ನನ್ನ ಕವಿತೆ
#ದತ್ತ_ಸಾಲು #ಅತ್ತ_ಕೋಣೆಯಲ್ಲಿ_ಬೆಳಕು ಅತ್ತ ಕೋಣೆಯಲಿ ಬೆಳಕು ಆದರಿತ್ತ ಮನದಲಿ ಕತ್ತಲು ಕತ್ತಲೆಕೂಪದಿಂದೊರಬರದಿರೆ ಹರಡೀತೇ ಬೆಳಕು ಸುತ್ತಲೂ.? ಮನವಿದು ಯೋಚನೆಗಳ ತವರು ಯೋಜಿಸಬೇಕು ಹೊರಬರಲು ನಿರಂತರ ಚಿಂತೆಯಲಿ ಸಿಲುಕೆ ಚಿಂತನೆಯು ಭಾರವಹುದು ಹೊರಲು.! ಸದ್ವಿಚಾರಗಳಡಿಯಲಿ ಚಿಂತನೆ ಸದ್ಭಾವದಲಿ ವಿಷಯ ಮಂಡನೆ ಸತ್ಕರ್ಮಗಳಲಿ ಕರ್ಮನಿಯೋಜನೆ ನೀಡಬಹುದು ಬೆಳಕ ರಂಜನೆ..! ಕೋಣೆಯಲುರಿವ ಬೆಳಕಿನಂದದಲಿ ಮನದೊಳಗೂ ಪ್ರಭೆಯ ಕಾಣಲು ಅರಿಷಡ್ವರ್ಗಗಳ ಬಲು ದೂರವಿರಿಸಿ ಅವನ ಭಜಿಸಲು ಹರ್ಷದ ಹೊನಲು.! ಡಾ : ಶೈಲಜಾ ರಮೇಶ್ #ವಾರದ_ಕವನ #ಕವನವಾಗು_ಬಾ_ಭಾವವೇ ಕಳೆದುಹೋಯಿತೆಲ್ಲಿ ಪುಟಿಯುತ್ತಿದ್ದ ಭಾವ ಪಟಪಟನೆ ಸಿಡಿಯುತ್ತಿದ್ದ ಮಾತಿಗೂ ಅಭಾವ ಮಿಡಿಯುತ್ತಿದ್ದ ಮನಸಲೂ ಏಕೋ ಕತ್ತಲು ಆವರಿಸಿದಂತೆನಿಸುತ್ತಿದೆ ಮೋಡ ಸುತ್ತಮುತ್ತಲೂ ಗುಪ್ತವಾಗಡಗಿಹ ಸುಪ್ತ ಭಾವಗಳು ಸತ್ತಂತೆ ಮಲಗಿತೇಕೆ ಮರೆತು ತನ್ನಿರುವು ಹೊರಹಾಕದಿದ್ದರೆ ಮನದ ತುಮುಲ ಜೀವನ ಹೇಗಾದೀತು ಹೇಳು ಸರಳ.? ಅಕ್ಷರಕ್ಷರವ ಪೋಣಿಸಿ ಪದವಾಗಿಸಲು ಪದಕ್ಕೆ ಪದವ ಬೆಸೆದು ಕಾವ್ಯವಾಗಿಸಲು ಸುತ್ತಮುತ್ತ ಜರುಗುತ್ತಿರುವ ವಿಷಯವೇ ಹೆಣೆದು ಚಂದದ ಕವನವಾಗಿಸು ಬಾ ಭಾವವೇ.. ಡಾ: B.N ಶೈಲಜಾ ರಮೇಶ್ ( ಶೈಲೂ...) #ಆತ್ಮವಿಶ್ವಾಸ ಆತ್ಮವಿಶ್ವಾಸವಿರಲು ಬಾಳಿನಲ್ಲಿ ಚಿಗುರದೇನು ಬದುಕು ಹೇಳು.? ಬದುಕಲೇ ಬೇಕೆನ್ನುವ ಛಲವಿರಲು ಉಸಿರು ತುಂಬದೇನು ಹೇಳು.? ಮೇಲ...