Posts

ನನ್ನ ಕವಿತೆ

#ದತ್ತ_ಸಾಲು #ಅತ್ತ_ಕೋಣೆಯಲ್ಲಿ_ಬೆಳಕು ಅತ್ತ ಕೋಣೆಯಲಿ ಬೆಳಕು ಆದರಿತ್ತ ಮನದಲಿ ಕತ್ತಲು ಕತ್ತಲೆಕೂಪದಿಂದೊರಬರದಿರೆ ಹರಡೀತೇ ಬೆಳಕು ಸುತ್ತಲೂ.? ಮನವಿದು ಯೋಚನೆಗಳ ತವರು ಯೋಜಿಸಬೇಕು ಹೊರಬರಲು ನಿರಂತರ ಚಿಂತೆಯಲಿ ಸಿಲುಕೆ ಚಿಂತನೆಯು ಭಾರವಹುದು ಹೊರಲು.! ಸದ್ವಿಚಾರಗಳಡಿಯಲಿ ಚಿಂತನೆ ಸದ್ಭಾವದಲಿ ವಿಷಯ ಮಂಡನೆ ಸತ್ಕರ್ಮಗಳಲಿ ಕರ್ಮನಿಯೋಜನೆ ನೀಡಬಹುದು ಬೆಳಕ ರಂಜನೆ..! ಕೋಣೆಯಲುರಿವ ಬೆಳಕಿನಂದದಲಿ ಮನದೊಳಗೂ ಪ್ರಭೆಯ ಕಾಣಲು ಅರಿಷಡ್ವರ್ಗಗಳ ಬಲು ದೂರವಿರಿಸಿ ಅವನ ಭಜಿಸಲು ಹರ್ಷದ ಹೊನಲು.!      ಡಾ : ಶೈಲಜಾ ರಮೇಶ್ #ವಾರದ_ಕವನ #ಕವನವಾಗು_ಬಾ_ಭಾವವೇ ಕಳೆದುಹೋಯಿತೆಲ್ಲಿ ಪುಟಿಯುತ್ತಿದ್ದ ಭಾವ ಪಟಪಟನೆ ಸಿಡಿಯುತ್ತಿದ್ದ ಮಾತಿಗೂ ಅಭಾವ ಮಿಡಿಯುತ್ತಿದ್ದ ಮನಸಲೂ ಏಕೋ ಕತ್ತಲು ಆವರಿಸಿದಂತೆನಿಸುತ್ತಿದೆ ಮೋಡ ಸುತ್ತಮುತ್ತಲೂ ಗುಪ್ತವಾಗಡಗಿಹ ಸುಪ್ತ ಭಾವಗಳು ಸತ್ತಂತೆ ಮಲಗಿತೇಕೆ ಮರೆತು ತನ್ನಿರುವು ಹೊರಹಾಕದಿದ್ದರೆ ಮನದ ತುಮುಲ ಜೀವನ ಹೇಗಾದೀತು ಹೇಳು ಸರಳ.? ಅಕ್ಷರಕ್ಷರವ ಪೋಣಿಸಿ ಪದವಾಗಿಸಲು ಪದಕ್ಕೆ ಪದವ ಬೆಸೆದು ಕಾವ್ಯವಾಗಿಸಲು ಸುತ್ತಮುತ್ತ ಜರುಗುತ್ತಿರುವ ವಿಷಯವೇ ಹೆಣೆದು ಚಂದದ ಕವನವಾಗಿಸು ಬಾ ಭಾವವೇ.. ಡಾ: B.N ಶೈಲಜಾ ರಮೇಶ್        ( ಶೈಲೂ...)  #ಆತ್ಮವಿಶ್ವಾಸ ಆತ್ಮವಿಶ್ವಾಸವಿರಲು ಬಾಳಿನಲ್ಲಿ ಚಿಗುರದೇನು ಬದುಕು ಹೇಳು.? ಬದುಕಲೇ ಬೇಕೆನ್ನುವ ಛಲವಿರಲು ಉಸಿರು ತುಂಬದೇನು ಹೇಳು.? ಮೇಲ...

ಒತ್ತಕ್ಷರ ಕವನ

#ಒತ್ತಕ್ಷರ_ಕವನ #ಚ್ಚ ಸ್ವಚ್ಛಮನದ, ಕರುಣೆ ಕಾಳಜಿಯೇ ಮೂರ್ತಿವೆತ್ತ ಅಚ್ಚುಮೆಚ್ಚಿನ, ಸಿಹಿಮನದ ಸ್ನೇಹಿತ ನನ್ನವನು ಬಿಚ್ಚು ಮನದವ, ಲವಲೇಶವೂ ಅಹಂಇಲ್ಲದ ಸಚ್ಚಾರಿತ್ರ್ಯದ ಮನುಜ ಶ್ರೀರಾಮನಂಥವನು.! ಇಚ್ಛೆಯಲ್ಲದ ಕಾರ್ಯವನು ಮಾಡದಿದ್ದರೂ ತುಚ್ಛವಾಗಿ ಯಾವುದನ್ನೂ ಸಹ ಕಾಣದವನು ಸ್ವೇಚ್ಛಾ ಜೀವನವನ್ನು  ದ್ವೇಷಿಸಿದರೂನೂ ಸ್ವಇಚ್ಛೆಗೆ ಅತೀ ಗೌರವ ಕೊಡುವವನು..! ಅನ್ಯರಲ್ಲಿ ಕಿಚ್ಚೆಬ್ಬಿಸುವ ಸುರಸುಂದರಾಂಗ ಜೊತೆಗಿರಲು ಬೆಚ್ಚನೆಯ ಭಾವ ಉದ್ದೀಪಿಸುವನು ಸತ್ಯವಂತನಿವ ಮುಚ್ಚುಮರೆಯಿಲ್ಲದ ವ್ಯಕ್ತಿ ಹೆಚ್ಚೇನು ಹೇಳಲಿ, ಇವನೆನ್ನ ಬಾಳು ಬೆಳಗಿದವನು.!     ಡಾ: B.N. ಶೈಲಜಾ ರಮೇಶ್

ಕವನಗಳು

ಕರಿಮೋಡ ಚದುರಿತ್ತು ಉದಯರವಿಯ ಕಂಡು ನಭಕೆ ಹೊನ್ನೆಳೆಯ ಚಿತ್ತಾರ ಬಿಡಿಸಿದ್ದ ಭಾಸ್ಕರನು ಬಂದು ಹಸಿರೊದ್ದು ಮಲಗಿದ್ದ ಭೂತಾಯಿ ಮೈಮೇಲೆ ಹೊನ್ನನೀರ ತುಳುಕಿಸಿ ನಲಿಸಿತ್ತು ಭಾಸ್ಕರನ ಲೀಲೆ ಬಿರಿಯಲವಣಿಸಿದ್ದ ಮೊಗ್ಗೆಲ್ಲ ಹೂವಾಗಿ ಅರಳಿ ನಗುತಾ ಪಸರಿಸೆಲ್ಲೆಡೆ  ಸೌಗಂಧ ಕೋರುತಿದೆ ದಿನಕರಗೆ ಸ್ವಾಗತಾ           ಶೈಲೂ.... ಯಾರೂ ಇಲ್ಲ ಕೊನೆಗೆ ಜಗನ್ನಾಟಕ ಸೂತ್ರದಾರನ ಜೊತೆಗೆ ಯಾರಿತ್ತ ಶಾಪವೋ ಕಾಣೆ ಜೊಂಡಿನಿಂದಾಯ್ತೇ ಕೊನೆ ಉಂಗುಷ್ಟ ದಲ್ಲಿತ್ತೇ ಪ್ರಾಣ ಅರಿತು ಹೂಡಿದನೆ ಬೇಡ ಬಾಣ ಅವತಾರಾಂತ್ಯದ ಕುರುಹೇನು.? ಕೊನೆಗಾಣಿಪ ಪರಿ ಇದೇನು.? ಅಗಣಿತ ಅಕ್ಷೋಹಿಣಿ ಬಳಗ ಮೆಚ್ಚಿ ವರಿಸಿದ್ದ ನಾರೀಒಡ್ಡೋಲಗ ಯಾರೊಬ್ಬರೊಬ್ಬರೂ ಕಾಯದೇ ಅಳಿವಿನಂಚಲಿ ನಿಂತಿತೇ ವಂಶವೇ ಜಗನ್ನಾಟಕ ಸೂತ್ರದಾರ ಆಡಿಸಿದ್ದೆ ಆಟ ನಿನ್ನನುಸಾರ ತಂತ್ರ ಒಳತಂತ್ರಗಳ ರಣಸೂತ್ರ ಧರ್ಮೋದ್ಧಾರಕೆ ನಿನ್ನೀಪಾತ್ರ ಕೊನೆಯಂಕದ ಪರದೆಯಿದೇನು.? ಇಂತೀ ನಿರ್ಗಮನ ಸರಿಯೇನು.? ಅವತಾರದ ಕಾರ್ಯ ಮುಗಿದಿತ್ತೇ.? ಕಡೆಗಾಣಿಸಿದವರ ಬಗ್ಗೆ ನೋವಿತ್ತೇ ?         ಶೈಲೂ..... ಯಶೋಗಾಥೆ ************ ಕಂಡ ಕನಸಿನ ಸಾಕಾರ ದುಡಿಮೆಯೇ ಅದರಾಧಾರ ಕನಸು ನನಸಾಗಿಸಲು ಬೇಕು ಪರಿಶ್ರಮವೆಂಬ ಬೆಳಕು ಆಂತರ್ಯದಲಿ ಹಚ್ಚಿಡಬೇಕು ಇಚ್ಛಾಶಕ್ತಿಯ ನಂದಾದೀಪ ಬೆಳಕಾದೀತು ಬದುಕ ಹಾದಿ ಕೈಹಿಡಿದು ನಡೆಸುವ ದಾರಿದೀಪ ನಮ್ಮೊಳಿತಿಗೆ  ನಮಗೆ ನಾವೇ ಆಗಬೇಕು ಚೈತನ್...

ಕವನ

[1/6/2020, 10:16 am] Dr. B. N. Shylaja Ramesh: #ಕಥಾ_ಸರಪಳಿ        ನಾನು ಬರೆದ ಅಪೂರ್ಣ ಕಥೆಯನ್ನು ನನ್ನ ಮೂರುಜನ ಸ್ನೇಹಿತೆಯರು ಸೇರಿ ಪೂರ್ತಿಗೊಳಿಸಿರುವ ಕಥೆ.....     ಎರಡನೇ ಕಂತನ್ನು ಶ್ರೀಮತಿ ಸುಧಾ ತೇಲ್ಕರ್ ಮೂರನೇ ಕಂತನ್ನು ಶ್ರೀಮತಿ ಶೈಲಜಾ ಶೈಲಿ ನಾಲ್ಕನೇ ಕಂತನ್ನು ಶ್ರೀಮತಿ ಪ್ರವೀಣಾ ದೇಶಪಾಂಡೆ ಯವರು ಬರೆದಿದ್ದಾರೆ.         ನನ್ನ ಮನದಲುದಿಸಿದ  ಭಾವಕ್ಕೆ  ತಮ್ಮೆಲ್ಲರ ಸುಂದರ ಭಾವವನ್ನೆರೆದು ಪೂರ್ಣಗೊಳಿಸಿದ ಕಥೆ.. ಇನ್ನು ನಿಮ್ಮೆಲ್ಲರ ಮುಂದೆ.... ಓದಿ...ಹಾರೈಸಿ.... ಪ್ರೋತ್ಸಾಹಿಸಿ.... ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ... #ಕಥೆ.... #ನೆನಪಿನಾಳದಲ್ಲಿ..... ಮೇಡಂ..... ದ್ವನಿ ಬಂದ ದಿಕ್ಕಿನತ್ತ ನೋಡ್ದೆ... ಯಾರೂ ಕಾಣಿಸಲಿಲ್ಲ..  ಸುತ್ತಲೂ ನೋಡ್ದೆ... ಗಾಂಧಿಬಜಾರ್ನ ಆ ಜನ ಜಂಗುಳಿಯಲ್ಲಿ.. ಯಾರು ಯಾರನ್ನ ಕರೀತಾರೋ..  ಬೇರೆ ಯಾರನ್ನೋ ಇರಬೇಕು ಅಂದ್ಕೊಂಡು ನನ್ನ ವ್ಯಾಪಾರದಲ್ಲಿ ಮಗ್ನಳಾದೆ.   ಬೆಳ್ಳಿಗ್ಗೆ ಆದ್ರೆ  ಯುಗಾದಿ ಹಬ್ಬ...  ಹೂವು ಹಣ್ಣು ಮಾವಿನಸೊಪ್ಪು ಬೇವಿನಸೊಪ್ಪು ತೊಗೋಬೇಕು,  ಯಜಮಾನ್ರು  ಆಫೀಸ್ ನಿಂದ ಬರೋದು ಲೇಟಾಗುತ್ತೆ ಅಂದದ್ದಕ್ಕೆ ಸರಿ ನಾನೇ ಹೋಗಿ ತರೋಣ ಅಂತ ಬಂದಿದ್ದೆ.    ಯಪ್ಪಾ  ಏನು ಸುಟ್ಟು ಮಾರ್ತಾರೆ ಜನ... ಮಾವಿನಸೊಪ್ಪು ಬ...

ಕವನ ಸಂಕಲನ

#ಕಥಾ_ಸರಪಳಿ        ನಾನು ಬರೆದ ಅಪೂರ್ಣ ಕಥೆಯನ್ನು ನನ್ನ ಮೂರುಜನ ಸ್ನೇಹಿತೆಯರು ಸೇರಿ ಪೂರ್ತಿಗೊಳಿಸಿರುವ ಕಥೆ.....     ಎರಡನೇ ಕಂತನ್ನು ಶ್ರೀಮತಿ ಸುಧಾ ತೇಲ್ಕರ್ ಮೂರನೇ ಕಂತನ್ನು ಶ್ರೀಮತಿ ಶೈಲಜಾ ಶೈಲಿ ನಾಲ್ಕನೇ ಕಂತನ್ನು ಶ್ರೀಮತಿ ಪ್ರವೀಣಾ ದೇಶಪಾಂಡೆ ಯವರು ಬರೆದಿದ್ದಾರೆ.         ನನ್ನ ಮನದಲುದಿಸಿದ  ಭಾವಕ್ಕೆ  ತಮ್ಮೆಲ್ಲರ ಸುಂದರ ಭಾವವನ್ನೆರೆದು ಪೂರ್ಣಗೊಳಿಸಿದ ಕಥೆ.. ಇನ್ನು ನಿಮ್ಮೆಲ್ಲರ ಮುಂದೆ.... ಓದಿ...ಹಾರೈಸಿ.... ಪ್ರೋತ್ಸಾಹಿಸಿ.... ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ... #ಕಥೆ.... #ನೆನಪಿನಾಳದಲ್ಲಿ..... ಮೇಡಂ..... ದ್ವನಿ ಬಂದ ದಿಕ್ಕಿನತ್ತ ನೋಡ್ದೆ... ಯಾರೂ ಕಾಣಿಸಲಿಲ್ಲ..  ಸುತ್ತಲೂ ನೋಡ್ದೆ... ಗಾಂಧಿಬಜಾರ್ನ ಆ ಜನ ಜಂಗುಳಿಯಲ್ಲಿ.. ಯಾರು ಯಾರನ್ನ ಕರೀತಾರೋ..  ಬೇರೆ ಯಾರನ್ನೋ ಇರಬೇಕು ಅಂದ್ಕೊಂಡು ನನ್ನ ವ್ಯಾಪಾರದಲ್ಲಿ ಮಗ್ನಳಾದೆ.   ಬೆಳ್ಳಿಗ್ಗೆ ಆದ್ರೆ  ಯುಗಾದಿ ಹಬ್ಬ...  ಹೂವು ಹಣ್ಣು ಮಾವಿನಸೊಪ್ಪು ಬೇವಿನಸೊಪ್ಪು ತೊಗೋಬೇಕು,  ಯಜಮಾನ್ರು  ಆಫೀಸ್ ನಿಂದ ಬರೋದು ಲೇಟಾಗುತ್ತೆ ಅಂದದ್ದಕ್ಕೆ ಸರಿ ನಾನೇ ಹೋಗಿ ತರೋಣ ಅಂತ ಬಂದಿದ್ದೆ.    ಯಪ್ಪಾ  ಏನು ಸುಟ್ಟು ಮಾರ್ತಾರೆ ಜನ... ಮಾವಿನಸೊಪ್ಪು ಬೆವಿನಸೊಪ್ಪಿಗೂ  ಈ ಪಾಟಿ ಬೆಲೆಯಾ.. ರೇಟು ಕೇಳಿ ತಲ...

ಕವನ ಸಂಗ್ರಹ

[22/4/2019, 5:50 pm] Dr. B. N. Shylaja Ramesh: ಹಾರೈಕೆ... ಅರಿಕೆ *************** ಕೋರುವೇ ಶುಭಹಾರೈಕೆ ಹೊಸಬಾಳಿಗಡಿಯಿಟ್ಟ ದಿನಕೆ ನಲಿವು ಗೆಲುವಲಿ ಜೊತೆಯಾದ ನವ ಬಾಂಧವ್ಯ ಬೆಸೆದ ಕ್ಷಣಕೆ ಒಲಿದ ಮನವೆರಡು ಕಲೆತು ಸಂಸಾರ ನೊಗವ ಹೊತ್ತು ಬಾಳ ಹಾದಿಯ ಪಯಣ ಜೊತೆಗೂಡಿ ನಡೆದ ದಿನಕೆ ಸರಸವಿರಸಗಳನು ಗೆದ್ದು ನವಿರಾದ ಪ್ರೀತಿಯ ಹೊದ್ದು ಬಾಳ ನೌಕೆಯ ಪಯಣ ನಲಿದು ಸಾಗುವ.ದಿನಕೆ ಶೈಲೂವಿನ ಬಯಕೆಯಿದು ನಲ್ಮೆಯ ಹಾರೈಕೆಯಿದು ದುಃಖ ದುಮ್ಮಾನಗಳ ಮರೆತು ತುಂಬಿ ಬರಲಿ ಹೊಸತು ಸಂಭ್ರಮದ ದಿನವಿಂದು ದುಪ್ಪಟ್ಟಾಗಲಿ ಹರುಷ ಸವಿಯಬೇಕು ಪ್ರೀತಿ ಜೇನು ಅನಂತವಾಗಲಿ ರಸನಿಮಿಷ           ಶೈಲೂ..... [22/4/2019, 6:36 pm] Dr. B. N. Shylaja Ramesh: ಪ್ರೇಮ ಸಂಭಾಷಣೆ **************** ಎನಿತು ಚಂದವೇ ಸಖಿ ಮುಗ್ಧಸ್ನಿಗ್ದ ಸೌಂದರ್ಯ ನಕ್ಕರೂ ಕಾಣದಂತ ಮುಗುಳುನಗೆಯ ಮಾಧುರ್ಯ ಹೊಗಳಿದ್ದು ಸಾಕು ಕೃಷ್ಣ ನೀನೇ ಸೌಂದರ್ಯದ ಗಣಿ ನಿನ್ನ ಕಣ್ಣ ಕಾಂತಿಯಲ್ಲೇ ಅಡಗಿಹನು ದಿನಮಣಿ ಇಲ್ಲ ರಾದೇ ನೀನೇ ಚಂದ ಕದಪುಗಳಲಿ ಇಹ ಚಂದಿರ ಅರ್ಧ ತೆರೆದ ನಯನದಲೇ ಇಹುದು ತಾರಾ ಮಂದಿರ ಬಾಯಲ್ಲೇ ಅಡಗಿಸಿರುವೆ  ಚತುರ್ದಶ ಭುವನಲೋಕ ಅರಿಯಲಿ ಹೇಗೇಳು ನಿನ್ನ ಕೃಷ್ಣ ನಾನಾದೆ ಮೂಕ ಬಿಡು ಬಿಡು ಅದೆಲ್ಲ ಸಖಿ ಅರಿಯಲಾಗದ ನಿಗೂಢ ನಿನ್ನ ಸೌಂದರ್ಯ ಸೆಳೆತಕೆ ವಶವಾಗಿ ನಾ ಧಿಗ್ಮೂಢ ತುಂಟತನದ ನೋಟದಲ್ಲೇ ಸೆಳೆದು ಬಿಟ್ಟೆ ಮನಸ್ಸಸನ್ನ ಹೇಳಲೇನಿದೆ ...