿತು ಸತ್ಯ.? ಮೆರೆದಾಡುತ್ತಿದೆ ಅಸತ್ಯ.! ಆಡುವ ಮಾತಿನ ಮೇಲಿಲ್ಲ ನಿಗಾ... ಕೇಡೆಣಿಸುವುದೇ ಪ್ರತಿನಿತ್ಯ..!! ದೇಶದ ಸಂಪತ್ತು ತಿಂದು ತೇಗಿದರು ಬಡವರು ಬಡವರಾಗೇ ಉಳಿದರು ಸುವ್ಯವಸ್ಥೆಯ ನೀಡಲಾಗದೇ ಲೂಟಿ ಹೊಡೆವ ಲಂಪಟರು..!! ಕಂಡಿದ್ದೆ ರಾಮರಾಜ್ಯದ ಕನಸು ಮಾಡಲಾಗಲಿಲ್ಲವೆನಗೆ ನನಸು ರಾಮಾಯಣದ ರಾವಣನಂತೆಲ್ಲರು.!! ಎಂದಿಗೂ ಆಗಲಾರದೇನೋ ನನಸು.! ಇದು ನಾ ಕಟ್ಟಿದ ಹಿಂದೂಸ್ಥಾನವೇ.? ನೋಡಲಾಗದೆನಗೆ ಓ ಪ್ರಭುವೇ.! ಭಾರತಿಯ ಕಣ್ತುಂಬಿಕೊಳ್ಳಲು ಬಂದಿದ್ದೆ ಸಹಿಸಲಾರೆನಕಟಾ ನಾನಿನ್ನು  ನಡೆವೆ..!! ಡಾ: B.N.ಶೈಲಜಾ ರಮೇಶ್

275. ಕಣ್ಮುಚ್ಚಿ ಕುಳಿತರೆ ಸಾಧುವೇ?

Image
#ಚಿತ್ರಕಾವ್ಯ_ಅಭಿಯಾನ_೩೫ #ಕಣ್ಮುಚ್ಚಿ_ಕುಳಿತರೆ_ಸಾಧುವೇ? ಮಾಯಾ ಮೋಹ ಮನವ ಬೆಸೆದಿರಲು ಕಾಮ ಕ್ರೋಧ ಮದದ ಬೆಳೆ ಹುಲುಸಾಗಿ ತನು ಮನದಲ್ಲೆಲ್ಲ ಬೆಳೆದು ನಿಂತಿರಲು ಮನುಜ, ನೀನಾಗಲಹುದೇ ಹೇಳು ತ್ಯಾಗಿ? ಆಸೆಯ ಬಳ್ಳಿ ಹಬ್ಬಿ ನಡೆಗೆ ತೊಡಕಾಗಿ ನಾನುನಾನೆಂಬ  ಅಹಮಿನ ಹೆಮ್ಮರದಲಿ ಸ್ವಾರ್ಥಸೂಯೆಗಳ ಫಲ ಸಂವೃದ್ಧಿಯಿರೆ ನೀನಾಗಲಹುದೇ ಮನುಜ ಸಜ್ಜನ ಶರಣ ಕಣ್ಮುಚ್ಚಿ ಕುಳಿತರೆ ಸಾಧುವಾಗಲಾರೆ.! ಲಿಂಗ ಧರಿಸಿದರೇನು ಜಂಗಮನಾಗಲಾರೆ.! ರುದ್ರಾಕ್ಷಿ ಧರಿಸಿದರೆ ಶಿವಸ್ವರೂಪಿಯೇ? ಬಾಹ್ಯಾಡಂಬರದಲ್ಲಿಲ್ಲ ಸಾಧುತ್ವ ಕೇಳು ದೊರೆ ಹದಗೊಳಿಸು ಮನವ ನಿತ್ಯಸತ್ಯದಲಿ ಬಿತ್ತಿ ಶ್ರೀನಾಮವ ಶಿವನ ನೆನೆಯುತಲಿ ಆಷಾಢಭೂತಿತನ ಬಿಟ್ಟು ವಿಭೂತಿ ಧರಿಸು.! ಸದಾ ಶ್ರೀ ಶುಭನಾಮವನು ಸ್ಮರಿಸು ಚಿತ್ತವಿರಿಸು ಅವನಲ್ಲಿ ಭಕ್ತಿ ಮಾರ್ಗದಲಿ ಸ್ಥಾಪಿಸವನನ್ನು ನಿನ್ನ ಹೃದಯದಾಸನದಲಿ ಬಯಕೆಗಳ ಬಿಸುಟು ಬಾಚಿ ತಬ್ಬಿದರವನ ಕೈಹಿಡಿದೆತ್ತನೇ ದೇವ ಶ್ರೀಶೈಲನಾಥ ನಿನ್ನ    ಡಾ: B.N.ಶೈಲಜಾ ರಮೇಶ್

274. ಸತ್ಯಂ ಶಿವಂ ಸುಂದರಂ

Image
#ಚಿತ್ರಕಾವ್ಯ_ಅಭಿಯಾನ_೩೫ #ಸತ್ಯಂ_ಶಿವಂ_ಸುಂದರಂ ಅಲೆಯದಿರು ಮನವೇ ಅಲ್ಲಲ್ಲಿ ಬೆಸಗೊಳ್ಳಬೇಕು ಶಿವನಡಿಯಲ್ಲಿ ಏಕೆ ಹೀಗೆ ಚಂಚಲ ಗೊಳ್ಳುತ್ತಿರುವೇ? ಶಿವನೇ ಸರ್ವವೆಂಬುದ ಮರೆತಿತುವೆ.! ಎದ್ದೇಳು.. ಕಾಲು ಕಂಬವನೆ ಮಾಡು ನಿನ್ನ ಹೃದಯವನ್ನು ಮಂದಿರವ ಮಾಡು ಶಿರವಾಗಲಿ ಸುಂದರ ಹೊನ್ನ  ಶಿಖರ ನೆಲೆಗೊಳ್ಳಲಿ ಅಲ್ಲಿಯೇ ಚಂದ್ರಶೇಖರ.! ಸತ್ಯವೆಂಬುವವನವನೇ ದಿವ್ಯಾತ್ಮ..! ಶಿವನಲ್ಲೇ ನೆಲೆಗೊಳಿಸು ನಿನ್ನಾತ್ಮ...! ಸುಂದರವಾಗಬಹುದಾಗ ಬಾಳು...! ಸತ್ಯಂ  ಶಿವಂ  ಸುಂದರಂ... ಕೇಳು.!        ಡಾ:B.N. ಶೈಲಜಾ ರಮೇಶ್

273, ಶರಣರ ಸಂಗ ಹಾಲ್ಜೇನು

Image
#ಚಿತ್ರಕಾವ್ಯ_ಅಭಿಯಾನ_೩೫ #ಶರಣರ_ಸಂಗ_ಹಾಲ್ಜೇನು ಶರಣರ ಸಂಗವೇ ಹಾಲ್ಜೇನು ಮಾಡು ಸತ್ ಶರಣರ ಸಂಗ ಶರಣರ ವಚನವೇ ದಾರಿದೀಪ ಅನುಸರಿಸಿ ತೊಡೆ ಮನದ ತಾಪ ಶರಣರೇ ಶಿವಸ್ವರೂಪಿ ಜಂಗಮ ಭಕ್ತಿಯಿಂದಲಿ ಮಾಡು ಪ್ರಣಾಮ ಶರಣರ ನುಡಿಯೇ ಗೀತಾಮೃತ.! ಕೇಳಿದರೀ ಜನ್ಮ ಧನ್ಯ ಅನವರತ.! ಶರಣರಂತೆ ಶಿವನಲ್ಲಿ ಮನವನಿಟ್ಟು ಅರಿತುಕೊ ನಿತ್ಯ ಸತ್ಯದ ಗುಟ್ಟು..! ಶರಣರಂತೆಯೇ ಸತ್ಯವ ಹುದುಕು ಕತ್ತಲಳಿದು ಬೆಳಕಾಗದೇ ಬದುಕು.? ಭಜಿಸು ಸದಾ ಶಿವನ ನಾಮವ ನೀಡಲಾರನೇ ಅವ ಸುಜ್ಞಾನವ.! ಬೆಳೆಸು ದಿವ್ಯಜ್ಞಾನದ ವೃಕ್ಷವ ನೀಡುವುದು ನಿಜದೇ ಸತ್ಫಲವ.! ಉದಯಿಸಲಿ ಸುಜ್ಞಾನದ ಸೂರ್ಯ ಹರಡುತ್ತ ಎಲ್ಲೆಡೆ ದಿವ್ಯ ಪ್ರಭೆಯ.! ತೊಲಗಲಿ ಅಜ್ಞಾನದ ಮೌಢ್ಯದ ತೆರೆ ಬೆಳಗಲೆಲ್ಲೆಲ್ಲೂ  ಶಾಂತಿಯ ಕಾಂತಿ ಪ್ರಭೆ.!         ಡಾ : B.N. ಶೈಲಜಾ ರಮೇಶ್

263 ಶಿಶುಗೀತೆ... ಕೂಸುಮರಿ

Image
#ಶಿಶು_ಗೀತೆ #ಶೀರ್ಷಿಕೆ  #ಕೂಸುಮರಿ_ಪಾಪುಮರಿ ತಾತಾ, ತಾತಾ ಬನ್ನಿ ಆಡೋಣ ಕುದುರೆ ಸವಾರಿ ಮಾಡೋಣ ಕುದುರೆಯಂತೆ ಬಾಗಿರಿ ಬೇಗ ಸವಾರನಂತೆ ಹತ್ತುವೆ ನಾನೀಗ ಅಯ್ಯೋ ಕಂದ ನನಗೆ ವಯಸ್ಸಾಯ್ತು ಸೊಂಟ ಬೆನ್ನು ನೋಡು ಬಗ್ಗೋಯ್ತು ನಿನ್ನ ಸರಿ ಸಮ ಆಡಲಾರೆನು ನಾ ಬಿಟ್ಟುಬಿಡೋ ಮಗು ಈ ಮುದುಕನ್ನ ಊಂ ಊಂ ಊಂ ಆಗದು ತಾತ ನೀವ್ ಕೇಳಲೇ ಬೇಕು ನನ್ನಯ ಮಾತ ಒಬ್ಬಂಟಿ ನಾನೀಗ ಈ ಮನೆಯಲ್ಲಿ ಆಡುವರಾರಿಹರು ನನ್ನ ಜೊತೆಯಲ್ಲಿ ಅಪ್ಪ ಅಮ್ಮಆಫೀಸಿಗೋದರೆ ಮನೆಯಲ್ಲಿ  ನಾವು ಮೂವರೇ ಆಟಕೆ ಯಾರೂ ಗೆಳೆಯರು ಇಲ್ಲ ನೀವಿಬ್ಬರೇ ತಾನೇ ನನಗೆಲ್ಲಾ ಅಜ್ಜಿ ಸೇರಿಬಿಟ್ಟರೆ ಅಡುಗೆಮನೆ ಉಳಿದವರು ನೀವ್ ಒಬ್ಬರೇ ತಾನೇ ನನಗೂ ತಿಂದೂ ಮಲಗಿ ಸಾಕಾಯ್ತು ಆಟ ಆಡುವ ಆಸೆ ಆತಿಯಾಯ್ತು ಅಪ್ಪನಿದ್ಧಿದ್ದರೆ ನನ್ನಯ ಜೊತೆಗೆ ಬರುತ್ತಿರಲಿಲ್ಲ ನಾನು ನಿಮ್ಮವರೆಗೆ ಅಮ್ಮನಿಗಂತೂ ಬಿಡುವೇ ಇಲ್ಲ ಪ್ರೀತಿಯ ಕಾಣದೆ ಬಡವಾದೆನಲ್ಲ😢 ಅಯ್ಯೋ ಕಂದ ನನ್ನ ಮುದ್ದುಮರಿ  ಅಳದಿರು ಆಡೋಣ ಕೂಸುಮರಿ ಇಲ್ಲವೇನೋ ಕಂದ ನಾ ಮುದ್ದಿಸಲು ನಿನ್ನಿಷ್ಟದಂತೆಲ್ಲ ಆಟ ಆಡಿಸಲು ಬಾರೋ ಕಂದ ಹತ್ತು ಬೆನ್ನೇರಿ ಮಾಡಿಸುವೆ ಬಾ ಆನೆ ಸವಾರಿ ಆನೇ ಬಂತೊಂದಾನೆ, ಯಾವೂರಾನೆ ನನ್ನ ಚಿನ್ನ ಆಡುವ ಮುದಿಯಾನೆ...     ಶೈಲಜಾ ರಮೇಶ್