ಕವನಗಳು

 ಹಾರೈಕೆ... ಅರಿಕೆ
***************
ಕೋರುವೇ ಶುಭಹಾರೈಕೆ
ಹೊಸಬಾಳಿಗಡಿಯಿಟ್ಟ ದಿನಕೆ
ನಲಿವು ಗೆಲುವಲಿ ಜೊತೆಯಾದ
ನವ ಬಾಂಧವ್ಯ ಬೆಸೆದ ಕ್ಷಣಕೆ

ಒಲಿದ ಮನವೆರಡು ಕಲೆತು
ಸಂಸಾರ ನೊಗವ ಹೊತ್ತು
ಬಾಳ ಹಾದಿಯ ಪಯಣ
ಜೊತೆಗೂಡಿ ನಡೆದ ದಿನಕೆ

ಸರಸವಿರಸಗಳನು ಗೆದ್ದು
ನವಿರಾದ ಪ್ರೀತಿಯ ಹೊದ್ದು
ಬಾಳ ನೌಕೆಯ ಪಯಣ
ನಲಿದು ಸಾಗುವ.ದಿನಕೆ

ಶೈಲೂವಿನ ಬಯಕೆಯಿದು
ನಲ್ಮೆಯ ಹಾರೈಕೆಯಿದು
ದುಃಖ ದುಮ್ಮಾನಗಳ ಮರೆತು
ತುಂಬಿ ಬರಲಿ ಹೊಸತು

ಸಂಭ್ರಮದ ದಿನವಿಂದು
ದುಪ್ಪಟ್ಟಾಗಲಿ ಹರುಷ
ಸವಿಯಬೇಕು ಪ್ರೀತಿ ಜೇನು
ಅನಂತವಾಗಲಿ ರಸನಿಮಿಷ

          ಶೈಲೂ.....

 ಪ್ರೇಮ ಸಂಭಾಷಣೆ
****************
ಎನಿತು ಚಂದವೇ ಸಖಿ
ಮುಗ್ಧಸ್ನಿಗ್ದ ಸೌಂದರ್ಯ
ನಕ್ಕರೂ ಕಾಣದಂತ
ಮುಗುಳುನಗೆಯ ಮಾಧುರ್ಯ

ಹೊಗಳಿದ್ದು ಸಾಕು ಕೃಷ್ಣ
ನೀನೇ ಸೌಂದರ್ಯದ ಗಣಿ
ನಿನ್ನ ಕಣ್ಣ ಕಾಂತಿಯಲ್ಲೇ
ಅಡಗಿಹನು ದಿನಮಣಿ

ಇಲ್ಲ ರಾದೇ ನೀನೇ ಚಂದ
ಕದಪುಗಳಲಿ ಇಹ ಚಂದಿರ
ಅರ್ಧ ತೆರೆದ ನಯನದಲೇ
ಇಹುದು ತಾರಾ ಮಂದಿರ

ಬಾಯಲ್ಲೇ ಅಡಗಿಸಿರುವೆ 
ಚತುರ್ದಶ ಭುವನಲೋಕ
ಅರಿಯಲಿ ಹೇಗೇಳು ನಿನ್ನ
ಕೃಷ್ಣ ನಾನಾದೆ ಮೂಕ

ಬಿಡು ಬಿಡು ಅದೆಲ್ಲ ಸಖಿ
ಅರಿಯಲಾಗದ ನಿಗೂಢ
ನಿನ್ನ ಸೌಂದರ್ಯ ಸೆಳೆತಕೆ
ವಶವಾಗಿ ನಾ ಧಿಗ್ಮೂಢ

ತುಂಟತನದ ನೋಟದಲ್ಲೇ
ಸೆಳೆದು ಬಿಟ್ಟೆ ಮನಸ್ಸಸನ್ನ
ಹೇಳಲೇನಿದೆ ಮಾಧವಾ
ನೀನೇ ನನ್ನ ಮನದನ್ನ

             ಶೈಲೂ......

 ಪ್ರೇಮ.ಸಂಭಾಷಣೆ
*****************

ನುಡಿಸುವುದು ಹೇಗೆ
ಕೃಷ್ಣ ನಿನ್ನ ಕೊಳಲು
ನುಡಿಸಿ ಮರೆಯಬೇಕಿದೆ
ನನ್ನ ಮನದ ಅಳಲು

ಹಿಡಿಯಲ್ಹೇಗೆ ಕೈಯಲಿ
ಯಾವುದು ತುದಿ ಮೊದಲು
ತುಟಿಯಲಿಟ್ಟು ಉಸಿರು ತುಂಬಿ
ಹೇಳಿಕೊಡು ನುಡಿಸಲು

ಶ್.!! ಸುಮ್ಮನಿರು ರಾಧೇ
ಇಲ್ಲ ಸಮಯ ನುಡಿಯಲು
ಸ್ವರ್ಗ ಸುಖವ ನೀಡುತಿದೆ
ಪ್ರೇಮ ತುಂಬಿದ ಮಡಿಲು

ತುಂಬಿ ನನ್ನ ಕಣ್ಣಲೇ ನಿನ್ನ
ಮರೆವೆ ಜಗದ ಪರಿವೆಯ
ಸ್ಫೂರ್ತಿ ನೀನೇ ಮುನ್ನಡೆಸಲು
ಶಕ್ತಿ ನೀನೇ ಅರಿತೆಯಾ

ಸಾಕು ಬಡಿವಾರ ಬಿಡು
ಬರಿದೇ ಮಾತಿನ ಮಲ್ಲ
ನುಡಿಸಲ್ಹೇಗೆ ಹೇಳಿಕೊಡು
ಊದಬೇಕು ಬಿದಿರುಕೊಳಲ

ನನ್ನೆದೆಯ ಮಾತುಗಳ
ಹಾಡಾಗಿಸಿ ನುಡಿಸಿ
ತುಂಬ ಬೇಕು ಪ್ರೇಮಭಕ್ತಿ
ನಿನ್ನೊಲುಮೆಯಲಿ ಕರಗಿ

ನುಡಿಸಲಾರೆ ಬಿಡು ಸಖಿ
ಹೊಮ್ಮುವ ರಾಗ ನೀನೇ
ಕರದಲಿ ನವಿರಾಗಿ ಹಿಡಿದ
ಬಿದಿರು ಕೊಳಲು ನಾನೇ

ನಿನ್ನ ಕೈಯ ಹಿಡಿತದಲಿ
ಮೆರೆವ ಕೊಳಲು ನಾನು
ಮಾಂತ್ರಿಕ ಸ್ಪರ್ಶದಲೇ
ಮಿಡಿವ ನಾದ ನೀನು

ನಾನು ನೀನು, ನೀನು ನಾನು
ಸೇರಿದರೇ ನವರಾಗ ತಾನೇ
ವೇಣು ನಾನು ನಾದ ನೀನು
ನುಡಿಸಿದರೇ ಸ್ವರ್ಗ ತಾನೇ

             ಶೈಲೂ......


 ಬರೆಯಲೇ  ಗೆಳೆಯ 
ನಿನಗಾಗಿ ಕವಿತೆ
ತುಂಬಿ ಅದರಲ್ಲಿ
ಸಿರಿಸ್ನೇಹ ಮಮತೆ
ಬರದಿರಲಿ ಎಂದೂ
ಸ್ನೇಹಕ್ಕೆ ಕೊರತೆ
ಸಂಭ್ರಮದ ಬದುಕಲಿ
ಬೆಳಗಲಿ ಘನತೆ

 
    ನನ್ನ ಆತ್ಮ ಸಂಗಾತಿ - ಪುಸ್ತಕ
**************************

ಪುಸ್ತಕಗಳ ಸಂಬಂಧ
ಮಸ್ತಕಕೆ ಅನುಬಂಧ
ಜ್ಞಾನ ದಾಹವ ತಣಿಸೋ
ಅಮೃತ ಕಲಶವೇ ಪುಸ್ತಕ

ಬಾಳಿಗೆ ಒಡನಾಡಿಯಿದು
ನೋವು.ದುಃಖವ ಮರೆಸಿ
ನಿತ್ಯ ರಸದೌತಣವೀವ
ಆತ್ಮ ಸಂಗಾತಿ ಪುಸ್ತಕ

ಅರಿವಿನ ಹರಿವು ನಿತ್ಯ
ಮೌಢ್ಯ ಹರಿಸುತ ಸತ್ಯ
ಜ್ಞಾನ.ಸೆಲೆಯ ಮೂಲ
ಅಜ್ಞಾನದ ತೆರೆ ನಿರ್ಮೂಲ

ನೋವು ನಲಿವಿಗೆ ಗೆಳೆಯ
ತುಂಬುತ ಸದಾಶಯ
ತಿಳಿಸುತ್ತ  ಅಕ್ಕರದ ತಿಳುಹು
ಹೊತ್ತಿಗೆಯ ಮಹತ್ವದರಿವು

ಇರಲೆಲ್ಲರಿಗೂ ಪುಸ್ತಕ ಜ್ಞಾನ
ತೊಡೆಯುತ್ತ ಮೌಢ್ಯ ಅಜ್ಞಾನ
ಮೂಡಲಿ ಸಾಹಿತ್ಯ ಜಿಜ್ಞಾಸೆ
ಅದುವೇ ಜ್ಞಾನದ ಪರಿಭಾಷೆ

             ಶೈಲೂ....

 ಎಲ್ಲವೂ  ನೀನೇ
*************

ನನ್ನೊಲವ ಮಂದಿರದಿ
ನೆಲೆಸಿಹ ಮೂರುತಿ ನೀನೇ
ಕಿರುನಗೆಯ ಜ್ಯೋತಿಯನು
ಬೆಳಗುವವನೂ ನೀನೇ

ನನ್ನೊಲವ ಬದುಕಿನಲಿ
ಬೆಳಕಂತೆ  ತಾ  ಬಂದು
ಕಹಿಯ ಕತ್ತಲ ದೂಡಿ
ಬಾಳು ಬೆಳಗುವವ ನೀನೇ

ನನ್ನೊಲವ ಹೂ ಬನದಿ
ಬಿರಿದು ಮಲ್ಲಿಗೆಯಂತೆ
ಸೊಗವಿತ್ತು  ಹೂ ಬನಕೆ
ಗಂಧ ಪಸರಿಸಿದವ ನೀನೇ

ನನ್ನೊಲವ  ಆಗಸದಿ
ಸರಿಸಿ ದುಃಖದ ಮೋಡ
ಶುಭ್ರಾಗಸದಿ ನಗುತ
ಪ್ರಭೆ ಬೀರೋ ಸೂರ್ಯನೂ ನೀನೇ

ಅಡಗಿ  ಮೋಡದ ಹಿಂದೆ
ಇಣುಕಿಣುಕಿ  ನೋಡುತಲಿ
ಒಲವ ಅಮೃತದ ಧಾರೆ
ಸುರಿವ ಚಂದ್ರಮನೂ  ನೀನೇ

ಬಿರಿದ ಮಲ್ಲಿಗೆಯಂತ
ಮನದ ಕುಸುಮದ ಜೇನು
ಮೊಗೆಮೊಗೆದು ಹೀರುವ
ನನ್ನೊಲವ ಭ್ರಮರವು ನೀನೇ

ಒಲವ ಸುಂದರ ಬದುಕು
ತೂಗೋ ಉಯ್ಯಾಲೆಯ ತೆರದಿ
ಹಾಗೊಮ್ಮೆ ಹೀಗೊಮ್ಮೆ ಅಳಿಸಿ ನಲಿಸಿ
ಜೀಕುವವನೂ  ನೀನೇ

ನಾ  ಏನ ಹೇಳಲಿ ಕೃಷ್ಣ
ನನ್ನದಿನಿತೂ ಇಲ್ಲ,, ಜಗವ
ಮಾಯೆಯೋಳಾಡಿಸೋ
ಸರ್ವೋತ್ತಮನೂ  ನೀನೇ

             ಶೈಲೂ....

 ಹೇಳಲಿ ಹೇಗೆ.?
*************

ಹೇಳಲಿದೆ ಬೇಕಾದಷ್ಟು
ಹೇಳಲಾರದ ಬಿಕ್ಕಟ್ಟು
ಹೇಳಲೆಂತು ಮನದ ಮಾತು
ಹೇಳೆ ನೋವಾದರೆಂತು?

ಹೇಳುವಾಸೆ ಎಲ್ಲ ನಿನಗೆ
ಹೇಳಿದರೆ ಹೇಗೋ ನಿನ್ನ ಬಗೆ
ಹೇಳದೇನೋ ತಳಮಳ
ಹೇಳಲೆಂತರಿಯಲಿ ನಿನ್ನೊಡಲ

ಹೇಳೆಂದರೂ ನಾ ಹೇಳಲೇನು?
ಹೇಳದಿರೆ ತಪನ ಬಲ್ಲೆಯೇನು.?
ಹೇಳದೆಯೂ ನೀನರಿಯಬೇಕು
ಹೇಳಿ ಕೇಳೇಕೆ ತಿಳಿಯಬೇಕು?

ಹೇಳಿ ಬಂದೆಯೇನು ಒಳಗೆ
ಹೇಳದೇ ಹೋದ್ದದ್ದೇಕೆ ಹೊರಗೆ
ಹೇಳಲಿಲ್ಲವೇನೂ ವಿಷಯ?
ಹೇಳೆ ಸಂತಸ ನೀ ಬಲ್ಲೆಯಾ

ಹೇಳಲೇನು ಮನದ ಮಾತ
ಹೇಳಲ್ಹೇಗೆ ಕಾರಣವಿಲ್ಲದೆ ಖಚಿತ
ಹೇಳಬೇಕೆಂದರೂ ಬರಲೊಲ್ಲದು
ಹೇಳಿದ್ಯಾತರ ಗೊಂದಲ ಮನದ್ದು

            ಶೈಲೂ.....

ಹೊಲೆದಾಟ

 ಹೊಲೆದಾಟ ಸುಲಭದ್ದಲ್ಲ
ಸರಿಸುತ್ತಿರಬೇಕು ವಸ್ತ್ರವ ಮೆಲ್ಲ
ಮೈಮರೆತರೆ  ಕೈಯೊಳಗೆ ಸೂಜಿ
ಚಾಕಚಕ್ಯತೆಯಿರೆ ಉತ್ತಮ ದರ್ಜಿ

ವಸ್ತ್ರದ ಮೇಲೆ ವಿವಿಧ ವಿನ್ಯಾಸ 
ಬಣ್ಣದ ಬಳಪದಿಂದ ಚಿತ್ರೀತ ನ್ಯಾಸ
ಚಕಚಕನೆ ಚಲಿಸಿ ಕತ್ತರಿ
ಬಲು ಚಂದ ಕತ್ತರಿಸುವ ಪರಿ

ಮಾರುದ್ಧದ ಬಟ್ಟೆ ನೂರಾರು ಪೀಸು
ಒಂದಕೊಂದ ಜೋಡಿಸ್ಹೊಲೆಯೇ ಜೋಶು
ನಾಜೂಕಿನಲಿ ಮಾಡಿ ಕುಸರಿ 
ಸುಂದರ ವಸ್ತ್ರದನುಬಂಧದ ಪರಿ

ಹೊಲೆಯಬೇಕಿದೆ  ಹೊಲಿಗೆ
ಬಂಧ ಕಳಚಿದ ಬದುಕ ಬಿರುಕಿನ ನಡುವೆ
ಹಾಕಿ ಎಲ್ಲ ತೂತುಗಳಿಗೆ ತೇಪೆ
ಬಾಂಧವ್ಯದ ಬೆಸುಗೆಯಿದ್ದರೆ ಹೊಳಪೇ..!

ಆಗಬೇಕಿದೆ ಸೃಜಿಸುವ ಯಂತ್ರ
ಬಿತ್ತಿ ಎಲ್ಲರೊಳಗೆ ಶಾಂತಿ ಮಂತ್ರ
ಬಿರುಕು ಕಾಣದಂತೆ ಹೊಲೆದು
ಹೊಂದಾಣಿಸೆ ಚತುರತೆ ಮೆರೆದು

 ದಿಗಂತ
*******
ಹೇ ದಿಗಂತ... ನೀನನಂತ
ವರ್ಣಿಸಲಿ ನಿನ್ನಂಏನಂತ?
ಮಿತಿಯುಂಟೇನು‌  ಪರಿಧಿಗೆ
ಸಕಲ ಬ್ರಹ್ಮಾಂಡ ನಿನ್ನೊಳಗೆ

ಅಷ್ಟದಿಕ್ಕಿಗೂ ವ್ಯಾಪಿಸುತ
ಅದರಾಚೆ ಪರಿಧಿ ಪಸರಿಸುತ
ವಿಸ್ತರಿಸುತ್ತಾ  ದಿಗ್ದಿಗಂತ
ವ್ಯೋಮಾಕಾಶ ನಿನದೇ ಪೂರ್ತ

ಜಗದಗಲ ಮುಗಿಲಗಲ ವ್ಯಾಪ್ತಿ
ಅಂಬರ ಆಕಾಶ ದಿಗಂತ ದೀಪ್ತಿ
ಮಿತಿಯೆಲ್ಲಿದೆ ಅನಂತ ದಿಗಂತಕೆ
ಹಿಗ್ಗಿ ಹಿರಿದಾಗಿ ಬೆಳೆದ ಅನಂತಕೆ

ಎತ್ತರೆತ್ತರಕೆ ಮುಗಿಲನೂ ದಾಟಿ
ಬೆಳೆಯಲಿದೆ ದಿಗಂತವನೂ ಮೀಟಿ
ಬೆಳೆವಮನಕೆಲ್ಲಿಯ ಇತಿಮಿತಿ
ಬೆಳೆಯಲಿದೆ ಜೀವನ ಪೂರ್ತಿ

                ಶೈಲೂ....
[
 ಎಂದೂ ಬರೆದಿರದ ಸಾಲುಗಳು
**************************

ಬಾಳ ಹೊತ್ತಿಗೆಯಲಿ
ಖಾಲಿ ಖಾಲಿ ಪುಟಗಳು
ಬರಿದಾದ ಮನದಂಗಳದಿ
ಬರೆದಿರದ ಸಾಲುಗಳು

ಬರೆಯಬೇಕೆಂದರೂ ಬಾರದು
ಒಳಮನದ ನೋವುಗಳು
ಅಕ್ಷರದಲ್ಲಡಗಿಸಲಸಾಧ್ಯ
ಬರಿದಾದ ಪದಪುಂಜಗಳು

ಕನಸಲ್ಲಿ ಕಾಡಿದ್ದ ನವಿರು ನೆನಪು
ಹಗಲಲ್ಲಿ ಕಂಡಿದ್ದ ಸವಿಗನಸು
ತುಸು ಕೋಪತಾಪ ಹುಸಿಮುನಿಸು
ಎಂದೂ ಬರೆದಿರದ ಸಾಲಾಯ್ತು

ಕಂಗಳಿಂದಿಳಿದಿದ್ದ ಕಂಬನಿ ಲೆಕ್ಕ
ನವಿರಾದ ಪ್ರೇಮದ ಪುಳಕ
ಬರೆಯಲಾರದ ಕವನದ ಶೈಲಿ
ಬರಿದೇ ಖಾಲಿ ಖಾಲಿ ಖಾಲಿ

           ಶೈಲೂ.....


 ಅದೇನಿಂತು ನಾಚಿಕೆ ಗೆಳತಿ

 ಅದೇನಿಂತು ನಾಚಿಕೆ ಗೆಳತಿ
ನೀ.ಸೌಂದರ್ಯದ ಒಡತಿ
ಮುಚ್ಚಿದ್ದೇಕೆ ಅರೆಬರೆ ಕಣ್ಣು
ನೀನೊಂದುಸವಿಯಾದ ಹಣ್ಣು

ಆಹಾ ಕೆಂಪಿನ ಚಂದದ ತುಟಿ
ಅಡಗಿದ್ದೇಕಲ್ಲಿ ದಾಳಿಂಬೆ ಕಾಳು
ಸೇಬನ್ನೂ ನಾಚಿಸುವ ಕದಪು
ಹೆಣ್ಣೇ ಏಕಿಂತು ವೈಯ್ಯಾರ ಒನಪು

ಕಾಮನ ಬಿಲ್ಲಂತೆ ತೀಡಿದ ಹುಬ್ಬು
ಚಂದ್ರಕಾಂತಿಯೂ ನಿನ್ನೆದುರು ಮಬ್ಬು
ಅರೆಬಿರಿದ ತುಟಿಯ ಮಾಸದ ನಗು
ಮರೆಯಲಾರೆ ಗೆಳತಿ ಸದಾನಿನ್ನದೆ ಗುಂಗು

ಮೇಘಮಾಲೆಯೇನು ನಿನ್ನ ಹೆರಳು
ತೂಗಾಡುವ ಚೂಪು ಮುಂಗುರುಳು
ಆಹಾ ಅದೇನಂತ ನಾಚಿಕದದ್ಭುತ
ನಸು ನಾಚಿಕೆಯಲೇ ಇತ್ತೆಯೇನು ಸಮ್ಮತ

ಮಲ್ಲೆ ಮುಡಿದ ಮನಸೆಳೆದ ನಲ್ಲೆ
ನೀನಾರ ಕುಂಚದ ಕಲೆಯ ಬಲೆ
ಮನಸೆಳೆಯಲೇ ಕಡೆದನೇನು ಚತುರ
ಸೆರೆಯಾದೆ ನಾ ನಿನ್ನೊಲವೇ ಮಧುರ

          ಶೈಲೂ.....

 ದ್ರೋಣ
*******

ಅಂಬಾರಿ ಹೊರುವ ದ್ರೋಣ
ಪಾಪ ತೊರೆದುಬಿಟ್ಟ ಪ್ರಾಣ
ಭಾರೀ ಆಕಾರ ಧೀರ ಗಂಭೀರ
ಭುವನೇಶ್ವರಿಗೆ ಸೇವೆಯಿತ್ತಿದ್ದ ಅಪಾರ

ದಸರಾ ದಿಬ್ಬಣದ ಮುಖ್ಯಸ್ಥ
ಚಂದಾಲಂಕಾರ ಸಾಲಂಕೃತ
ಶಿಸ್ತಿನ ಸಿಪಾಯಿ ಮೆರವಣಿಗೆ
ನಿನ್ನಿಂದಲೇ ಮೆರುಗು ಅಂಬಾರಿಗೆ

ಅದೆಷ್ಟು ಹೊತ್ತು ಮೆರೆದಿದ್ದೆ ಭಾರ
ಸಾವಿರಾರು ಕಿಲೋ  ಬೆಳ್ಳಿ ಬಂಗಾರ
ಭಾರದಬ್ಬರಕೆ ಹೇಳು ಆಯಾಸವಾಯ್ತೆ
ಮಾಗಿ ಬಾಗಿದ ಜೀವಕೆ ವಯಸ್ಸಾಯ್ತೆ

ನಾಗರಹೊಳೆ ಅರಣ್ಯದ ದೊರೆ
ಇಳಿಸಿದೆ ಭೂಮಿ ಋಣದ ಹೊರೆ
ಗಜರಾಜ ನಿನಗಿದೋ ಅಶ್ರುತರ್ಪಣ
ದಸರ ಸಂಭ್ರಮವಿನ್ನು ಭಣ ಭಣ

          ಶೈಲೂ.....

 ಮನದ  ಮಾತು
*************

ಮನವು ಹೇಳುತಿದೆ
ಮನದೊಳಗಿನ ಮಾತು
ಮನವಿರಿಸಿ ಕೇಳಿದರೆ
ಮನವರಿಕೆಯಾದೀತು

ಮನದ ಮಾತಿದು ಕೇಳು
ಮನವನಾವರಿಸಿರುವೆ ನೀನು
ಮನ ಮತ್ತೆ.ಹೇಳುತಿದೆ
ಮನದೊಡೆಯ ನೀನು

ಮನದ ಭಿತ್ತಿಯೊಳಗೆ
ಮನಸಿಟ್ಟು ನೆಟ್ಟ ಚಿತ್ರ
ಮನಮುಟ್ಟುವಂತಿದೆ
ಮನದನ್ನ ನೀ ಕೇಳು

ಮನವೇಕಿಲ್ಲ ನಿನಗೆ.?
ಮನದ ಮಾತು ಕೇಳಲು
ಮನಸು ಮಾಡೆನ್ನ ಚೆನ್ನ
ಮನವನರಿತು ನೋಡು

ಮನದೊಳಗೆ ಮುಳುಗಿಹುದು
ಮನಸ್ಸೆಂಬ ಸ್ವಾತಿಮುತ್ತು
ಮನವಿತ್ತು  ಚಿತ್ತೈಸು
ಮನಸದು ನಿನ್ನದೇ ಸ್ವತ್ತು

            ಶೈಲೂ......

 ಕಾರ್ಮಿಕ ದಿನಾಚರಣೆ
*******************

ಬಂಡವಾಳಶಾಹಿಗಳ ಹಿಡಿತದಲಿ
ದುಡಿವ ವರ್ಗವಿದು ನಿತ್ಯ ನರಳುತಲಿ
ಶೋಷಣೆಗೆ ಒಳಪಟ್ಟ ಶ್ರಮಿಕವರ್ಗ
ಸಿಡಿದು ನಿಂತಾಗ ಆಯ್ತು ಕಾರ್ಮಿಕ ಪರ್ವ

ಅನಿರ್ದಿಷ್ಟ ಅವಧಿಯ ದುಡಿತದ ಶ್ರಮ
ಶ್ರೀಮಂತರಿಗಾಗಿಯೇ ದುಡಿವ ಕರ್ಮ
ನಿರಂತರ ಶೋಷಣೆಯ ವಿರುದ್ಧ ಹೋರಾಟ
ಫಲನೀಡಿತ್ತು 8 ಗಂಟೆಗಳ ದುಡಿತದ ಹಠ

ಸರ್ಕಾರದ ಸ್ವಾಮ್ಯದಡಿಯ ಸಂಘಟಿತರು
ಖಾಸಗಿಉದ್ದಿಮೆಗಳಲಿ ದುಡಿವ ಅಸಂಘಟಿತರು
ನಿರ್ಧಿಷ್ಟ ಕೂಲಿಯದು ಗಗನ ಕುಸುಮ
ದಿನಗೂಲಿ ಲೆಕ್ಕದಲೂ ದುಡಿಮೆ ಅಸಮ

ಶೋಷಣೆಯಲೇ ಬದುಕುತ್ತಿರುವ ಕಾರ್ಮಿಕ ಸಂತ
ಅವರ ದುಡಿಮೆಯಲ್ಲಿ ದುಪ್ಪಟ್ಟಾದ ಶ್ರೀಮಂತ
ದುಡಿವವರು ದುಡಿದು ದುಡಿದೂ ಸೋಲು
ಶ್ರಮವಿತ್ತರೂ ಕೊನೆಗೆ ಹಸನಾಗಲಿಲ್ಲ ಬಾಳು

ಇರಬೇಕು ಕಾರ್ಮಿಕರಲಿ ಐಕ್ಯತೆಯ ಮಂತ್ರ
ಶ್ರಮಿಕರಿಗೆ ನೆರವಾಯ್ತು ಒಕ್ಕೂಟ ಸೂತ್ರ
ಬಂಡವಾಳಶಾಹಿ ವಿರುದ್ಧ ಕೂಗು ಹೋರಾಟ
ಕಾರ್ಮಿಕ ದಿನಾಚರಣೆ ಎಂಬ ಆವಿಷ್ಕಾರ

ದುಡಿದು ದುಡಿದೂ ಬಸವಳಿದ ಕಾರ್ಮಿಕ
ಇಂದೊಂದು ದಿನವಾದರೂ ವಿಶ್ರಾಂತಿ ಕಾಯಕ
ಅಮರವಾಗಲಿ ನಿಮ್ಮ ದುಡಿತದ ಫಲದ ಗದ್ದುಗೆ
ಜಯವಾಗಲೀ ಕಾರ್ಮಿಕ ದಿನಾಚರಣೆಯ ಹಾದಿಗೆ

                ಶೈಲೂ.....

 ಕಿಟಕಿಬಳಿ ನಿಂತವಳನ್ನು
ಮುದ್ದಿಸಿದನೇನು ಭಾನು.?
ಸುಳಿದು ಕಿಂಡಿ ಕಿಂಡಿಯಲಿ
ಬರಸೆಳೆದು ಅಪ್ಪಿದನೇನು.?

ಆಗಿರಬೇಕು ಪ್ರಣಯದಾಸೆ
ದಂತದ ಗೊಂಬೆಯ ಕಂಡು
ಇಣುಕಿಣುಕಿ ನೋಡುತಿರುವ
ಚಂದದ ಪರಿಯ ಕಂಡು

ಬೆಚ್ಚಿದ್ದಳಂದು  ಸಂಜ್ನ್ಯಾ
ಪ್ರಖರ ಶಾಖವ ಕಂಡು
ಬೇಸರವಾಗಿರಬೇಕು ಪಾಪ
ಬರಿದೇ ಛಾಯೆಯನುಂಡು

ಎಳೆ ಬಿಸಿಲ ಶಾಖಕೆ ಮೈಯೊಡ್ಡಿ
ನಿಂತ ವೈಯ್ಯಾರಿಯ  ಸ್ಪರ್ಶಕೆ
ಭಾಸ್ಕರ ನೇ ಬಿಸಿ ಬಿಸಿಯಾಗಿ
ಬೆವರಾಗಿ ಸುರಿದು ಸರಿದ ನೇಪಥ್ಯಕೆ
       ಶೈಲೂ...

ಮಾತಿನ ಮಲ್ಲನ ಮೌನ ಮೆರವಣಿಗೆ

 ಮಾತಿನ ಮಲ್ಲನ ಮೌನ ಮೆರವಣಿಗೆ
ಬಾಳ ಪುಟರ ಕೊನೆ ಹಾಳೆಯ ವರೆಗೆ
ನಾಟಕ ಪರದೆಯ ಅಂಕವು ಜಾರಿ
ಜೀವನ್ನಾಟಕ ಮುಗಿಸಿದ ಸೂತ್ರಧಾರಿ

ಕರುನಾಡ ಕಣ್ಮಣಿ ನರಸಿಂಹಮೂರ್ತಿ
ರಂಗಭೂಮಿಯಲ್ಲಿ ಗಳಿಸಿದ ಕೀರ್ತಿ
ಬೆಳ್ಳಿತೆರೆಗೂ ಹಬ್ಬಿತು ಅದಮ್ಯ." ವಾಣಿ "
ಕಂಚಿನ ಕಂಠದ  ನಿರರ್ಗಳ ವಾಣಿ

ನಟರತ್ನಾಕರನ  ನಟನೆ ಅಪಾರ
ಹೆಸರು ಗಳಿಸಿದ್ದು ಲಂಚಾವತಾರ
ರಾಜಕೀಯದ ಹೊಲಸ ಬಿಚ್ಚಿದ ಧೀರ
ಯಾರಿಗೂ ಹೆದರದ ಕೆಚ್ಚೆದೆಗಾರ

ಸಾಮಾಜಿಕ ಕಾಳಜಿಯ  ಕಳಕಳಿ
ಭ್ರಷ್ಟತೆಯ ಅನಾವರಣ ಮಾಡಿದ ಪುತ್ಥಳಿ
ಮೊನಚು ಮಾತಲ್ಲೇ ಜನಜಾಗೃತಿಯ ಅನಾವರಣ
ಸಹಿಸದನೇಕ ಮಂದಿಯ ಹಗೆ ವಿನಾಕಾರಣ

ಹಿರಣ್ಣಯ್ಯ ಮಿತ್ರಮಂಡಲಿಯ  ರೂವಾರಿ
ನಟ ರತ್ನಾಕರ ಬಿರುದಾಂಕಿತ ಪಾತ್ರಧಾರಿ
ಹಾಸ್ಯ ವಿಡಂಬನೆಯಲೇ ಚಾಟಿ ಏಟಿತ್ತ ನಾಜೂಕಯ್ಯ
ನಟನೆಯ ದೈತ್ಯ ಪ್ರತಿಭೆ ನೀ ಮಹಾರಾಯ

ಹೊರಟು ಬಿಟ್ಟಿರೇಕೆ ಭೂಮಿಯನು ತೊರೆದು
ರಂಗಭೂಮಿಯಲಿ ಸಾರ್ವಭೌಮಿಕೆ ಮೆರೆದು
ಇನ್ನಾರಿಹರು ನಿಮ್ಮಂಥ ಧೀಮಂತ ವ್ಯಕ್ತಿ
ಭ್ರಷ್ಟತೆಯ ಎಳೆಎಳೆಯಾಗಿ ಬಿಚ್ಚಿಡುವ ಅಭಿವ್ಯಕ್ತಿ


           ಶೈಲೂ.....


★★ ರಂಗೋಲಿ ★★
******************

ಅಂಗಳಕೆ ಶೋಭೆ ಅಂದದ ರಂಗೋಲಿ
ಶುಭವ ಸೂಸುವ ಚಿತ್ತಾರ ಬಾಗಿಲ ಬಳಿಯಲ್ಲಿ
ಬಿಳಿಪುಡಿಯ ಎಳೆ ಎಳೆಯು ಹೊಸ್ತಿಲ ಮೇಲೆ
ನಡುವೆ ಕೆಂಪಿನ ಗೆರೆಯು ರಂಗೋಲಿ ಮಡಿಲಲ್ಲೇ

ಸಂಪ್ರದಾಯದ ಸಿರಿಯು ಮನೆಗೆ ಭೂಷಣ
ಗೃಹಿಣಿಯರ ಕೌಶಲ್ಯದನಾವರಣ
ವೃ0ದಾವನಡೆದುರು ಶಂಕುಚಕ್ರಗಧಾಪದ್ಮ
ದೇವನಿರುವೆಡೆಯಲ್ಲಿ  ಶುಭಕರ ಗೋಪದ್ಮ

ಶ್ರೀರಂಗ ನಿಗೆ  ಅತಿಪ್ರಿಯ ರಂಗೋಲಿ
ಬಣ್ಣದ ನವಾವರಣ ತುಂಬಿ ಅದರಲ್ಲಿ
ಒಂದೊಂದು ದೈವಕೊಂದೊಂದು ತೆರನಾಗಿ
ವಾಂಛಿತ ಫಲವೀವ ದೈವಿಕ ರಂಗವಲ್ಲಿ

ಎಳೆಎಳೆಯ ಸರಳ  ಗೆರೆಗಳುಂಟು
ಚಿಕ್ಕುಗಳ ಚಿತ್ತಾರವಿಹುದು ಬ್ರಹ್ಮಗಂಟು
ವಿವಿಧ ವಿನ್ಯಾಸ ಆಕಾರ ಸಾಕಾರ
ಕೌಶಲತೆಯ ಕೈಚಳಕದ ಕಲಾಹಂದರ

ನಮ್ಮ ಸಂಸ್ಕೃತಿಯ ಪ್ರತೀಕ ರಂಗೋಲಿ
ಭಕ್ತಿ ಭಾವ ಕೌಶಲ ಮಿಳಿತ ಅದರಲ್ಲಿ
ರಾರಾಜಿಸುತಿರೇ ಮನೆಯ ಮುಂದೆ
ಶುಭಸಮಾರಂಭ ಇಹುದು ಎಂದೇ

ಜೀವನವೂ ಇಹುದು ರಂಗೋಲಿಯಂತೆ
ಬಿಡಿಸದಿದ್ದರೆ ಮನೆಮನ ಸೂತಕಛಾಯೆಯಂತೆ
ತಪ್ಪಿದ ಚುಕ್ಕಿಗಳಲ್ಲಿ ವಿನ್ಯಾಸ ಅಪೂರ್ಣ
ಹದವರಿತು ಬಿಡಿಸಿದರೆ ಬಾಳು ಸಂಪೂರ್ಣ

          ಶೈಲೂ.....

 ನಾ ಹಾರುವ ಹಕ್ಕಿಯಾಗಿದ್ದರೆ.?
************************

ಬಾನಲ್ಲಿ ಹಾರಾಡುವ 
ಹಕ್ಕಿ ನಾನಾಗಿದ್ದರೆ
ಆಹಾ ಅದೆಷ್ಟು ಚಂದವಿರುತಿತ್ತು
ಬೀಗಿಸುತ್ತಾ ಕೊಕ್ಕು
ಹಾರಿಸುತ್ತಾ ರೆಕ್ಕೆ
ಭೂಮಂಡಲವನ್ನೆಲ್ಲ ಸುತ್ತಬಹುದಿತ್ತು

ಹಾಗೇ ತೇಲುತ್ತ ತೇಲುತ್ತ
ಗಗನಡೆದೆಗೆ ಹಾರುತ್ತ
ಬೆಳ್ಮುಗಿಲಮೇಲೆ ಕೂರಬಹುದತ್ತು
ಕಟ್ಟಿದ್ದ ಕಾರ್ಮುಗಿಲ
ಕೊಕ್ಕಿನಿಂದ ಕುಕ್ಕುತ್ತಾ
ಧರೆಯೆಡೆಗೆ ಮಳೆಯ ಸುರಿಸಬಹುದಿತ್ತು

ಖಗವಾಗಿ ಗೆಲುವಾಗಿ
ದೇವಲೋಕದೆಡೆಹೋಗಿ
ಮಾಧವನನ್ನೊಮ್ಮೆ ನೋಡಬಹುದಿತ್ತು
ಮೃದುವಾಗಿ ತಲೆಬಾಗಿ
ಭಕ್ತಿಯಿಂದ ಬೇಡಿ
ಹೆಗಲಮೇಲವನ ಮೆರೆಸಬಹುದಿತ್ತು

ಕಪ್ಪಾದರೇನಂತೆ
ಕೋಗಿಲೆ ನಾನಾಗಿ
ಇಂಪಾಗಿ ಹಾಡನ್ನ ಹಾಡಬಹುದಿತ್ತು
ಹಸಿರುಡುಗೆಯನ್ನುಟ್ಟು
ಕೆಂಪು ಕೊಕ್ಕಲಿ ಕುಕ್ಕಿ
ರುಚಿಯಾದ ಹಣ್ಣನ್ನು ಸವಿಯಬಹುದಿತ್ತು

ಬಣ್ಣಬಣ್ಣದ ಗರಿಯ
ಹೊತ್ತ ನವಿಲಾಗಿದ್ದರೆ
ಕೃಷ್ಣನ ಮುಡಿಯೇರಿ ನಲಿಯಬಹುದಿತ್ತು
ಆಡುತ್ತ ಕುಣಿಯುತ್ತ
ಮನವನ್ನು ತಣಿಸುತ್ತ
ನನ್ನವನೋಡನಾಟ ಸವಿಯಬಹುದಿತ್ತು

ಸ್ವಚ್ಛ ಬಿಳಿಯ ಪುಕ್ಕ
ಹೊತ್ತ ಹಂಸನಾನಾಗಿದ್ದರೆ
ಪ್ರೇಮಿಗಳ ಪತ್ರ ತಲುಪಿಸಬಹುದಿತ್ತು
ಸ್ವಚ್ಛ ಹಾಲಿನೊಳಗೆ
ಬೆರೆತ ನೀರನ್ನೊಮ್ಮೆ
ಹಂಸಕ್ಷೀರನ್ಯಾಯ ತೋರಬಹುದಿತ್ತು

            ಶೈಲೂ....

 ಗತವೈಭವ
*********

ಅಂದು ಬಾಳಿ ಬದುಕಿದ್ದ
ಮನೆಯಿಂದು ಪಾಳು ಗುಡಿ
ಮೆರೆದ ಗತವೈಭವವಿಂದು
ಅಳಿದು ಪಳಯುಳಿಕೆಯಡಿ

ತಲೆ ತಲೆಮಾರುಗಳು ಬದುಕಿ
ಪೋಷಣೆಯಿಲ್ಲದೆ ಕುಸಿಯಿತಿಂದು
ಪರಂಪರಾನುಗತ ಅಂದದಮನೆ
ಕಾಲನವಶಕೆ ಸಿಲುಕಿತಿಂದು

ಅದೆಷ್ಟು ಮಂದಿಗೆ ನೆರಳಿತ್ತಿತ್ತೋ
ಹಸಿದು ಬಂದವರಿಗೆ ತುತ್ತನೀಡಿ
ನಿಷ್ಠೆಯ ಬೆವರ ಹನಿ ಬಸಿದವರಿಗೆ
ಅಸನವಸನವಿತ್ತಿತ್ತು ಪ್ರೀತಿ ಮಾಡಿ

ಅಸರೆಯ ತಂಪಿತ್ತು ಬಾಚಿ ತಬ್ಬಿದ್ದ
ಗುರುಹಿರಿಯರಿದ್ದ  ಅಂದದಂಕಣ
ಹಳೆ ಬೇರು ಹೊಸ ಚಿಗುರು
ಹಬ್ಬಿ ನಕ್ಕಿದ್ದ ಭಾವದನಾವರಣ

ಇತ್ತೊಂದು ಕಾಲದಲಿ ಭರಪೂರ
ಸುವರ್ಣಯುಗದ ಸಂಭ್ರಮದ ಕಾಲ
ತಾತ ಮುತ್ತಾತರಾಳಿ ಬದುಕಿದ್ದ
ಮೌಲ್ಯವೆತ್ತಿಹಿಡಿದಿದ್ದ ನ್ಯಾಯದೇಗುಲ

           ಶೈಲೂ...

 ಕಾಯಕವೇ ಕೈಲಾಸ
*****************

ಕಾಯಕವೇ ಇಲ್ಲದಿರೆ
ಕೈಲಾಸವೆಲ್ಲಿಯದು.?
ಕೈ ಕೆಸರಾದರೆ ತಾನೇ
ಬಾಯಿಗೆ ಮೊಸರು..!!

ದುಡಿಮೆಯೇ ದೇವರು
ಸುರಿಸಿ ಹರಿಸಿ ಬೆವರು
ನಿಷ್ಠೆಯಿಂದ ದುಡಿದವಗೆ
ಅಷ್ಟೇ.. ಒಳ್ಳೆ ಹೆಸರು..!!

ಮೇಲುಕೀಳಿಲ್ಲ ವೃತ್ತಿಯಲಿ
ಗೌರವಿಸಿ ನಡೆದರದು ಧರ್ಮ
ಅವರವರ ವೃತ್ತಿ ದೇವನಾಣತಿ
ನಿಷ್ಠೆಯಲಿಹನು ಅದುವೇ ಮರ್ಮ 

ಇಂಥ ಸವಿನುಡಿಯನಾಣತಿಯ
ನೀಡಿದರೊಬ್ಬ ಮಹಿಮರು
ಭರತವರ್ಷಕೆ ಕ್ರಾಂತಿ ತಂದ
ಜಗಜ್ಯೋತಿ ಬಸವೇಶ್ವರರು

        ✍ ಶೈಲಜಾ ರಮೇಶ್

 ಜಗಜ್ಯೋತಿ ಬಸವೇಶ್ವರ
*********************

ಕಾಯಕವೇ ಕೈಲಾಸ ದುಡಿದರಿಹುದು ಉಲ್ಲಾಸ
ದುಡಿಮೆಯಲಿಹನು ದೇವರು ಶ್ರದ್ಧೆಯಿಂದ ದುಡಿಯುತಿರು

ದಯೆಯಲಿಹುದು ಧರ್ಮ ಕರುಣೆಯದರ ಮರ್ಮ
ಮೂಢನಂಬಿಕೆಯ ಮೌಢ್ಯ ಅಳಿಸಿ ಬಿಸುಟು ಆಗುನೀ ಪ್ರೌಢ

ಜಾತಿವಿಜಾತಿಯಾವುದಿಹುದು ಜಗಕಿಹುದೊಂದೆ ಜಾತಿ
ಭಕ್ತಿಯ ಬಾಂಡ ದೊಳಗಿಹ ಶಿವಶರಣರಿಗಿಲ್ಲ ಯಾವ ಜಾತಿ

ಭಕ್ತಿ ಚಳುವಳಿಯ ಹರಿಕಾರ ಇಷ್ಟಲಿಂಗವದರಾಧಾರ
ಜಾತಿಬೇಧಗಳಿಗಿತ್ತಿತ್ತು ಕೊನೆ ಅನುಭವ ಮಂಟಪದ ಮಹಾಮನೆ

ಏನಗಿಂತ ಕಿರಿಯರಿಲ್ಲೆಂಬ ಸರಳ ಸಜ್ಜನಿಕೆಯ ಶರಣಾಗತಿ
ಶಿವಶರಣರಿಗಿಂತ ಹಿರಿಯರಿಲ್ಲೆಂಬ ಅನುಭವದ ಮಹಾಮತಿ

ಹಸಿದವರಿಗೆ ಅನ್ನವಿಕ್ಕುವ ಮಹಾ ಅನ್ನದಾನ ದಾಸೋಹ
ಇಷ್ಟಲಿಂಗ ಪೂಜಾಕೈಂಕರ್ಯ ಸಾಕಾರ ಶಿವನಿಗಿಷ್ಟು ಸನಿಹ

ದೇಹವಿದು ದೇಗುಲ ನಿಜಭಕ್ತಿಯಲರ್ಚಿಸಲವನು ಸಲಿಲ
ಮೃದುವಚನವೇ ಮಂತ್ರ ಆ ದೇವನೊಲಿಯುವಿಕೆಯ ತಂತ್ರ

ನೀಡಿ ವಚನಾಮೃತ ವಾಣಿ ಬಸವಣ್ಣ ನೀವಾದಿರೆಲ್ಲರ ಕಣ್ಮಣಿ
ಕ್ರಾಂತಿಯ ಹರಿಕಾರ ನಿಜಗುಣ ಭಕ್ತಿ ಭಂಡಾರಿ ಬಸವಣ್ಣ

ಜಗವ ಬೆಳಗಿದ ಜ್ಯೋತಿ ಮಹಾ ಮಾನವತಾವಾದಿ ಬಸವಣ್ಣ
ದೇವನೊಲಿಯುವ ಪರಿಗಿಹುದು ಶರಣು ಶರಣಾರ್ಥಿ ಶರಣ್ಯ

             ಶೈಲೂ......

 ಸಂತೈಕೆ
*******

ಹಸಿವಾಗಿಹುದೇ..? ಅಳದಿರೂ ತಮ್ಮ
ಏನು ಮಾಡುವುದೇಳು ಹಸಿವೆಯೇ ನಮ್ಮ ಕರ್ಮ

ಎಲ್ಲೆಲ್ಲಿ ನೋಡಿದರೂ ಮರವಿಲ್ಲ ಬಟಾಬಯಲು
ಹಣ್ಣು ಹಂಪಲುಗಲಿಲ್ಲ ಹಸಿವನ್ನು ನೀಗಲು

ಅಂದಿತ್ತು  ಸಂವದ್ಧಿ ಫಲಭರಿತ ಮರಗಳು
ನಿತ್ಯ ಗೋಳಾಯ್ತೆಮಗೆ ಮರವೆಲ್ಲ ಕಡಿಯಲು

ಕಾಡೆಲ್ಲಾ ನಾಡಾಗಿ ಇಲ್ಲವಾಯ್ತೆಮಗೆ ನೆಲೆ
ಅರಸುತ್ತ ಆಹಾರ ಬಂದಿದ್ದೇವೆ ಗುಳೆ

ತುಸು ಸುಮ್ಮನಿರು ತಮ್ಮ ನೋಡುತಿಹಳಮ್ಮ ಆಚೀಚೆ
ಎಲ್ಲಾದರೂ ಕಾಣಸಿಗಬಹುದು ಹಣ್ಣು ಕಾಯಿಪೀಚು ಹೀಚು

ನಮಗೂ ಹಸಿವಾಗುತಿಹುದು ನೋಡು ನಾವು ಅಳುತ್ತಿಲ್ಲ
ಸ್ವಲ್ಪ ಸಾವರಿಸಿಕೊ ಕಂದ ಅಭ್ಯಾಸವಾಗುವುದು ಮೆಲ್ಲ

ಮನುಜರ ಅತ್ಯಾಸೆಗಿಂದು ನಾವು ಬೀದಿ ಪಾಲು
ಕೇಳುವರಾರಿಲ್ಲ ಇಲ್ಲಿ ನಮ್ಮಳಲಿನ ಅಹವಾಲು

ಕರೆದು ಉಣಲಿಕ್ಕುವರಿಲ್ಲ ನಾವು  ಮಂಗಗಳಂತೆ
ಬೆದರಿಸಿ ಕಸಿದರಾಯ್ತು ಹೊಡೆದೋಡಿಸುವರು ಮೃಗದಂತೆ

ಸುಮ್ಮನಿರಲೂ ಬಿಡರಲ್ಲ ಹಿಡಿದೆಮ್ಮ ಪಳಗಿಸಿ ಮಣಿಸಿ
ಅವರಾಟಕೆ ಕುಣಿಸುವರು ಹೊಡೆದು ಹೆದರಿಸಿ ಬೆದರಿಸಿ

ನಮ್ಮ ಅನ್ನ ಕಸಿದವರಿಗೆ ದುಡಿದು ಕೊಡಬೇಕು ಹಣ
ತನ್ನ ಹೊಟ್ಟೆ ತುಂಬಿಸಿಕೊಂಡು ನಮಗೆ  ಬರೀ ಅರೆಹೊಟ್ಟೆನಾ

ಬಾಯಲ್ಲೇನೋ ದೇವರೆಂದು ಕಟ್ಟಿದರು ಗುಡಿಗೋಪುರವ
ಕಂಡಲೆದುರು ಬೀಸುವರು ಕಲ್ಲು ಇದು ಮನುಜನ ತತ್ವವಾ.?

ಅತ್ತು ಹೈರಾಣಾಗದಿರು ಕುಡಿ ಅಮ್ಮನೆದೆಯ ಹಾಲು
ಸಿಕ್ಕಿದೊಡನೆ ಆಹಾರ ಕೊಡುವೆ  ನಿನಗೆ ಪಾಲು

              ಶೈಲೂ.....

 ಇರಲೀಸುಖ ಅನವರತ
********************

ಯಾಕೋ ತುಸು ಆರಾಮಿಲ್ಲ
ಮಲಗಲೇ ಮಡಿಲಲಿ ನಲ್ಲ
ಕೈಕಾಲುಗಳಲೆನೋ ಸುಸ್ತು ಸೆಳೆತ
ಓಡಾಡಲಾಗದೇನೋ ನೋವು ಎಳೆತ

ಬಾ ಮಲಗು ರಾಧೇ
ನೀಗಿಸುವೆ ನಿನ್ನೆಲ್ಲ ಬಾಧೆ
ಏನಾಯಿತ್ಹೇಳೇ ಚಿನ್ನಾ
ಪರಿಹರಿಸುವೆ ನೋವನ್ನ

ಎನಿಲ್ಲವೋ ಗೋಪಾಲ
ನಿನ್ನನರಸುತ ಕಳೆದೆ ಕಾಲ
ಹುಡುಕಿ ಹುಡುಕಿ ಸುಸ್ತಾದೆ
ಅಲೆದಲೆದು ಆಯಾಸವಾಗಿದೆ

ಹೌದೇನೇ ರಾಧಾಮಣಿ
ನೆನೆದಿದ್ದರೆ ಸಾಕಿತ್ತಲವೇ ರಾಣಿ
ಓಡೋಡಿ ಬಂದಿರುತ್ತಿದ್ದೆ
ನೆನೆದೊಡನೆ ಹಾಜರು ಕಣ್ಮುಂದೆ

ಸಾಕು ಬಿಡು ಬಡಿವಾರ
ನಿನ್ನನೆನಪೇ ಪ್ರತಿದಿನ ವಾರ
ನೀನೇನೋ  ಜಗದಾದಿಪತಿ
ಇಹುದೆಲ್ಲಿ ನನ್ನೊಳು ಮತಿ

ನೆನೆದೊಡನೆ ಬಂದೆನಲ್ಲವೇ ನಾನು
ಹೇಳು ಜಾಣೆ ಮನದಳಲನ್ನು
ನಿನ್ನೊಡನೆಯೇ ನಾನಿಹೆನಲ್ಲ
ಜಗವೇ ರಾಧಾಕೃಷ್ಣ ಎನುವರಲ್ಲ

ಹೆಸರೊಂದೇ ಸಾಕೇ ನಲ್ಲ
ನಿನ್ನೊಡನಾಟ ಬೇಕಲ್ಲ
ಸದಾ ನಿನ್ನೊಡನಿರಬೇಕು
ಜಗದ ಪರಿವೇ ಮರೆಯಬೇಕು

ಹಾಗೆಂದರಾದೀತೇ ಹೇಳು
ಬೇಕಲ್ಲ ಎಲ್ಲರಿಗೂ ಸಮ ಪಾಲು
ನಿನ್ನೊಡನಾಟದ ಸಿರಿ ಸ್ನೇಹ ಸಖ್ಯ
ಜಗವ ತಣಿಸುವುದೂ ಅಷ್ಟೇ ಮುಖ್ಯ

ಸರಿ ಬಿಡು ಬಿಡು ಮಾಧವಾ
ಅರಿತಿರುವೆ ನಿನ್ನ ಮನವಾ
ಜಗವ ಪಾಲಿಪ ಸ್ವಾಮಿ ನೀನು
ನನಗೇ ಮೀಸಲಿರಲೆಂದು ಬಯೆಸೆನು

ಹೋಗಲಿ ಆ ಮಾತ ಬಿಡು ರಾಧೇ
ಇಂದಿನ ಇಡೀ ಸಮಯ ನಮ್ಮದೇ
ಸುಂದರ ಈ ಪ್ರಕೃತಿ ಮಡಿಲಿನಲಿ
ಕಳೆಯೋಣ ಸುಸಮಯ ಏಕಾಂತದಲಿ

ಅದಕೆಂದೇ ಬಯಸಿದೆ ಮಡಿಲು
ಎದೆಗೊರಗಿ ಆನಂದ ಸವಿಯಲು
ಆಹಾ ಏನೀಸುಖಮಯ ಪ್ರಶಾಂತ
ಇರಲೀ ಬೆಸುಗೆ ನಿತ್ಯ ಅನವರತ
  
                ಶೈಲೂ....

 ತನ್ನದೆನ್ನುವಜೀವ ಉದರದೊಳರಳೆ
****************************
ಉದರದೊಳು ಮೊಳೆಯುತ್ತಿರುವ ಜೀವ
ತನ್ನದೆನ್ನುವ ಅತೀವ ಪ್ರೇಮ ಭಾವ
ಹೊತ್ತವಳ ಕಷ್ಟಕ್ಕೊದಗುವ ಜೀವ
ತಿಳಿಯುತ್ತಿದ್ದನವಳು ಪಡುವ ನೋವ

ಏನೇನೂ ಮಾಡಲು ಬರದವ
ಹೊತ್ತು ನೆತ್ತಿಗೇರಿದರೂ ಏಳದವ
ಇಂದೆಲ್ಲಾ ಕೆಲಸಕ್ಕೂ ಸಿದ್ದ ಸನ್ನದ್ದ
ಕರುಳ ಕುಡಿಯ ರಕ್ಷಣೆಗೆ ಬದ್ದ

ಬೇಯಿಸಿದ್ದ ರಮಿಸಿ ಉಣಿಸಬೇಕಿತ್ತು
ಕೂತೆಡೆಯೇ ಸರ್ವಸೇವೆಗೈಯ್ಯಬೇಕಿತ್ತು
ದರ್ಪಧಮಡಿ ಜೋರುಮಾತಿಗ್ಹೆದರಿ
ನಡುಗುತ್ತಿದ್ದೆ ಕೈಕಾಲುಗಳದುರಿ

ಈ ನಡುವೇನಾಯ್ತೋ ಎನ್ನರಸನಿಗೆ
ತುಂಬು ಆರೈಕೆ ಬಿಡನರಗಳಿಗೆ
ಮನೆಗೆಲಸಕೆಲ್ಲಾ ಸಹಾಯ ಹಸ್ತ
ಇರಬಹುದೇ ಗರ್ಭಧರಿಸಿದ ನಿಮ್ಮಿತ್ತ

ಅಡುಗೆಮಾಡಲೊಡನೆ ಇರುವ
ಬಟ್ಟೆ ತೊಳೆಯೇ ಜೊತೆಗೆ ಬರುವ
ಹೆಜ್ಜೆಯಿಟ್ಟರವ ಮೆಲ್ಲ  ಎನ್ನುವ
ಅಬ್ಬಾ..! ಅದೆಷ್ಟು ಕಾಳಜಿ ತೋರುವ

ತನ್ನದೆನ್ನುವ ಜೀವ ಉದರದೊಳರಳೆ
ಹಮ್ಮೆಲ್ಲ ಹುಸಿಯಾಯ್ತು ಹೆಮ್ಮೆಯರಳೆ
ಕರುಳಕುಡಿ ಹೊತ್ತವಳನ್ಹೊತ್ತು ಮೆರೆಸಿ 
ಜೀವ ತಾನಾಗಿಹ ಒಲವ ಸುರಿಸಿ

           ಶೈಲೂ.....

 ಕವಿಯ ಬೆರಗು ನೋಟವ ಕಂಡು
                 ಅವಳು
        ನಾಚಿ ಇಳೆಯಾದಳು
     ಚೆಲುವಿನ ಬಲೆಯಾದಳು
     ತಂಪೀವ ಮಳೆಯಾದಳು
       ಜೇನ ಹೊಳೆಯಾದಳು

 🌹🌹ಜನ್ಮೋತ್ಸವದ ಶುಭಾಶಯ🌹🌹

 ವರ್ಷದ ಕೂಸು
*************

ಕನ್ನಡದ ಕಂದ
ನಲ್ಮೆಯ ಬಾಲ ಮುಕುಂದ
ಎಲ್ಲರಚ್ಚುಮೆಚ್ಚಿನ ಕೂಸು
ನಡೆವ ಹಾದಿಯಲ್ಲೆಲ್ಲ  ಹೂ ಹಾಸು
ಮನಸು ತುಂಬಾ ಸ್ವಚ್ಛ
ಹೆಸರಿದಕೆ ಕನ್ನಡ *ಕಥಾಗುಚ್ಛ..!!* 
ಹಡೆದವರು ಹಲವು ದೇವಕೀಯರು..!!
ಪಾಲಿಸುವವರೆಲ್ಲ ಯಶೋಧೆಯರು..!!
ವಸುದೇವರುಗಳ
ಪಾತ್ರವನ್ತೂ  ವರ್ಣನಾತೀತ
ನಂದಗೋಪರುಗಳ
ಸಂಖ್ಯೆ ಅಪರಿಮಿತ..!!
ಗೋಪಿಕೆಯರದೂ ದೊಡ್ಡ ಹಿಂಡು
ಈ ಕೃಷ್ಣನ ರಮಿಸುವಲ್ಲಿ
ಸದಾ ಮುಂದು
ಅದೆಷ್ಟು ಪ್ರೇಮ ಭಕ್ತಿ
ಹಾಸ್ಯ ಕವನ ಕಥಾಹಂದರ
ನಡುವಲ್ಲೇ ಬೆಳೆಯುತ್ತಿರುವ
 *ಕಥಾಗುಚ್ಛ* ಸುಂದರ..!
ಹಾಲು ಮೊಸರು ಮಥಿಸಿ
ನವನೀತ ತೆಗೆದಂತೆ
ಹಲವು ಭಾವಗಳು ಮಿಳಿತ
ಸಂಕಲನ *ಪಯೋನಿಧಿ* ಯಂತೆ
ಉತ್ಕೃಷತೆಗೆ ಸಂದ ಗೌರವ *ಶಾರದಾತನಯ..!* 
ಸಂತೋಷ ಸಂಭ್ರಮಕೇ ಕಾರಣ
 *ಅನುಪಮಾ* ..!
ಹಲವು ಹೂ ಮನಗಳು
ಬೆಸೆದು ಹೊಸೆದ ಕೂಸು..!
ಅಂಬೆಗಾಲಿನಿಂದ ದಾಪುಗಾಲಿನ
ನಡಿಗೆಗಿಂದು ವರ್ಷವಾಯ್ತು
ಜನ್ಮ ಮಹೋತ್ಸವಕಿಂದು
ನಲ್ಮೆಯ ಹಾರೈಕೆ..!
ಹಲವು ಬಗೆಬಗೆಯ ಚಂದದ
ಈ ಹೂಗುಚ್ಛದೊಂದಿಗೆ
ಈ ನಾರೂ ಸ್ವರ್ಗ ಸೇರುವ ಬಯಕೆ.!

            *ಶೈಲೂ.....*

 ನನ್ನೊಳಗಿನ ನಾನು
****************

ನನ್ನೊಳಗೊಂದು ಅಭಿವ್ಯಕ್ತಿ
ಉದ್ಭವಿಸಿದೆ ನನ್ನದೇ ಭಿತ್ತಿ
ನೋವು ನಲಿವುಗಳಿಗೆ ಸಂಗಾತಿ
ನನ್ನೊಳಿಹ ಉತ್ತಮೊತ್ತಮ ಗೆಳತಿ

ದೃಢಹೆಜ್ಜೆಗೆ ಸಹಕಾರಿಯಾದವಳು
ತಪ್ಪೋಪ್ಪುಗಳ ತಿಳಿಹೇಳಿದವಳು
ಕಣ್ಣೀರೊರೆಸಿ ನೋವ ಮರೆಸಿದವಳು
ಸೋತು ಕಂಗೆಟ್ಟಾಗ ಮಾಡಿಲಾದವಳು

ಮುಂದಡಿಯಿಡಲು ಒತ್ತಾಸೆಯಾದವಳು
ಆತ್ಮವಿಶ್ವಾಸ ನೀಡಿ ನಲಿವಿತ್ತವಳು
ಗುರಿಯೆಡೆಗೆ ಗುರುವಿನಂತಾದವಳು
ಏಕಾಂಗಿತನಕೆ ಜೊತೆಯಾದವಳು

ಬದುಕಿಗೆ ಭರವಸೆಯಿತ್ತವಳು
ಸಾಧಿಸುವ ಚಲವಿತ್ತ ವಳು
ಕಾಲೆಳೆವವರ ಕಡೆಗಣಿಸೆ0ದವಳು
ನನಗಾಗಿ ಕಣ್ಣೀರಸುರಿಸುವವಳು

ನನ್ನೊಳಗಿನ ಈ ನಾನು ಅಹಂ ಅಲ್ಲ
ಎಲ್ಲದೋಳರಿವಿತ್ತ ಸುಮನಸೇ ಎಲ್ಲ
ಧೈರ್ಯ ಗುಂದದಂತೆ ನೀಡಿ ಶಕ್ತಿ
ನನ್ನತನವ ಎತ್ತಿ ಹಿಡಿವ ಅಭಿವ್ಯಕ್ತಿ..!!

           ಶೈಲೂ...
.
 ಸಪ್ತಪದಿ
*******

ಏಳು ಹೆಜ್ಜೆಗಳ ಈ ಬಂದ
ಜನ್ಮಜನ್ಮಗಳ ಅನುಬಂಧ
ಎರಡು ಮುಗ್ಧ ಮನಗಳ ಬೆಸೆಗೆ
ಪ್ರೀತಿ ಸಾಂಗತ್ಯ ಕೆ ಸೇತುವೆ

ಸನಾತನ ಸಂಸ್ಕೃತಿಯ ಪ್ರತೀಕ
ಸತ್ಸಂಪ್ರಧಾಯದ ದ್ಯೋತಕ
ವೇಧಘೋಷ ಮೇಳಗಳ ನಡುವೆ
ಸಂಬಂಧ ಅನುರಾಗದ ಒಸಗೆ

ಸಂಸಾರಸಾಗರದಲಿ ಈಸಲು
ಪರಸ್ಪರರಲಿ ಸಹಕಾರವಿರಿಸಲು
ಮುಂದಿಡಲು ಸಜ್ಜು ಬಾಳ ಹೆಜ್ಜೆ
ಮುನ್ನಡಿಯಿದು ಈ ಏಳು ಹೆಜ್ಜೆ

ಧರ್ಮೇಚ ಅರ್ಥೇಚ ಕಾಮೇಚ
ನೀನಿಲ್ಲದೇ ನಾತಿ ಚರಾಮಿ..!!
ನಂಬುಗೆಯಡಿಯಲಿ ಸಾಗುವ
ಈ ಜೀವ ನಿನಗೆ ಸಮರ್ಪಯಾಮಿ..!!

ಜೀವದೊಳೊಂದಾಗೆ ಅಗ್ನಿಸಾಕ್ಷಿ
ವಚನಬದ್ಧತೆಗೆ ಆ ದೈವಸಾಕ್ಷಿ
ಹದಿಬದೆಯ ಧರ್ಮಕಡಿಪಾಯ
ಸಪ್ತಪದಿ ಸುಖ ಜೀವನಕುಪಾಯ

ಜೀವನದ ಸರ್ವ ಸುಖ ದುಃಖ
ಜನನಮರಣಗಳೆರಡರಲೂ ಸಾಂಗತ್ಯ
ಉಸಿರಲುಸಿರಾಗಿ ಬಾಳಹಸಿರಾಗಿಸಿ
ಬೆಸೆವ ಬಂಧನ ಸಪ್ತಪದಿಯ ಸ್ವಾರಸ್ಯ

                 ಶೈಲೂ.....

ಮನದೊಳಗಿನ
    ಮರಿದುಂಬಿ
        ಸುಶ್ರಾವ್ಯವಾಗಿ
            ಹಾಡಿದಾಗ
                ಮೂಡಿಬಂದ
                   ಮಧುರಾನುಭವದ
                       ಮನದ
                          ಮಾತುಗಳು...

: ಹಸಿರು ಗಾಜಿನ ಬಳೆಗಳೇ
**********************

ನೋಡೇ ಅಮ್ಮ ಎಷ್ಟು ಚಂದವಿದೆ
ಘಲ್ ಘಲ್ ಬಳೆಗಳ ನಾದ
ನಿನ್ನಂತೆಯೇ ಇದೆ ಅಂದದ ಕೈಯಲಿ
ತುಂಬಿದ ಬಳೆಗಳ ಮೋದ

ಹೌದು ಪುಟಾಣಿ ಮಕ್ಕಳ ರಾಣಿ
ಬಳೆಗಳೇ  ಹೆಣ್ಣಿಗೆ  ಭೂಷಣ
ಚಂದದ ಕೈಯಲ್ಲಿ ಹಸಿರಿನ ಬಳೆಗಳು
ಸೌಭಾಗ್ಯದ ಸಿರಿಗೆ ಕಾರಣ

ಗಾಜಿನ ಬಳೆಯಿದು ಒಡೆದರೆ ತೊಂದರೆ
ಬಹು ಜಾಣ್ಮೆಯಲಿ ಸಂಭಾಳಿಸು
ಸ್ತ್ರೀತ್ವದ ಸೌಭಾಗ್ಯದ ಸಂಕೇತವಿದು
ತೊಟ್ಟು ಸದಾ ಹಸಿರಂತೆ ಕಂಗೊಳಿಸು

ಚಿನ್ನ ವಜ್ರಕಿಂತ ಅತಿಬೆಲೆಯುಳ್ಳದ್ದು
ಹಸಿರು ಬಳೆಗಳಿಗುಂಟೆ ಸರಿಸಮ
ಐದು ಮುತ್ತುಗಳಲಿ ಸರ್ವಶ್ರೇಷ್ಠವಿದು
ಸದಾ ಧರಿಸುವುದೇ ಸತೀಧರ್ಮ

ಅಂದದ ಕೈಯಲಿ ಬಳೆಗಳು ತುಂಬಿರಲಿ
ಸಕಲ ಸೌಭಾಗ್ಯ ನಿನದಾಗಲಿ ಮಗು
ಹಸಿರು ತುಂಬಿರುವ ಭೂಮಾತೆ ನಲಿದಂತೆ
ಮೊಗದಲ್ಲಿ  ತುಂಬಿರಲಿ ಸದಾ ನಗು

          ಶೈಲೂ

 ಕಥಾಗುಚ್ಛವೆಂಬ 
ಹೂಗುಚ್ಛ ದಲಿ ಅರಳಿದ
ಸುಮಗಳು ನಾವೆಲ್ಲಾ
ಪ್ರೀತಿ ಸಿಂಚನವ
ಸಿಂಪರಿಸಿ ಆರೈಕೆಮಾಡುವ
ನಿರ್ವಾಹಕರಿರುವಾಗ
ಬಾಡುವ ಭಯವೂ ನಮಗಿಲ್ಲ
ನಳನಳಿಸಿ ಅಕ್ಷರ ಸೌಗಂಧವ
ಪಸರಿಸೆಲ್ಲೆಡೆ  ಸಾಹಿತ್ಯ ದೇವಿಯ
ಪಡದಡಿ ನಲಿಯೋಣ
ಬನ್ನಿರೆಲ್ಲ...
ಜ್ಞಾನ ರಥದಲ್ಲಿ ವಿರಾಜಿಸುತ್ತಿರುವ
ಸಾಹಿತ್ಯದೇವಿಯ
ಕರಸೇವಕರು  ನಾವು
ಸುಮನದ ಸಮಾನ ಮನಸ್ಕ
ಸ್ನೇಹಿತರೊಡನೆ  
ತಾಯ ಸೇವೆಗೈಯಲು
ಕಂಕಣಬದ್ದರು ನಾವು
ನಿಮ್ಮೊಡನಾಟದ
ರಸಗಳಿಗೆಗೆ ಕಟಿಬದ್ದರು ನಾವು
🙏🙏

 ದ್ರೌಪದಿ ಸ್ವಯಂವರ
******************
ಪಾಂಚಾಲಾಧಿಪತಿ ದ್ರುಪದ ಮಾಹಾರಾಜ
ನಡೆಸಿದ ವೈಖಾನವೆಂಬ ಯಜ್ಞದಿಂದ
ಆವಿರ್ಭವಿಸಿದ ತ್ರಿಭುವನ ಚೆಲುವೆ..!!
ಹೆಸರಿಹುದು ದ್ರೌಪದಿ, ಕೃಷ್ಣೆ, ಪಾಂಚಾಲಿ..!!
ವೃದ್ಧಿಚಂದ್ರನಂತೆ ದಿನಂಪ್ರತಿ ಬೆಳಗುತ್ತಿರುವ
ತ್ರೈಲೋಕ್ಯ ಸುಂದರಿ ಕುವರಿಗೆ
ಅನುರೂಪ ವರನ ಆರಿಸುವ ನಿಮಿತ್ತ
ಸ್ವಯಂವರಕ್ಕೆ ಸಜ್ಜಾಗಿತ್ತು ಪಾಂಚಾಲದೇಶ..!
ಜಗದೇಕವೀರ ಧನಂಜಯ ತನ್ನಳಿಯನಾಗಳೆಂದು
ಅವ ಮಾತ್ರ ಬೇಧಿಸುವ 
ಮತ್ಸ್ಯಯಂತ್ರವ ಪಣವಾಗಿರಿಸಿ
ಗರಗರನೇ ತಿರುಗುವ ಮತ್ಸ್ಯವನಿರಿಸಿ
ಬೇಧಿಸುವವನೇ ವಿಜೇತನವಗೆ ಮಗಳ ಕೊಡುವೆನೆಂದು ಸಾರಿದರು..!
ದೇಶವಿದೇಶದಿಂದಾಗಮಿಸಿದ ರಾಜಕುಮಾರರು
ಕೃಷ್ಣೆಯ ಚೆಲುವಿಗೆ ಬೆರಗಾಗಿ ನಿಂತರು.!
ಧನುವನು ಹೆದೆಯೇರಿಸಿ ಪಂಚಬಾಣಗಳ ಹೂಡಿ
ತಿರುಗುವ ಮತ್ಸ್ಯಯಂತ್ರವ ಭೇಧಿಸುವಲ್ಲಿ ಸೋತರು.!!
ಚೇದಿರಾಜ್ಯದ  ಶಿಶುಪಾಲ ಮಗಧದ ಜರಾಸಂಧ
ಘಟಾನುಘಟಿ ರಾಜರೆಲ್ಲ ಸೋತು ತಲೆತಗ್ಗಿಸಿದರು.!
ಅಂಗರಾಜ ಕರ್ಣ ಹೆದೆಯೇರಿಸಲು ನಡೆಯೇ
ಸೂತಪುತ್ರನ ವರಿಸಲು ನಾನೊಲ್ಲೆನೆಂದಳು ಕೃಷ್ಣೆ..!
ಕ್ಷತ್ರಿಯರೆಲ್ಲ ಕಡೆಗಾಣಿಸಿ ಬಸವಳಿದು ಸೋತಾಗ
ಸಭೆಯಲ್ಲಿದ್ದ ಬ್ರಾಹ್ಮಣ ವರರಾದರೂ 
ಯತ್ನಿಸಬಹುದೆಂಬ ಅಣತಿಯ ಮೇರೆಗೆ
ಕೌರವರ ಉಪಟಳಕೆ ಬೇಸತ್ತು ಬ್ರಾಹ್ಮಣ ವೇಷದಿ 
ತಲೆಮರೆಸಿ ಅಡಗಿದ್ದ ಗಾಂಢೀವಿ ಎದ್ದು ಅಣಿಯಾದನು
ಆವನಿವ ಬ್ರಾಹ್ಮಣ.. ರಾಜಾದಿರಾಜರೇ ಸೋತು ಶರಣಾದಾಗ
ಇವನೇನ ಮಾಡಬಲ್ಲನೆಂದು ನಗುತ್ತಿದ್ದರು ಸಭಿಕರು.!
ದ್ರುಪದನಾಹ್ವಾನ ಮನ್ನಿಸಿ ಯುಧಿಷ್ಠಿರನ ಸಮ್ಮತಿಯ ಮೇರೆಗೆ
ಮನದಲ್ಲೇ ಚಿರಬಂದು ಶ್ರೀಕೃಷ್ಣ ನಿಗೊಂದಿಸಿ
ಸ್ವಯಂವರ ಮಂಟಪದೆಡೆ ಬಂದು..ಧನುವನು
ಲೀಲಾಜಾಲದಿ ಹೆದೆಯೇರಿಸಿದನು..!
ತೈಲಬಾಂಡದಲಿ ನೋಡುತ ಮೇಲಿದ್ದ ಮತ್ಸ್ಯದೆಡೆಗೆ ಲಕ್ಷ್ಯವನಿರಿಸಿ
ಹೂಡಿ ಬಾಣಗಳ ಮತ್ಸ್ಯಯಂತ್ರವ ಬೇಧಿಸಿದ ಪಾರ್ಥನು.!
ಎಲ್ಲೆಲ್ಲೂ ಜಯಘೋಷ ಮಂಗಳವಾದ್ಯ ಮೊಳಗಲು
ಲಜ್ಜೆಯಾಭರಣ ತೊಟ್ಟ ಚೆಲುವಿನರಸಿ ಪಾಂಚಾಲಿ
ವಿಜಯಮಾಲೆಯನು ತೊಡಿಸಿದಳು..!
ಅಪಮಾನಿತರಾದ ನೃಪರೆಲ್ಲ ದ್ವೇಷಾಸೂಯೆಯಲಿ
ಪಾಂಚಾಲನ ಮೇಲೆ ದಂಡೆತ್ತಿ ಬರಲು..!
ವೇಷ ಮರೆಸಿದ್ದ ಭೀಮಾರ್ಜುನರರಪರಿಮಿತ
ಕಾಳಗದ ದೆಸೆಯಿಂದ ದ್ರುಪದ ಜಯಗಳಿಸಿದನು..!
ಸ್ವಯಂವರದಲ್ಲಿ ವರಿಸಿದ್ದ ಪಾಂಚಾಲಿಯೊಡನೆ
ತಮ್ಮ ಕುಠೀರಕೈತಂದು 
ಅಮ್ಮಾ... ಹೆಣ್ಣು ತಂದೆವೆಂದಿದ್ದನ್ನು ಹಣ್ಣೆಂದು ಭ್ರಮಿಸಿದ ಕುಂತಿ
ಸರ್ವರೂ ಸಮಪಾಲಾಗಿ ಹಂಚಿಕೊಳ್ಳಿರೆನಲು..!
ಅಮ್ಮಾ.. ಇದು ಹಣ್ಣಲ್ಲ.. ಹೆಣ್ಣು..
ದ್ರುಪದ ಕುವರಿ ದ್ರೌಪದಿಯ  ಸ್ವಯಂವರ ದಲಿ ಗೆದ್ದು
ವರಿಸಿ ಬಂದಿದ್ದೇವೆನಲು.. ತಾನುಡಿದ ತಪ್ಪಿಗಾಗಿ ಮರುಗಿದಳು..!
ತಾಯ ನುಡಿ ಅನೃತವಾಗಬಾರದೆಂದೆಣಿಸಿ 
ವ್ಯಾಸಮಹರ್ಷಿಗಳಾಣತಿಯಂತೆ
ಪಾಂಡವರೈವರೂ ಕೃಷ್ಣೆಯ ಪತಿಗಳಾದರು..!!
ಹಿಂದಿನ ಜನ್ಮದಲ್ಲಾಕೆ ಶಿವನನ್ನು ಒಲಿಸಿ ನಮಿಸಿ
ಸರ್ವಗುಣಸಂಪನ್ನ ಜಗದೇಕವೀರ ನಾದ
ಪತಿಂದೇಹಿ..ಪತಿಂದೇಹಿ ಎಂದೈದು ಬಾರಿ ಕೇಳಲಾಗಿ..!
ಒಬ್ಬನಲೇ ಸರ್ವಗುಣಸಂಪನ್ನತೆ
ಸಿಗದೆಂಬ ಕಾರಣಕೆ
ಐದು ಪತಿಗಳ ಸತಿಯಾಗೆಂದು ವರ  ಕರುಣಿಸಿದ್ದ ನಿಮಿತ್ತ
ಇಂದಾಕೆ ಪಂಚ ಪಾಂಡವರ ಸತಿಯಾದಳು..!

             ಶೈಲೂ....

 ನನ್ನವನು...
***********

ಎಲ್ಲರಂತಲ್ಲ ನನ್ನವನು
ಕರುಣಾರಸ ಭರಪೂರಹರಿವ
ಕನಸು ಕಂಗಳ ಚೆಲುವ ಸೊಗಸುಗಾರ...

ಮುಗ್ಧಮುಖ ತುಂಬಿಹುದು
ಬೆಳದಿಂಗಳ ಚಂದ್ರಕಳೆ
ಮನಸೆಳೆವ ಮಾಂತ್ರಿಕ ಮೋಡಿಗಾರ...

ನೀಲ ಮೇಘದ ವರ್ಣ
ಮನವಿಹುದು ಹಳದಿಯ ಚಿನ್ನ
ಸಮ್ಮೋಹಕ ನುಡಿಗಳ ಮಾತುಗಾರ...

ತುಸು ಮುನಿಸು,ಪ್ರೀತಿ ಕಡಲು
ಸುಗಂಧಬೀರುವ ಹೂಮನಸು
ತುಂಟತನದ ಭಂಟ ಮೋಜುಗಾರ...

ದಿಟ್ಟ ನಡೆ ಮಾರ್ಮಿಕ ನುಡಿ
ದುಷ್ಟರ ತರಿದು ಶಿಷ್ಟರ ಪೊರೆವ
ಜಗದೊದ್ಧಾರಕ ಕೃಷ್ಣ ಪೊರೆವನೆಲ್ಲರ...

ಹಾಸ್ಯ ಭರಿತ ತುಂಟತನ
ಕದ್ದನವ ಎಲ್ಲರ ಮನ
ಹಸುಮಗುವಿನ ಮನದ ಜೊತೆಗಾರ...

ಸ್ನೇಹ ತೋರಿದರೆ ಭಂಟ
ಪ್ರೀತಿ ಮಾಡಿದರೆ ನೆಂಟ
ಶರಣಾಗತರ ಪೊರೆವ ಕರುಣಾಕರ...

ಹೆಚ್ಚೇನು ಹೇಳಲಿ..?
ವರ್ಣನೆಗೆ ನಿಲುಕನವ
ದಾಟಿಸುವನವ ಭಾವಸಾಗರ...

ಹೃದಯವೈಶಾಲ್ಯತೆಯ ಕಡಲು
ಅಪ್ಪಿದರೆ ತಾಯ್ಮಡಿಲು
ಸರ್ವಸ್ವ ಅವನೆನ್ನ ಮುರಳೀಧರ...

             ಶೈಲೂ....
 ಸುಗ್ಗಿಕಾಲ
*********

ಬಂದಿದೆ ನೋಡು ಸುಗ್ಗಿಕಾಲ
ವರ್ಷದ ದುಡಿಮೆಯ ಪ್ರತಿಫಲ
ಉತ್ತು,ಬಿತ್ತು, ಕಳೆ, ಸುಗ್ಗಿ ಕೊಯ್ಲು
ಇಂದು ಈ ಕಣದಲಿ ಬಟಾ ಬಯಲು

ಮನೆಮಂದಿಗೆಲ್ಲ ಕೈತುಂಬ ಕೆಲಸ
ವರ್ಷಂಪ್ರತಿ ದಿನ ಪ್ರತಿದಿವಸ
ದುಡಿದು ದಣಿದು ಭೂತಾಯಿ ಸೇವೆಮಾಡಿ
ಉದರನಿಮಿತ್ತ ಬೆಳೆದದ್ದು ಕಾಳುಕಡಿ

ಮಳೆ ಚಳಿ ಬಿಸಿಲೆನ್ನದ ಕಾಯಕ
ತುತ್ತು ಕೂಳಿಗೂ ಒಮ್ಮೊಮ್ಮೆ ಕಂಟಕ
ದುಡಿತದ ಪ್ರತಿಫಲಕೆ ಕಾಯಬೇಕು ವರ್ಷ
ರಾಶಿಯಲಿ ಧಾನ್ಯವ ಕಂಡಾಗ ಹರುಷ

ಸುಗ್ಗಿಯೆಂದರೇನೋ ಹಿಗ್ಗು ಮನಕೆ
ತೆನೆಯಲಿ ಪೋಣಿಸಿದ್ದ ಕಾಳ ಹೆಕ್ಕುವ ಬಯಕೆ
ಕೊಯ್ದ ಪೈರು ಕಲ್ಲುಗುಂಡಲಿ ತುಳಿಸಿ
ಬೇರ್ಪಡಿಸಿದ್ದ ಕಾಳ ರಾಶಿಯನ್ನಾಗಿಸಿ

ಹೊಟ್ಟು ಬೇರ್ಪಡಿಸಿ ಗಟ್ಟಿಕಾಳನ್ನಾರಿಸಿ
ತೂರಿ ಕೇರಿ ಜೊಳ್ಳುಗಳ ಪ್ರತ್ಯೇಕಿಸಿ
ರಾಶಿಯಾಗಿಸಿ ಹಣ್ಣುಕಾಯಿತ್ತು ಪೂಜಿಸಿ
ಮೊರತುಂಬಿದ ಕಾಳು ಬಡವನಿಗರ್ಪಿಸಿ

ವಂದಿಸಿ ಬೆಳೆಯಿತ್ತ ಭೂತಾಯಿಗೆ
ಸಹಕರಿಸಿ ಜೊತೆಯಾದ ದನ ಕರುವಿಗೆ
ಬೆಳೆದ ರೈತನಿಗೆ ನಂತರವೇ ತುತ್ತು
ಇದುವೇ ತಾನೇ ಸತ್ಸಂಸ್ಕಾರದ ಗತ್ತು

               ಶೈಲೂ.......

 ಮೌನವೇಕೆ ರಾಧೇ
****************

ಮೌನಕ್ಕೆ ಶರಣಾದೆ ಏಕೆ ಗೆಳತಿ ರಾಧೇ.?
ಮನದಲೇಲಿನಿತು  ಚಿಂತೆ ಆವರಿಸಿದೆ
ನಿನ್ನೀ ಮೌನಕೆ ಬೃಂದಾವನವೇ ಸ್ಥಬ್ಧ
ನೋಡೀ ಪರಿಸರ ತಾಳಿತೆಂತು ನಿಶ್ಯಬ್ದ..!!

ನಿನ್ನ ನಲಿವಿಲ್ಲದೇ ಸೃಷ್ಟಿ ಚೈತನ್ಯಕೆಲ್ಲಿ ನಲಿವು
ಪುಷ್ಪಗಂಧಗಳಲೂ ಇನಿತಿಲ್ಲ ಚೆಲುವು
ನೋಡಲ್ಲಿ ಮಂದಾಲಿನವೂ  ಮೌನವಾಗಿಹ
ಉರಿವ ಸೂರ್ಯನೂ ಅದೇಕೋ ಬಳಲಿಹ.!!

ನೀ ಬೃಂದಾವನದ ಚೆಲುವಿನ ಖನಿ
ಮರೆಯಾಯ್ತೆಕೇ ನಿನ್ನುಲಿತದ ಇನಿದನಿ?
ಮಾಧವನ ಕಾಣದೇ ಬೇಸರವೇ?
ಅವನ ಅನುಪಸ್ಥಿತಿ ಮೌನಕೆ ಕಾರಣವೇ..!!

ಎನಿಹುದೇಳು ಮನದ ನೋವು?
ಶ್ಯಾಮನಿಲ್ಲದಿದ್ದುದಕೇನು ಕೊರಗು?
ಇರಬಹುದವನಿಗೆನೇನೋ ಕೆಲಸ
ಬಿಟ್ಟಿಲ್ಲೇ ಹೋಗಿರುವನಲ್ಲ ಮನಸ..!!

ಅವನ ನೆನಪಿಹುದಷ್ಟು ರಾಶಿ ರಾಶಿ
ಮನವಿರಿಸಿ ಅವನನೆನಪಲ್ಲೆ ಕಾಣೋಣ ಖುಷಿ
ನೋವು ನಲಿವುಗಳನ್ನೆಲ್ಲಾ ಅವನಿಗರ್ಪಿಸಿ
ಸೆಟೆದೇಳು ಗೆಳತಿ ಮೌನ ಮರ್ಧಿಸಿ..!!

ನೆನಪಿಗಿಹುದಲ್ಲ ಅವನ ಕೊಳಲು
ಕೊಳಲಲ್ಲವಿದು  ಅವನದೇ ನೆರಳು
ಸಾವಿರಜನ್ಮಕ್ಕಾಗುವಷ್ಟಿದೆ ಅವನೊಡನಾಟದ ಸುಖ
ಮೌನವ ತೊರೆದೇಳು ಬಾ ಗೆಳತಿ ಧರಿಸುತ ಹಸನ್ಮುಖ..!!

             ಶೈಲೂ......

 ನಯನ
******

ಮನದ ಕನ್ನಡಿಯಿದು ನಯನ
ಅಂದದ ಮೊಗಕೆ ಮುನ್ನುಡಿ ನಯನ
ಮುಖಾರವಿಂದದಲಿ ಚಂದದ ಭಿತ್ತಿ
ಮನದ ಭಾವನೆ ಅರುಹುವ ಅಭಿವ್ಯಕ್ತಿ..!

ಹಾಲಿನ ಬಟ್ಟಲೊಳು ಕಪ್ಪು ದ್ರಾಕ್ಷಿ ಇಟ್ಟಂತೆ
ಹರಿವ ನೀರಿನೊಳು ಮೀನು ಹೊರಳಿದಂತೆ
ಮುಖದ ಕಮಲದಲ್ಲಿ ಜೋಡಿ ಕಮಲವಂತೆ
ಅಬ್ಬಾ..!! ಏನೇನು ಉಪಮೆ ನಯನಕೆ

ಸಂತಸದಿ ಅರಳರಲಿ ನಗುವುದು
ದುಃಖವಾದೊಡೆ ತಾನೇ ಅಳುವುದು
ಆಶ್ಚರ್ಯ ಸಂಭ್ರಮಕೇ ಬೆರಗು ನೋಟ
ಆಹಾ... ನಯನದಲೇನಿನಿತು ಬಗೆ ಬಗೆ ಮಾಟ

ಮನದ ಮಾತುಗಳ ಅರುಹುವುದು ನೋಟ
ಅದೇನು ಕರುಣೆ ಪ್ರೀತಿ ಒಡನಾಟ
ಜಗವನನುಭವಿಸಿ ಕಾಣಲು ಬೇಕು ದೃಷ್ಠಿ
ಆಹಾ.. ಅದೇನು ಸೊಬಗು ಆ ದೇವನ ಸೃಷ್ಟಿ

ಒಂದೊಂದು ಭಾವಕೊಂದೊಂದು ನೋಟ
ಭಯ ರೌದ್ರ ಭೀಕರ ಕರುಣಾ ಶೃಂಗಾರ
ಕೋಪತಾಪಕೂ ಹುಸಿ ಮುನಿಸ ನೋಟ
ಒಳಮರ್ಮವರಿವುದಕೆ ನೇರ ನೋಟ

ಶಾಂತಿಯನರಸಲು ನಯನ ಬುದ್ಧ ಪ್ರಬುದ್ಧ
ಅಂತಃಚಕ್ಷು ತೆರೆದರೆ ಸತ್ಯದರ್ಶನ ಸಂವೃದ್ಧ
ಮನದ ಬಿಂಬದ ಪ್ರತಿಬಿಂಬವೀ ಕಣ್ಣು
ಹೃದಯಭಾಷೆಯನರಿವ ನಯನವೇ  ಹೊನ್ನು

ಸೃಷ್ಟಿ ಸೌಂದರ್ಯ ಸವಿಯೆ ದೇವನಿತ್ತ ವರದಾನ
ದೇಹಸೌಂದರ್ಯಕೂ ಕಾರಣವೀ ನಯನ
ದೃಷ್ಠಿಹೀನರ ಕಂಡು ಕರಗಿ ಮರುಗುವುದು ಮನ
ತಮ್ಮೊಂದಿಗೆ ಮಣ್ಣಾಗಲು ಬಿಡದೆ ಮಾಡಿ ನೇತ್ರದಾನ

             ಶೈಲೂ......

 ನಾವಿಬ್ಬರೊಂದೇ..!!
*****************

ನಾವಿಬ್ಬರೊಂದೇ ಯಾಕೀ ಮೊರೆತ
ಬೇರಾದರೂ ಬೇರಲ್ಲವಿದು  ಆನೃತ
ಪ್ರುರುಷ - ಪ್ರಕೃತಿ ಒಂದಾದ ವೇಷ
ತಿಳಿ ನಾವರ್ಧನಾರೀ ಪುರುಷ

ನಾ ನಿನ್ನ ಕೈಯೊಳ ಕೊಳಲು
ನೀನಾಗಿ ಹೊಮ್ಮಿ ಅದರ ದನಿ
ಬೆಸೆದು ನವ ರಾಗ ಹೊಸೆಯೇ
ಹೊರಹೊಮ್ಮದೇ  ಇನಿದನಿ.?

ನಾನವನಿ ನೀನಾದೆ ಅಂಬರ
ಭೋರ್ಗರೆದು ಪ್ರೇಮ ಧಾರಾಕಾರ
ಎನಿಂಥ ಚುಂಬಕ ಸೆಳೆತವೀ ಅಮಲು.!
ತಡೆಹಿಡಿಯಿತೇ ಕಯ್ಯಲ್ಲಿನ ಕೊಳಲು ?

ತುಸು ಲಜ್ಜೆ ಬೆರೆಸಲಾರೆ ಕಣ್ಣು
ಇಂಥ ಸನಿಹ ಎದುರಿಸಲ್ಹೇಗೆ ನಾ ಹೆಣ್ಣು.!
ನೀಲದೊಳಗೇ ಗೌರ ಮಿಳಿತು
ನೀಲವಾಯ್ತು ಜಗ ಅವನೊಡನೆ ಕಲೆತು

ಹೇಗಿದ್ದರೂ ನಾವಿಬ್ಬರೊಂದು
ಬಿಡಿಸಲಾಗದ್ದು ಅನಂತವೀ ಸಖ್ಯ
ನಿನ್ನೊಳಗೆ ನಾನಾಗಿ ನನ್ನೊಳು ನೀನು
ದೂರಾಗದೆ ಬೆರೆಯುವುದು ಮುಖ್ಯ

              ಶೈಲೂ.....

 ದಾರಿ ಕಾಯುತ ನಿಂತೆ
*******************

ದಾರಿಕಾಯುತಿರುವೆ ನಲ್ಲ
ಇನ್ನೂ ನೀ ಏಕೆ ಬರಲಿಲ್ಲ
ಕನಸುಗಳ ಬೆನ್ನತ್ತಿ ನಿಂತೆ
ನೆನಪುಗಳ ಭಾರಕೆ ಸೋತೆ

ಮನದೊಳು ಅಳತೆ ಮೀರಿದ
ಭಾವಗಳ  ಆಂದೋಳನ
ಮನತುಂಬಿ ಓಡಿ ಬರುವ
ನೆನಪುಗಳ  ಸಮ್ಮಿಲನ

ಅನುರಾಗದ ಹೊಳೆಯಲ್ಲಿ
ಕೊಚ್ಚಿಹೋದ ಆ ಘಳಿಗೆ
ಬಿಡದೆ ಕಾಡುವ ಕನಸುಕಂಗಳ
ತುಂಬಾ ಭಾವಬಿಂಬದ ಮಳಿಗೆ

ಬಿಡದೆ ಭೋರ್ಗರೆವ ನಿನ್ನ
ಭಾವದಲೆಯಲಿ ಕೊಚ್ಚಿಹೋಗಿ
ಹಂಬಲಿಕೆ ಬಲವಾಯ್ತು
ಬರಲಿಲ್ಲೇಕಿನ್ನುನನ್ನ ಹೆಸರು ಕೂಗಿ

ಸಾವಿರ ಕನಸಿಗೆ ರಂಗು ಬಳಿದು
ಕಾದಿರುವೆ ನಿನಗಾಗಿ ಅಂಗಳದಲಿ
ಮಳೆಯಾಗಿ ಹನಿಸಿ ಕಾರ್ಮೋಡ ಕರಗಿ
ಕಾಣಲು ತವಕಿಸುತ್ತಿರುವೆ ಗೋಡೆಗೊರಗಿ

             ಶೈಲೂ.....

 ಮುಗಿಯದ ಕಥೆ
**************

ನೋವುಗಳ ಹಿಂದಿಕ್ಕಿ
ನೋವು ನುಸುಳುವುದಲ್ಲ
ನಗುವೆಂವುದು ಮರೀಚಿಕೆ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ನಾಳೆಗಳಂದದ ಬದುಕಿಗೆ
ಇಂದು ಅಡಿಗಲ್ಲನಿಡಲು
ಕಾಲೆಳೆದು ಹೀಗಳೆವರೆಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಕಂಡ ಕನಸುಗಳನ್ನೆಲ್ಲ
ನನಸಾಗಿಸುವ ಬಯಕೆ
ಚುಚ್ಚಿ ಮನ ಹಿಂಡುವರಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಆಸೆಬಳ್ಳಿಗೆ ನೀರನುಣಿಸಿ
ಹೆಮ್ಮರವಾಗಿಸುವ ಬಯಕೆ
ಚಿಗುರಲ್ಲೇ ಚಿವುಟುವರು ಮಂದಿ
 ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಚಂದದ ಸಾವಿರ ಕುಸುರಿ
ಚಿತ್ತಾರದೆಳೆಯಲ್ಲೂ 
ಕಪ್ಪೊಂದು ಹುಡುಕುವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ರಾಜಾಸನದಿ ಕೂರಿಸಿ
ಸರ್ವಸೇವೆಗೈದರೂ
ತಪ್ಪೊಂದು ಹುಡುಕುವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಅಸನ ವಸನವಿತ್ತು
ತುತ್ತಿತ್ತು ತಣಿಸಿದರೂ
ದ್ರೋಹ ಬಗೆವವರೇ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಕಷ್ಟದಲಿ ಜೊತೆಯಿದ್ದು
ಸಹಕಾರವಿತ್ತರೂ ಕೊನೆಗೆ
ಬೆನ್ನ ಇರಿಯುವ ಮಂದಿ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಸಹಜ ಸ್ನೇಹವನಿತ್ತು
ಅಪ್ಪಿ ಅಧರಿಸಿದರೂ
ತಪ್ಪೇಣಿಸುವವರೆ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಬೆಳಕೀವ ದೀಪದ ಬೆಳಕಿದ್ದರೂ
ಅಡಿಯ ಕತ್ತಲೆಯನೆತ್ತೆತ್ತಿ
ಅಡಿಕೊಳ್ಳುವ ಮಂದಿಯಿವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಜ್ಯೋತಿಯೊಲು ತಾನುರಿದು
ಮನೆಗೆ ಬೆಳಕಾದರೂ ಸಹಿತ
ಹೆಣ್ಣೆಂದು ಜರಿವವರೆ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಹೆತ್ತವರ ಮರೆತು ಕೈಹಿಡಿದವರ
ಅನುಸರಿಸಿ ತೃಪ್ತಿಯಿಂದಿದ್ದರೂ
ತೆಪ್ಪಗಿರರೀಮಂದಿ ಕುಹಕ ನುಡಿವವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಸಹಜತೆಯ ಮರೆತೇಕೆ
ಅಸಹಜತೆಯ ದಾರಿಯಲಿ
ಕುಹಕವಾಡುವರಿವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಮುಗಿಯದೀ ಕಥೆಯ
ಎಂದು ಮುಗಿಸುವೆದೇವ
ಸಹನೆ ತಪ್ಪುವುದರೊಳಗೆ
ಮನ್ನಿಸಿ ಮುಗಿಸಿಬಿಡು ಬಾಳ ವ್ಯಥೆ...

           ಶೈಲೂ......

 ನಾನಾಗಬೇಕಿತ್ತು
***************

ಮೋಡದ ಮರೆಯಿಂದಿಣುಕಿ
ಹಾಲುಚೆಲ್ಲುದಂತೆ ಸುತ್ತಮುತ್ತ
ನಗುವ ಬೆಳದಿಂಗಳ ಕಂಡು
ಉಕ್ಕುಕ್ಕಿ ಹರಿವ ಕಡಲು ನಾನಾಗಬೇಕಿತ್ತು.!

ಇರುಳು ಬಾನಿನ ಲಾಂದ್ರ
ಹೊಳೆದೆಳೆವ ಸಮಯದಲಿ
ತಿಳಿಗೊಳದಿ ಬಿಮ್ಮನರಳಿ
ನಗುವ ನೈದಿಲೆ ಹೂವು ನಾನಾಗಬೇಕಿತ್ತು.!

ಕಾರ್ಮೋಡ ತಾ ಕರಗಿ
ಹನಿಹನಿಯಾಗಿ ಧರೆಗಿಳಿದು
ಭುವಿಯೊಡಲ ತಣಿಸುವ
ತುಂತುರು ಸೋನೆ ಮಳೆ ನಾನಾಗಬೇಕಿತ್ತು.!

ಗುಡುಗು ಸಿಡಿಲಾರ್ಭಟಡಿ
ಧೋ ಎಂದು ಮಳೆ ಸುರಿದಾಗ
ಬೆಚ್ಚಿ ಬೆದರದೆ ತಾನು
ಅಪ್ಪಿ ಅಲಂಗಿಸುವ ಇಳೆ ನಾನಾಗಬೇಕಿತ್ತು.!

ಮಳೆ ಬಿಸಿಲಿನಾಟಕೆ
ಪ್ರತಿಫಲಿಸಿ ಪ್ರತಿದ್ವನಿಸಿ
ವರ್ಣ ಮೇಳಗಳ ಸಂತೆಯಲಿ
ಮನಸೆಳೆವ ಇಂದ್ರಧನುಶ್ ನಾನಾಗಬೇಕಿತ್ತು.!

ಪಚ್ಚೆಗಿಡಗಳಲರಳಿ ಮೆಲ್ಲ
ಸೌಗಂಧದಲೇ ಬಂಧಿಸೆಲ್ಲ
ಕ್ಷಣಿಕ ಬದುಕಿದ್ದರೂ ಸಾಕು
ಅಚ್ಚ ಬಿಳಿಯ ಮಲ್ಲಿಗೆ ನಾನಾಗಬೇಕಿತ್ತು.!

ದೇವ ಆಸೆಯಿಹುದೇನೋ ಬಹಳ 
ನಾ ನೀನಿಟ್ಟಂತೆ ಇರುವ ಮರುಳ
ಆದರೂ ಕೊನೆಗೊಂದಾಸೆ
ನಿನ್ನೊಡಲಲ್ಲಿ ನಲಿವ ಕೈಗೂಸು ನಾನಾಗಬೇಕಿತ್ತು.!

        ಶೈಲೂ.
.
 ಕವಲುದಾರಿ
***********

ಇದು ಮುಗಿಯದ ಬಾಳ ಪಯಣ
ನಿತ್ಯ ನಿರಂತರ ಸಾಗುವುದೇ ಜೀವನ
ಸಾಗುತ್ತ ಸಾಗುತ್ತ ಸವೆಸಿ ಅರ್ಧದಾರಿ
ಧುತ್ತನೆದುರು ನಿಂತಿತೇಕೆ ಈ ಕವಲುದಾರಿ?

ಎತ್ತಕಡೆಗಿನ್ನು ಪಯಣ ತಿಳಿಯದಾಯ್ತೆ
ಇತ್ತಲೋ ಅತ್ತಲೋ ಎತ್ತಲೋ ಎದುರಾಯ್ತು ಚಿಂತೆ
ಎತ್ತ ನಡೆದರೆ ಇಹುದು ಪಯಣ ಸುಗಮ
ತಪ್ಹೆಜ್ಜೆ  ಇಟ್ಟರದು ಕವಲುದಾರಿಯ ಭ್ರಮಾ

ಪ್ರಮುಖ.ಘಟ್ಟವಿದು ಬಾಳ ಪಯಣಕೆ
ನಿರ್ಧರಿಸಲಾಗದು ಏಕೋ ಹೆದರಿಕೆ
ನಿರ್ಣಯದಲಿಹುದು ಬದುಕ ಸಿಹಿ ಕಹಿ
ತಪ್ಪುದಾರಿಯ ನಡಿಗೆ ಭರಿಸಲಾಗದ ಕಹಿ

ತೋಚದಾಗಿದೆ... ಈಗ ಎತ್ತ ನಡೆಯಲಿ?
ಭರವಸೆಯ ಜ್ಯೋತಿ ಬೇಕಿದೆ  ದೃಢ ನಿಲುವಿನಲಿ
ಕರಹಿಡಿದೆನ್ನ ಮುನ್ನೆಡೆಸು ಹೇ ಮಾಧವಾ
ಸರಿದಾರಿಯಲೆನ್ನ ನಡೆಸು ಹೇ ಯಾದವಾ..

           ಶೈಲೂ.....

 ಪರಿಸರ ಸಂರಕ್ಷಣೆ
***************

ಜೀವ ಸಂಕುಲದ ಉಳಿವಿಗಿರಬೇಕು ಕಾಡು
ಗಿಡಮರವ ಕಡಿದು ಬೋಳಾಗಿಸಿ ಮಾಡಿಹರು ನಾಡು
ಅರಿವಿನ ಕೊರತೆಗೆ ವಾಯು ನೆಲ ಜಲ ಕಲುಷಿತ
ಅವಿವೇಕದ ನಡತೆಗೆ ಪರಿಸರವೇ ದೂಷಿತ

ಪರಿಶುದ್ಧ ಗಾಳಿಗೂ ಬಂತು ಸಂಚಕಾರ
ಗಿಡಮರವ ಕಡಿದು ತಂಪಿಲ್ಲದೆ ಆಹಾಕಾರ
ಅಧಿಕ ಹೊಗೆಯುಗುಳುವ ಕಾರ್ಖಾನೆ ವಾಹನ
ಪರಿಶುದ್ಧ ಗಾಳಿಯಿರದೆ ಜೀವಕೆಲ್ಲಿ ಚೇತನ

ಜೀವ ಜಲಕೂ ತ್ಯಾಜ್ಯ ವಸ್ತುಗಳ ಸುರಿವರೀ ಜನ
ಶುದ್ಧತೆ ಇನ್ನೆಲ್ಲಿ ಕೊಳಕಿನಿಂದಲೇ ರೋಗರುಜಿನ
ಹಸಿರೆಲ್ಲ ಕನಸು ಬರಿದೇ ಕಾಂಕ್ರೀಟ್ ಕಾಡು
ಮುಂದೊಮ್ಮೆ ಕಾದಿದೆ ಮನುಜನಿಗೆ ನಾಯಿಪಾಡು

ಹಸಿರಿನ ಸ್ವಚ್ಛ ಪರಿಸರ ಜಗದ ಜೀವನಾಡಿ
ಗಿಡನೆಡಿ ಮುಂದೊಮ್ಮೆ ಅದುವೆನಮ್ಮ ಒಡನಾಡಿ
ಮನುಜನ ಕೈಯಲ್ಲಿದೆ ಅಳಿವುಉಳಿವಿನ ಪ್ರಶ್ನೆ
ಮರೆಯದೇ ಮಾಡಿ ಪರಿಸರ ಸಂರಕ್ಷಣೆ

             ಶೈಲೂ.....

ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮಾತು ಮುತ್ತಿನ ಹಾರದಂತಿರಲಿ
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..
ಗುರುಹಿರಿಯರಲ್ಲಿ ಗೌರವಾದರದ  ಬೇಕಂತೆ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು..
ತರ್ಕದಲಿ ಮಾತು  ಅತಿ ತೂಕವಿದ್ದರೆ ಸೊಗಸು.. 

ವಿತಂಡವಾದದಲಿ ಮಾತು ಮಣಿಸುವಂತಿರಲಿ..
ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..
ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..
ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..

ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ..
ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ..
ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು..
ಹಿಡಿತವಿರೆ ಮಾತಿನಲಿ ಅದೇ ಸೌಜನ್ಯದ ಹೆಗ್ಗುರುತು..

           ಶೈಲೂ.....
,


ಹಾರೈಕೆ... ಅರಿಕೆ
***************


ಕೋರುವೇ ಶುಭಹಾರೈಕೆ
ಹೊಸಬಾಳಿಗಡಿಯಿಟ್ಟ ದಿನಕೆ
ನಲಿವು ಗೆಲುವಲಿ ಜೊತೆಯಾದ
ನವ ಬಾಂಧವ್ಯ ಬೆಸೆದ ಕ್ಷಣಕೆ

ಒಲಿದ ಮನವೆರಡು ಕಲೆತು
ಸಂಸಾರ ನೊಗವ ಹೊತ್ತು
ಬಾಳ ಹಾದಿಯ ಪಯಣ
ಜೊತೆಗೂಡಿ ನಡೆದ ದಿನಕೆ

ಸರಸವಿರಸಗಳನು ಗೆದ್ದು
ನವಿರಾದ ಪ್ರೀತಿಯ ಹೊದ್ದು
ಬಾಳ ನೌಕೆಯ ಪಯಣ
ನಲಿದು ಸಾಗುವ.ದಿನಕೆ

ಶೈಲೂವಿನ ಬಯಕೆಯಿದು
ನಲ್ಮೆಯ ಹಾರೈಕೆಯಿದು
ದುಃಖ ದುಮ್ಮಾನಗಳ ಮರೆತು
ತುಂಬಿ ಬರಲಿ ಹೊಸತು

ಸಂಭ್ರಮದ ದಿನವಿಂದು
ದುಪ್ಪಟ್ಟಾಗಲಿ ಹರುಷ
ಸವಿಯಬೇಕು ಪ್ರೀತಿ ಜೇನು
ಅನಂತವಾಗಲಿ ರಸನಿಮಿಷ

          ಶೈಲೂ.....

ಪ್ರೇಮ ಸಂಭಾಷಣೆ
****************
ಎನಿತು ಚಂದವೇ ಸಖಿ
ಮುಗ್ಧಸ್ನಿಗ್ದ ಸೌಂದರ್ಯ
ನಕ್ಕರೂ ಕಾಣದಂತ
ಮುಗುಳುನಗೆಯ ಮಾಧುರ್ಯ

ಹೊಗಳಿದ್ದು ಸಾಕು ಕೃಷ್ಣ
ನೀನೇ ಸೌಂದರ್ಯದ ಗಣಿ
ನಿನ್ನ ಕಣ್ಣ ಕಾಂತಿಯಲ್ಲೇ
ಅಡಗಿಹನು ದಿನಮಣಿ

ಇಲ್ಲ ರಾದೇ ನೀನೇ ಚಂದ
ಕದಪುಗಳಲಿ ಇಹ ಚಂದಿರ
ಅರ್ಧ ತೆರೆದ ನಯನದಲೇ
ಇಹುದು ತಾರಾ ಮಂದಿರ

ಬಾಯಲ್ಲೇ ಅಡಗಿಸಿರುವೆ 
ಚತುರ್ದಶ ಭುವನಲೋಕ
ಅರಿಯಲಿ ಹೇಗೇಳು ನಿನ್ನ
ಕೃಷ್ಣ ನಾನಾದೆ ಮೂಕ

ಬಿಡು ಬಿಡು ಅದೆಲ್ಲ ಸಖಿ
ಅರಿಯಲಾಗದ ನಿಗೂಢ
ನಿನ್ನ ಸೌಂದರ್ಯ ಸೆಳೆತಕೆ
ವಶವಾಗಿ ನಾ ಧಿಗ್ಮೂಢ

ತುಂಟತನದ ನೋಟದಲ್ಲೇ
ಸೆಳೆದು ಬಿಟ್ಟೆ ಮನಸ್ಸಸನ್ನ
ಹೇಳಲೇನಿದೆ ಮಾಧವಾ
ನೀನೇ ನನ್ನ ಮನದನ್ನ

             ಶೈಲೂ......

 ಪ್ರೇಮ.ಸಂಭಾಷಣೆ
*****************

ನುಡಿಸುವುದು ಹೇಗೆ
ಕೃಷ್ಣ ನಿನ್ನ ಕೊಳಲು
ನುಡಿಸಿ ಮರೆಯಬೇಕಿದೆ
ನನ್ನ ಮನದ ಅಳಲು

ಹಿಡಿಯಲ್ಹೇಗೆ ಕೈಯಲಿ
ಯಾವುದು ತುದಿ ಮೊದಲು
ತುಟಿಯಲಿಟ್ಟು ಉಸಿರು ತುಂಬಿ
ಹೇಳಿಕೊಡು ನುಡಿಸಲು

ಶ್.!! ಸುಮ್ಮನಿರು ರಾಧೇ
ಇಲ್ಲ ಸಮಯ ನುಡಿಯಲು
ಸ್ವರ್ಗ ಸುಖವ ನೀಡುತಿದೆ
ಪ್ರೇಮ ತುಂಬಿದ ಮಡಿಲು

ತುಂಬಿ ನನ್ನ ಕಣ್ಣಲೇ ನಿನ್ನ
ಮರೆವೆ ಜಗದ ಪರಿವೆಯ
ಸ್ಫೂರ್ತಿ ನೀನೇ ಮುನ್ನಡೆಸಲು
ಶಕ್ತಿ ನೀನೇ ಅರಿತೆಯಾ

ಸಾಕು ಬಡಿವಾರ ಬಿಡು
ಬರಿದೇ ಮಾತಿನ ಮಲ್ಲ
ನುಡಿಸಲ್ಹೇಗೆ ಹೇಳಿಕೊಡು
ಊದಬೇಕು ಬಿದಿರುಕೊಳಲ

ನನ್ನೆದೆಯ ಮಾತುಗಳ
ಹಾಡಾಗಿಸಿ ನುಡಿಸಿ
ತುಂಬ ಬೇಕು ಪ್ರೇಮಭಕ್ತಿ
ನಿನ್ನೊಲುಮೆಯಲಿ ಕರಗಿ

ನುಡಿಸಲಾರೆ ಬಿಡು ಸಖಿ
ಹೊಮ್ಮುವ ರಾಗ ನೀನೇ
ಕರದಲಿ ನವಿರಾಗಿ ಹಿಡಿದ
ಬಿದಿರು ಕೊಳಲು ನಾನೇ

ನಿನ್ನ ಕೈಯ ಹಿಡಿತದಲಿ
ಮೆರೆವ ಕೊಳಲು ನಾನು
ಮಾಂತ್ರಿಕ ಸ್ಪರ್ಶದಲೇ
ಮಿಡಿವ ನಾದ ನೀನು

ನಾನು ನೀನು, ನೀನು ನಾನು
ಸೇರಿದರೇ ನವರಾಗ ತಾನೇ
ವೇಣು ನಾನು ನಾದ ನೀನು
ನುಡಿಸಿದರೇ ಸ್ವರ್ಗ ತಾನೇ

             ಶೈಲೂ......
[
 ಬರೆಯಲೇ  ಗೆಳೆಯ 
ನಿನಗಾಗಿ ಕವಿತೆ
ತುಂಬಿ ಅದರಲ್ಲಿ
ಸಿರಿಸ್ನೇಹ ಮಮತೆ
ಬರದಿರಲಿ ಎಂದೂ
ಸ್ನೇಹಕ್ಕೆ ಕೊರತೆ
ಸಂಭ್ರಮದ ಬದುಕಲಿ
ಬೆಳಗಲಿ ಘನತೆ


    ನನ್ನ ಆತ್ಮ ಸಂಗಾತಿ - ಪುಸ್ತಕ
**************************

ಪುಸ್ತಕಗಳ ಸಂಬಂಧ
ಮಸ್ತಕಕೆ ಅನುಬಂಧ
ಜ್ಞಾನ ದಾಹವ ತಣಿಸೋ
ಅಮೃತ ಕಲಶವೇ ಪುಸ್ತಕ

ಬಾಳಿಗೆ ಒಡನಾಡಿಯಿದು
ನೋವು.ದುಃಖವ ಮರೆಸಿ
ನಿತ್ಯ ರಸದೌತಣವೀವ
ಆತ್ಮ ಸಂಗಾತಿ ಪುಸ್ತಕ

ಅರಿವಿನ ಹರಿವು ನಿತ್ಯ
ಮೌಢ್ಯ ಹರಿಸುತ ಸತ್ಯ
ಜ್ಞಾನ.ಸೆಲೆಯ ಮೂಲ
ಅಜ್ಞಾನದ ತೆರೆ ನಿರ್ಮೂಲ

ನೋವು ನಲಿವಿಗೆ ಗೆಳೆಯ
ತುಂಬುತ ಸದಾಶಯ
ತಿಳಿಸುತ್ತ  ಅಕ್ಕರದ ತಿಳುಹು
ಹೊತ್ತಿಗೆಯ ಮಹತ್ವದರಿವು

ಇರಲೆಲ್ಲರಿಗೂ ಪುಸ್ತಕ ಜ್ಞಾನ
ತೊಡೆಯುತ್ತ ಮೌಢ್ಯ ಅಜ್ಞಾನ
ಮೂಡಲಿ ಸಾಹಿತ್ಯ ಜಿಜ್ಞಾಸೆ
ಅದುವೇ ಜ್ಞಾನದ ಪರಿಭಾಷೆ

             ಶೈಲೂ....
[ಎಲ್ಲವೂ  ನೀನೇ
*************

ನನ್ನೊಲವ ಮಂದಿರದಿ
ನೆಲೆಸಿಹ ಮೂರುತಿ ನೀನೇ
ಕಿರುನಗೆಯ ಜ್ಯೋತಿಯನು
ಬೆಳಗುವವನೂ ನೀನೇ

ನನ್ನೊಲವ ಬದುಕಿನಲಿ
ಬೆಳಕಂತೆ  ತಾ  ಬಂದು
ಕಹಿಯ ಕತ್ತಲ ದೂಡಿ
ಬಾಳು ಬೆಳಗುವವ ನೀನೇ

ನನ್ನೊಲವ ಹೂ ಬನದಿ
ಬಿರಿದು ಮಲ್ಲಿಗೆಯಂತೆ
ಸೊಗವಿತ್ತು  ಹೂ ಬನಕೆ
ಗಂಧ ಪಸರಿಸಿದವ ನೀನೇ

ನನ್ನೊಲವ  ಆಗಸದಿ
ಸರಿಸಿ ದುಃಖದ ಮೋಡ
ಶುಭ್ರಾಗಸದಿ ನಗುತ
ಪ್ರಭೆ ಬೀರೋ ಸೂರ್ಯನೂ ನೀನೇ

ಅಡಗಿ  ಮೋಡದ ಹಿಂದೆ
ಇಣುಕಿಣುಕಿ  ನೋಡುತಲಿ
ಒಲವ ಅಮೃತದ ಧಾರೆ
ಸುರಿವ ಚಂದ್ರಮನೂ  ನೀನೇ

ಬಿರಿದ ಮಲ್ಲಿಗೆಯಂತ
ಮನದ ಕುಸುಮದ ಜೇನು
ಮೊಗೆಮೊಗೆದು ಹೀರುವ
ನನ್ನೊಲವ ಭ್ರಮರವು ನೀನೇ

ಒಲವ ಸುಂದರ ಬದುಕು
ತೂಗೋ ಉಯ್ಯಾಲೆಯ ತೆರದಿ
ಹಾಗೊಮ್ಮೆ ಹೀಗೊಮ್ಮೆ ಅಳಿಸಿ ನಲಿಸಿ
ಜೀಕುವವನೂ  ನೀನೇ

ನಾ  ಏನ ಹೇಳಲಿ ಕೃಷ್ಣ
ನನ್ನದಿನಿತೂ ಇಲ್ಲ,, ಜಗವ
ಮಾಯೆಯೋಳಾಡಿಸೋ
ಸರ್ವೋತ್ತಮನೂ  ನೀನೇ

             ಶೈಲೂ....

ಹೇಳಲಿ ಹೇಗೆ.?
*************

ಹೇಳಲಿದೆ ಬೇಕಾದಷ್ಟು
ಹೇಳಲಾರದ ಬಿಕ್ಕಟ್ಟು
ಹೇಳಲೆಂತು ಮನದ ಮಾತು
ಹೇಳೆ ನೋವಾದರೆಂತು?

ಹೇಳುವಾಸೆ ಎಲ್ಲ ನಿನಗೆ
ಹೇಳಿದರೆ ಹೇಗೋ ನಿನ್ನ ಬಗೆ
ಹೇಳದೇನೋ ತಳಮಳ
ಹೇಳಲೆಂತರಿಯಲಿ ನಿನ್ನೊಡಲ

ಹೇಳೆಂದರೂ ನಾ ಹೇಳಲೇನು?
ಹೇಳದಿರೆ ತಪನ ಬಲ್ಲೆಯೇನು.?
ಹೇಳದೆಯೂ ನೀನರಿಯಬೇಕು
ಹೇಳಿ ಕೇಳೇಕೆ ತಿಳಿಯಬೇಕು?

ಹೇಳಿ ಬಂದೆಯೇನು ಒಳಗೆ
ಹೇಳದೇ ಹೋದ್ದದ್ದೇಕೆ ಹೊರಗೆ
ಹೇಳಲಿಲ್ಲವೇನೂ ವಿಷಯ?
ಹೇಳೆ ಸಂತಸ ನೀ ಬಲ್ಲೆಯಾ

ಹೇಳಲೇನು ಮನದ ಮಾತ
ಹೇಳಲ್ಹೇಗೆ ಕಾರಣವಿಲ್ಲದೆ ಖಚಿತ
ಹೇಳಬೇಕೆಂದರೂ ಬರಲೊಲ್ಲದು
ಹೇಳಿದ್ಯಾತರ ಗೊಂದಲ ಮನದ್ದು

            ಶೈಲೂ.....

 ಹೊಲೆದಾಟ ಸುಲಭದ್ದಲ್ಲ
ಸರಿಸುತ್ತಿರಬೇಕು ವಸ್ತ್ರವ ಮೆಲ್ಲ
ಮೈಮರೆತರೆ  ಕೈಯೊಳಗೆ ಸೂಜಿ
ಚಾಕಚಕ್ಯತೆಯಿರೆ ಉತ್ತಮ ದರ್ಜಿ

ವಸ್ತ್ರದ ಮೇಲೆ ವಿವಿಧ ವಿನ್ಯಾಸ 
ಬಣ್ಣದ ಬಳಪದಿಂದ ಚಿತ್ರೀತ ನ್ಯಾಸ
ಚಕಚಕನೆ ಚಲಿಸಿ ಕತ್ತರಿ
ಬಲು ಚಂದ ಕತ್ತರಿಸುವ ಪರಿ

ಮಾರುದ್ಧದ ಬಟ್ಟೆ ನೂರಾರು ಪೀಸು
ಒಂದಕೊಂದ ಜೋಡಿಸ್ಹೊಲೆಯೇ ಜೋಶು
ನಾಜೂಕಿನಲಿ ಮಾಡಿ ಕುಸರಿ 
ಸುಂದರ ವಸ್ತ್ರದನುಬಂಧದ ಪರಿ

ಹೊಲೆಯಬೇಕಿದೆ  ಹೊಲಿಗೆ
ಬಂಧ ಕಳಚಿದ ಬದುಕ ಬಿರುಕಿನ ನಡುವೆ
ಹಾಕಿ ಎಲ್ಲ ತೂತುಗಳಿಗೆ ತೇಪೆ
ಬಾಂಧವ್ಯದ ಬೆಸುಗೆಯಿದ್ದರೆ ಹೊಳಪೇ..!

ಆಗಬೇಕಿದೆ ಸೃಜಿಸುವ ಯಂತ್ರ
ಬಿತ್ತಿ ಎಲ್ಲರೊಳಗೆ ಶಾಂತಿ ಮಂತ್ರ
ಬಿರುಕು ಕಾಣದಂತೆ ಹೊಲೆದು
ಹೊಂದಾಣಿಸೆ ಚತುರತೆ ಮೆರೆದು

: ದಿಗಂತ
*******
ಹೇ ದಿಗಂತ... ನೀನನಂತ
ವರ್ಣಿಸಲಿ ನಿನ್ನಂಏನಂತ?
ಮಿತಿಯುಂಟೇನು‌  ಪರಿಧಿಗೆ
ಸಕಲ ಬ್ರಹ್ಮಾಂಡ ನಿನ್ನೊಳಗೆ

ಅಷ್ಟದಿಕ್ಕಿಗೂ ವ್ಯಾಪಿಸುತ
ಅದರಾಚೆ ಪರಿಧಿ ಪಸರಿಸುತ
ವಿಸ್ತರಿಸುತ್ತಾ  ದಿಗ್ದಿಗಂತ
ವ್ಯೋಮಾಕಾಶ ನಿನದೇ ಪೂರ್ತ

ಜಗದಗಲ ಮುಗಿಲಗಲ ವ್ಯಾಪ್ತಿ
ಅಂಬರ ಆಕಾಶ ದಿಗಂತ ದೀಪ್ತಿ
ಮಿತಿಯೆಲ್ಲಿದೆ ಅನಂತ ದಿಗಂತಕೆ
ಹಿಗ್ಗಿ ಹಿರಿದಾಗಿ ಬೆಳೆದ ಅನಂತಕೆ

ಎತ್ತರೆತ್ತರಕೆ ಮುಗಿಲನೂ ದಾಟಿ
ಬೆಳೆಯಲಿದೆ ದಿಗಂತವನೂ ಮೀಟಿ
ಬೆಳೆವಮನಕೆಲ್ಲಿಯ ಇತಿಮಿತಿ
ಬೆಳೆಯಲಿದೆ ಜೀವನ ಪೂರ್ತಿ

                ಶೈಲೂ....
[ ಎಂದೂ ಬರೆದಿರದ ಸಾಲುಗಳು
**************************

ಬಾಳ ಹೊತ್ತಿಗೆಯಲಿ
ಖಾಲಿ ಖಾಲಿ ಪುಟಗಳು
ಬರಿದಾದ ಮನದಂಗಳದಿ
ಬರೆದಿರದ ಸಾಲುಗಳು

ಬರೆಯಬೇಕೆಂದರೂ ಬಾರದು
ಒಳಮನದ ನೋವುಗಳು
ಅಕ್ಷರದಲ್ಲಡಗಿಸಲಸಾಧ್ಯ
ಬರಿದಾದ ಪದಪುಂಜಗಳು

ಕನಸಲ್ಲಿ ಕಾಡಿದ್ದ ನವಿರು ನೆನಪು
ಹಗಲಲ್ಲಿ ಕಂಡಿದ್ದ ಸವಿಗನಸು
ತುಸು ಕೋಪತಾಪ ಹುಸಿಮುನಿಸು
ಎಂದೂ ಬರೆದಿರದ ಸಾಲಾಯ್ತು

ಕಂಗಳಿಂದಿಳಿದಿದ್ದ ಕಂಬನಿ ಲೆಕ್ಕ
ನವಿರಾದ ಪ್ರೇಮದ ಪುಳಕ
ಬರೆಯಲಾರದ ಕವನದ ಶೈಲಿ
ಬರಿದೇ ಖಾಲಿ ಖಾಲಿ ಖಾಲಿ

           ಶೈಲೂ.....
[
 ಅದೇನಿಂತು ನಾಚಿಕೆ ಗೆಳತಿ
ನೀ.ಸೌಂದರ್ಯದ ಒಡತಿ
ಮುಚ್ಚಿದ್ದೇಕೆ ಅರೆಬರೆ ಕಣ್ಣು
ನೀನೊಂದುಸವಿಯಾದ ಹಣ್ಣು

ಆಹಾ ಕೆಂಪಿನ ಚಂದದ ತುಟಿ
ಅಡಗಿದ್ದೇಕಲ್ಲಿ ದಾಳಿಂಬೆ ಕಾಳು
ಸೇಬನ್ನೂ ನಾಚಿಸುವ ಕದಪು
ಹೆಣ್ಣೇ ಏಕಿಂತು ವೈಯ್ಯಾರ ಒನಪು

ಕಾಮನ ಬಿಲ್ಲಂತೆ ತೀಡಿದ ಹುಬ್ಬು
ಚಂದ್ರಕಾಂತಿಯೂ ನಿನ್ನೆದುರು ಮಬ್ಬು
ಅರೆಬಿರಿದ ತುಟಿಯ ಮಾಸದ ನಗು
ಮರೆಯಲಾರೆ ಗೆಳತಿ ಸದಾನಿನ್ನದೆ ಗುಂಗು

ಮೇಘಮಾಲೆಯೇನು ನಿನ್ನ ಹೆರಳು
ತೂಗಾಡುವ ಚೂಪು ಮುಂಗುರುಳು
ಆಹಾ ಅದೇನಂತ ನಾಚಿಕದದ್ಭುತ
ನಸು ನಾಚಿಕೆಯಲೇ ಇತ್ತೆಯೇನು ಸಮ್ಮತ

ಮಲ್ಲೆ ಮುಡಿದ ಮನಸೆಳೆದ ನಲ್ಲೆ
ನೀನಾರ ಕುಂಚದ ಕಲೆಯ ಬಲೆ
ಮನಸೆಳೆಯಲೇ ಕಡೆದನೇನು ಚತುರ
ಸೆರೆಯಾದೆ ನಾ ನಿನ್ನೊಲವೇ ಮಧುರ

          ಶೈಲೂ.....
[ದ್ರೋಣ
*******

ಅಂಬಾರಿ ಹೊರುವ ದ್ರೋಣ
ಪಾಪ ತೊರೆದುಬಿಟ್ಟ ಪ್ರಾಣ
ಭಾರೀ ಆಕಾರ ಧೀರ ಗಂಭೀರ
ಭುವನೇಶ್ವರಿಗೆ ಸೇವೆಯಿತ್ತಿದ್ದ ಅಪಾರ

ದಸರಾ ದಿಬ್ಬಣದ ಮುಖ್ಯಸ್ಥ
ಚಂದಾಲಂಕಾರ ಸಾಲಂಕೃತ
ಶಿಸ್ತಿನ ಸಿಪಾಯಿ ಮೆರವಣಿಗೆ
ನಿನ್ನಿಂದಲೇ ಮೆರುಗು ಅಂಬಾರಿಗೆ

ಅದೆಷ್ಟು ಹೊತ್ತು ಮೆರೆದಿದ್ದೆ ಭಾರ
ಸಾವಿರಾರು ಕಿಲೋ  ಬೆಳ್ಳಿ ಬಂಗಾರ
ಭಾರದಬ್ಬರಕೆ ಹೇಳು ಆಯಾಸವಾಯ್ತೆ
ಮಾಗಿ ಬಾಗಿದ ಜೀವಕೆ ವಯಸ್ಸಾಯ್ತೆ

ನಾಗರಹೊಳೆ ಅರಣ್ಯದ ದೊರೆ
ಇಳಿಸಿದೆ ಭೂಮಿ ಋಣದ ಹೊರೆ
ಗಜರಾಜ ನಿನಗಿದೋ ಅಶ್ರುತರ್ಪಣ
ದಸರ ಸಂಭ್ರಮವಿನ್ನು ಭಣ ಭಣ

          ಶೈಲೂ.....

 ಮನದ  ಮಾತು
*************

ಮನವು ಹೇಳುತಿದೆ
ಮನದೊಳಗಿನ ಮಾತು
ಮನವಿರಿಸಿ ಕೇಳಿದರೆ
ಮನವರಿಕೆಯಾದೀತು

ಮನದ ಮಾತಿದು ಕೇಳು
ಮನವನಾವರಿಸಿರುವೆ ನೀನು
ಮನ ಮತ್ತೆ.ಹೇಳುತಿದೆ
ಮನದೊಡೆಯ ನೀನು

ಮನದ ಭಿತ್ತಿಯೊಳಗೆ
ಮನಸಿಟ್ಟು ನೆಟ್ಟ ಚಿತ್ರ
ಮನಮುಟ್ಟುವಂತಿದೆ
ಮನದನ್ನ ನೀ ಕೇಳು

ಮನವೇಕಿಲ್ಲ ನಿನಗೆ.?
ಮನದ ಮಾತು ಕೇಳಲು
ಮನಸು ಮಾಡೆನ್ನ ಚೆನ್ನ
ಮನವನರಿತು ನೋಡು

ಮನದೊಳಗೆ ಮುಳುಗಿಹುದು
ಮನಸ್ಸೆಂಬ ಸ್ವಾತಿಮುತ್ತು
ಮನವಿತ್ತು  ಚಿತ್ತೈಸು
ಮನಸದು ನಿನ್ನದೇ ಸ್ವತ್ತು

            ಶೈಲೂ......
ಕಾರ್ಮಿಕ ದಿನಾಚರಣೆ
*******************

ಬಂಡವಾಳಶಾಹಿಗಳ ಹಿಡಿತದಲಿ
ದುಡಿವ ವರ್ಗವಿದು ನಿತ್ಯ ನರಳುತಲಿ
ಶೋಷಣೆಗೆ ಒಳಪಟ್ಟ ಶ್ರಮಿಕವರ್ಗ
ಸಿಡಿದು ನಿಂತಾಗ ಆಯ್ತು ಕಾರ್ಮಿಕ ಪರ್ವ

ಅನಿರ್ದಿಷ್ಟ ಅವಧಿಯ ದುಡಿತದ ಶ್ರಮ
ಶ್ರೀಮಂತರಿಗಾಗಿಯೇ ದುಡಿವ ಕರ್ಮ
ನಿರಂತರ ಶೋಷಣೆಯ ವಿರುದ್ಧ ಹೋರಾಟ
ಫಲನೀಡಿತ್ತು 8 ಗಂಟೆಗಳ ದುಡಿತದ ಹಠ

ಸರ್ಕಾರದ ಸ್ವಾಮ್ಯದಡಿಯ ಸಂಘಟಿತರು
ಖಾಸಗಿಉದ್ದಿಮೆಗಳಲಿ ದುಡಿವ ಅಸಂಘಟಿತರು
ನಿರ್ಧಿಷ್ಟ ಕೂಲಿಯದು ಗಗನ ಕುಸುಮ
ದಿನಗೂಲಿ ಲೆಕ್ಕದಲೂ ದುಡಿಮೆ ಅಸಮ

ಶೋಷಣೆಯಲೇ ಬದುಕುತ್ತಿರುವ ಕಾರ್ಮಿಕ ಸಂತ
ಅವರ ದುಡಿಮೆಯಲ್ಲಿ ದುಪ್ಪಟ್ಟಾದ ಶ್ರೀಮಂತ
ದುಡಿವವರು ದುಡಿದು ದುಡಿದೂ ಸೋಲು
ಶ್ರಮವಿತ್ತರೂ ಕೊನೆಗೆ ಹಸನಾಗಲಿಲ್ಲ ಬಾಳು

ಇರಬೇಕು ಕಾರ್ಮಿಕರಲಿ ಐಕ್ಯತೆಯ ಮಂತ್ರ
ಶ್ರಮಿಕರಿಗೆ ನೆರವಾಯ್ತು ಒಕ್ಕೂಟ ಸೂತ್ರ
ಬಂಡವಾಳಶಾಹಿ ವಿರುದ್ಧ ಕೂಗು ಹೋರಾಟ
ಕಾರ್ಮಿಕ ದಿನಾಚರಣೆ ಎಂಬ ಆವಿಷ್ಕಾರ

ದುಡಿದು ದುಡಿದೂ ಬಸವಳಿದ ಕಾರ್ಮಿಕ
ಇಂದೊಂದು ದಿನವಾದರೂ ವಿಶ್ರಾಂತಿ ಕಾಯಕ
ಅಮರವಾಗಲಿ ನಿಮ್ಮ ದುಡಿತದ ಫಲದ ಗದ್ದುಗೆ
ಜಯವಾಗಲೀ ಕಾರ್ಮಿಕ ದಿನಾಚರಣೆಯ ಹಾದಿಗೆ

                ಶೈಲೂ.....
[: ಕಿಟಕಿಬಳಿ ನಿಂತವಳನ್ನು
ಮುದ್ದಿಸಿದನೇನು ಭಾನು.?
ಸುಳಿದು ಕಿಂಡಿ ಕಿಂಡಿಯಲಿ
ಬರಸೆಳೆದು ಅಪ್ಪಿದನೇನು.?

ಆಗಿರಬೇಕು ಪ್ರಣಯದಾಸೆ
ದಂತದ ಗೊಂಬೆಯ ಕಂಡು
ಇಣುಕಿಣುಕಿ ನೋಡುತಿರುವ
ಚಂದದ ಪರಿಯ ಕಂಡು

ಬೆಚ್ಚಿದ್ದಳಂದು  ಸಂಜ್ನ್ಯಾ
ಪ್ರಖರ ಶಾಖವ ಕಂಡು
ಬೇಸರವಾಗಿರಬೇಕು ಪಾಪ
ಬರಿದೇ ಛಾಯೆಯನುಂಡು

ಎಳೆ ಬಿಸಿಲ ಶಾಖಕೆ ಮೈಯೊಡ್ಡಿ
ನಿಂತ ವೈಯ್ಯಾರಿಯ  ಸ್ಪರ್ಶಕೆ
ಭಾಸ್ಕರ ನೇ ಬಿಸಿ ಬಿಸಿಯಾಗಿ
ಬೆವರಾಗಿ ಸುರಿದು ಸರಿದ ನೇಪಥ್ಯಕೆ
       ಶೈಲೂ...
[03/05 9:32 am] drbnshylaramesh: ಮಾತಿನ ಮಲ್ಲನ ಮೌನ ಮೆರವಣಿಗೆ
ಬಾಳ ಪುಟರ ಕೊನೆ ಹಾಳೆಯ ವರೆಗೆ
ನಾಟಕ ಪರದೆಯ ಅಂಕವು ಜಾರಿ
ಜೀವನ್ನಾಟಕ ಮುಗಿಸಿದ ಸೂತ್ರಧಾರಿ

ಕರುನಾಡ ಕಣ್ಮಣಿ ನರಸಿಂಹಮೂರ್ತಿ
ರಂಗಭೂಮಿಯಲ್ಲಿ ಗಳಿಸಿದ ಕೀರ್ತಿ
ಬೆಳ್ಳಿತೆರೆಗೂ ಹಬ್ಬಿತು ಅದಮ್ಯ." ವಾಣಿ "
ಕಂಚಿನ ಕಂಠದ  ನಿರರ್ಗಳ ವಾಣಿ

ನಟರತ್ನಾಕರನ  ನಟನೆ ಅಪಾರ
ಹೆಸರು ಗಳಿಸಿದ್ದು ಲಂಚಾವತಾರ
ರಾಜಕೀಯದ ಹೊಲಸ ಬಿಚ್ಚಿದ ಧೀರ
ಯಾರಿಗೂ ಹೆದರದ ಕೆಚ್ಚೆದೆಗಾರ

ಸಾಮಾಜಿಕ ಕಾಳಜಿಯ  ಕಳಕಳಿ
ಭ್ರಷ್ಟತೆಯ ಅನಾವರಣ ಮಾಡಿದ ಪುತ್ಥಳಿ
ಮೊನಚು ಮಾತಲ್ಲೇ ಜನಜಾಗೃತಿಯ ಅನಾವರಣ
ಸಹಿಸದನೇಕ ಮಂದಿಯ ಹಗೆ ವಿನಾಕಾರಣ

ಹಿರಣ್ಣಯ್ಯ ಮಿತ್ರಮಂಡಲಿಯ  ರೂವಾರಿ
ನಟ ರತ್ನಾಕರ ಬಿರುದಾಂಕಿತ ಪಾತ್ರಧಾರಿ
ಹಾಸ್ಯ ವಿಡಂಬನೆಯಲೇ ಚಾಟಿ ಏಟಿತ್ತ ನಾಜೂಕಯ್ಯ
ನಟನೆಯ ದೈತ್ಯ ಪ್ರತಿಭೆ ನೀ ಮಹಾರಾಯ

ಹೊರಟು ಬಿಟ್ಟಿರೇಕೆ ಭೂಮಿಯನು ತೊರೆದು
ರಂಗಭೂಮಿಯಲಿ ಸಾರ್ವಭೌಮಿಕೆ ಮೆರೆದು
ಇನ್ನಾರಿಹರು ನಿಮ್ಮಂಥ ಧೀಮಂತ ವ್ಯಕ್ತಿ
ಭ್ರಷ್ಟತೆಯ ಎಳೆಎಳೆಯಾಗಿ ಬಿಚ್ಚಿಡುವ ಅಭಿವ್ಯಕ್ತಿ


           ಶೈಲೂ.....
[03/05 11:25 am] drbnshylaramesh: ಪದಪಿದ್ಯೋತ್ಸವ##

★★ ರಂಗೋಲಿ ★★
******************

ಅಂಗಳಕೆ ಶೋಭೆ ಅಂದದ ರಂಗೋಲಿ
ಶುಭವ ಸೂಸುವ ಚಿತ್ತಾರ ಬಾಗಿಲ ಬಳಿಯಲ್ಲಿ
ಬಿಳಿಪುಡಿಯ ಎಳೆ ಎಳೆಯು ಹೊಸ್ತಿಲ ಮೇಲೆ
ನಡುವೆ ಕೆಂಪಿನ ಗೆರೆಯು ರಂಗೋಲಿ ಮಡಿಲಲ್ಲೇ

ಸಂಪ್ರದಾಯದ ಸಿರಿಯು ಮನೆಗೆ ಭೂಷಣ
ಗೃಹಿಣಿಯರ ಕೌಶಲ್ಯದನಾವರಣ
ವೃ0ದಾವನಡೆದುರು ಶಂಕುಚಕ್ರಗಧಾಪದ್ಮ
ದೇವನಿರುವೆಡೆಯಲ್ಲಿ  ಶುಭಕರ ಗೋಪದ್ಮ

ಶ್ರೀರಂಗ ನಿಗೆ  ಅತಿಪ್ರಿಯ ರಂಗೋಲಿ
ಬಣ್ಣದ ನವಾವರಣ ತುಂಬಿ ಅದರಲ್ಲಿ
ಒಂದೊಂದು ದೈವಕೊಂದೊಂದು ತೆರನಾಗಿ
ವಾಂಛಿತ ಫಲವೀವ ದೈವಿಕ ರಂಗವಲ್ಲಿ

ಎಳೆಎಳೆಯ ಸರಳ  ಗೆರೆಗಳುಂಟು
ಚಿಕ್ಕುಗಳ ಚಿತ್ತಾರವಿಹುದು ಬ್ರಹ್ಮಗಂಟು
ವಿವಿಧ ವಿನ್ಯಾಸ ಆಕಾರ ಸಾಕಾರ
ಕೌಶಲತೆಯ ಕೈಚಳಕದ ಕಲಾಹಂದರ

ನಮ್ಮ ಸಂಸ್ಕೃತಿಯ ಪ್ರತೀಕ ರಂಗೋಲಿ
ಭಕ್ತಿ ಭಾವ ಕೌಶಲ ಮಿಳಿತ ಅದರಲ್ಲಿ
ರಾರಾಜಿಸುತಿರೇ ಮನೆಯ ಮುಂದೆ
ಶುಭಸಮಾರಂಭ ಇಹುದು ಎಂದೇ

ಜೀವನವೂ ಇಹುದು ರಂಗೋಲಿಯಂತೆ
ಬಿಡಿಸದಿದ್ದರೆ ಮನೆಮನ ಸೂತಕಛಾಯೆಯಂತೆ
ತಪ್ಪಿದ ಚುಕ್ಕಿಗಳಲ್ಲಿ ವಿನ್ಯಾಸ ಅಪೂರ್ಣ
ಹದವರಿತು ಬಿಡಿಸಿದರೆ ಬಾಳು ಸಂಪೂರ್ಣ

          ಶೈಲೂ.....
[03/05 8:29 pm] drbnshylaramesh: ನಾ ಹಾರುವ ಹಕ್ಕಿಯಾಗಿದ್ದರೆ.?
************************

ಬಾನಲ್ಲಿ ಹಾರಾಡುವ 
ಹಕ್ಕಿ ನಾನಾಗಿದ್ದರೆ
ಆಹಾ ಅದೆಷ್ಟು ಚಂದವಿರುತಿತ್ತು
ಬೀಗಿಸುತ್ತಾ ಕೊಕ್ಕು
ಹಾರಿಸುತ್ತಾ ರೆಕ್ಕೆ
ಭೂಮಂಡಲವನ್ನೆಲ್ಲ ಸುತ್ತಬಹುದಿತ್ತು

ಹಾಗೇ ತೇಲುತ್ತ ತೇಲುತ್ತ
ಗಗನಡೆದೆಗೆ ಹಾರುತ್ತ
ಬೆಳ್ಮುಗಿಲಮೇಲೆ ಕೂರಬಹುದತ್ತು
ಕಟ್ಟಿದ್ದ ಕಾರ್ಮುಗಿಲ
ಕೊಕ್ಕಿನಿಂದ ಕುಕ್ಕುತ್ತಾ
ಧರೆಯೆಡೆಗೆ ಮಳೆಯ ಸುರಿಸಬಹುದಿತ್ತು

ಖಗವಾಗಿ ಗೆಲುವಾಗಿ
ದೇವಲೋಕದೆಡೆಹೋಗಿ
ಮಾಧವನನ್ನೊಮ್ಮೆ ನೋಡಬಹುದಿತ್ತು
ಮೃದುವಾಗಿ ತಲೆಬಾಗಿ
ಭಕ್ತಿಯಿಂದ ಬೇಡಿ
ಹೆಗಲಮೇಲವನ ಮೆರೆಸಬಹುದಿತ್ತು

ಕಪ್ಪಾದರೇನಂತೆ
ಕೋಗಿಲೆ ನಾನಾಗಿ
ಇಂಪಾಗಿ ಹಾಡನ್ನ ಹಾಡಬಹುದಿತ್ತು
ಹಸಿರುಡುಗೆಯನ್ನುಟ್ಟು
ಕೆಂಪು ಕೊಕ್ಕಲಿ ಕುಕ್ಕಿ
ರುಚಿಯಾದ ಹಣ್ಣನ್ನು ಸವಿಯಬಹುದಿತ್ತು

ಬಣ್ಣಬಣ್ಣದ ಗರಿಯ
ಹೊತ್ತ ನವಿಲಾಗಿದ್ದರೆ
ಕೃಷ್ಣನ ಮುಡಿಯೇರಿ ನಲಿಯಬಹುದಿತ್ತು
ಆಡುತ್ತ ಕುಣಿಯುತ್ತ
ಮನವನ್ನು ತಣಿಸುತ್ತ
ನನ್ನವನೋಡನಾಟ ಸವಿಯಬಹುದಿತ್ತು

ಸ್ವಚ್ಛ ಬಿಳಿಯ ಪುಕ್ಕ
ಹೊತ್ತ ಹಂಸನಾನಾಗಿದ್ದರೆ
ಪ್ರೇಮಿಗಳ ಪತ್ರ ತಲುಪಿಸಬಹುದಿತ್ತು
ಸ್ವಚ್ಛ ಹಾಲಿನೊಳಗೆ
ಬೆರೆತ ನೀರನ್ನೊಮ್ಮೆ
ಹಂಸಕ್ಷೀರನ್ಯಾಯ ತೋರಬಹುದಿತ್ತು

            ಶೈಲೂ....
[04/05 7:37 pm] drbnshylaramesh: ಗತವೈಭವ
*********

ಅಂದು ಬಾಳಿ ಬದುಕಿದ್ದ
ಮನೆಯಿಂದು ಪಾಳು ಗುಡಿ
ಮೆರೆದ ಗತವೈಭವವಿಂದು
ಅಳಿದು ಪಳಯುಳಿಕೆಯಡಿ

ತಲೆ ತಲೆಮಾರುಗಳು ಬದುಕಿ
ಪೋಷಣೆಯಿಲ್ಲದೆ ಕುಸಿಯಿತಿಂದು
ಪರಂಪರಾನುಗತ ಅಂದದಮನೆ
ಕಾಲನವಶಕೆ ಸಿಲುಕಿತಿಂದು

ಅದೆಷ್ಟು ಮಂದಿಗೆ ನೆರಳಿತ್ತಿತ್ತೋ
ಹಸಿದು ಬಂದವರಿಗೆ ತುತ್ತನೀಡಿ
ನಿಷ್ಠೆಯ ಬೆವರ ಹನಿ ಬಸಿದವರಿಗೆ
ಅಸನವಸನವಿತ್ತಿತ್ತು ಪ್ರೀತಿ ಮಾಡಿ

ಅಸರೆಯ ತಂಪಿತ್ತು ಬಾಚಿ ತಬ್ಬಿದ್ದ
ಗುರುಹಿರಿಯರಿದ್ದ  ಅಂದದಂಕಣ
ಹಳೆ ಬೇರು ಹೊಸ ಚಿಗುರು
ಹಬ್ಬಿ ನಕ್ಕಿದ್ದ ಭಾವದನಾವರಣ

ಇತ್ತೊಂದು ಕಾಲದಲಿ ಭರಪೂರ
ಸುವರ್ಣಯುಗದ ಸಂಭ್ರಮದ ಕಾಲ
ತಾತ ಮುತ್ತಾತರಾಳಿ ಬದುಕಿದ್ದ
ಮೌಲ್ಯವೆತ್ತಿಹಿಡಿದಿದ್ದ ನ್ಯಾಯದೇಗುಲ

           ಶೈಲೂ...
[07/05 1:12 pm] drbnshylaramesh: ಕಾಯಕವೇ ಕೈಲಾಸ
*****************

ಕಾಯಕವೇ ಇಲ್ಲದಿರೆ
ಕೈಲಾಸವೆಲ್ಲಿಯದು.?
ಕೈ ಕೆಸರಾದರೆ ತಾನೇ
ಬಾಯಿಗೆ ಮೊಸರು..!!

ದುಡಿಮೆಯೇ ದೇವರು
ಸುರಿಸಿ ಹರಿಸಿ ಬೆವರು
ನಿಷ್ಠೆಯಿಂದ ದುಡಿದವಗೆ
ಅಷ್ಟೇ.. ಒಳ್ಳೆ ಹೆಸರು..!!

ಮೇಲುಕೀಳಿಲ್ಲ ವೃತ್ತಿಯಲಿ
ಗೌರವಿಸಿ ನಡೆದರದು ಧರ್ಮ
ಅವರವರ ವೃತ್ತಿ ದೇವನಾಣತಿ
ನಿಷ್ಠೆಯಲಿಹನು ಅದುವೇ ಮರ್ಮ 

ಇಂಥ ಸವಿನುಡಿಯನಾಣತಿಯ
ನೀಡಿದರೊಬ್ಬ ಮಹಿಮರು
ಭರತವರ್ಷಕೆ ಕ್ರಾಂತಿ ತಂದ
ಜಗಜ್ಯೋತಿ ಬಸವೇಶ್ವರರು

        ✍ ಶೈಲಜಾ ರಮೇಶ್
ಸಮಯ 1 :11 pm
[07/05 3:06 pm] drbnshylaramesh: ಜಗಜ್ಯೋತಿ ಬಸವೇಶ್ವರ
*********************

ಕಾಯಕವೇ ಕೈಲಾಸ ದುಡಿದರಿಹುದು ಉಲ್ಲಾಸ
ದುಡಿಮೆಯಲಿಹನು ದೇವರು ಶ್ರದ್ಧೆಯಿಂದ ದುಡಿಯುತಿರು

ದಯೆಯಲಿಹುದು ಧರ್ಮ ಕರುಣೆಯದರ ಮರ್ಮ
ಮೂಢನಂಬಿಕೆಯ ಮೌಢ್ಯ ಅಳಿಸಿ ಬಿಸುಟು ಆಗುನೀ ಪ್ರೌಢ

ಜಾತಿವಿಜಾತಿಯಾವುದಿಹುದು ಜಗಕಿಹುದೊಂದೆ ಜಾತಿ
ಭಕ್ತಿಯ ಬಾಂಡ ದೊಳಗಿಹ ಶಿವಶರಣರಿಗಿಲ್ಲ ಯಾವ ಜಾತಿ

ಭಕ್ತಿ ಚಳುವಳಿಯ ಹರಿಕಾರ ಇಷ್ಟಲಿಂಗವದರಾಧಾರ
ಜಾತಿಬೇಧಗಳಿಗಿತ್ತಿತ್ತು ಕೊನೆ ಅನುಭವ ಮಂಟಪದ ಮಹಾಮನೆ

ಏನಗಿಂತ ಕಿರಿಯರಿಲ್ಲೆಂಬ ಸರಳ ಸಜ್ಜನಿಕೆಯ ಶರಣಾಗತಿ
ಶಿವಶರಣರಿಗಿಂತ ಹಿರಿಯರಿಲ್ಲೆಂಬ ಅನುಭವದ ಮಹಾಮತಿ

ಹಸಿದವರಿಗೆ ಅನ್ನವಿಕ್ಕುವ ಮಹಾ ಅನ್ನದಾನ ದಾಸೋಹ
ಇಷ್ಟಲಿಂಗ ಪೂಜಾಕೈಂಕರ್ಯ ಸಾಕಾರ ಶಿವನಿಗಿಷ್ಟು ಸನಿಹ

ದೇಹವಿದು ದೇಗುಲ ನಿಜಭಕ್ತಿಯಲರ್ಚಿಸಲವನು ಸಲಿಲ
ಮೃದುವಚನವೇ ಮಂತ್ರ ಆ ದೇವನೊಲಿಯುವಿಕೆಯ ತಂತ್ರ

ನೀಡಿ ವಚನಾಮೃತ ವಾಣಿ ಬಸವಣ್ಣ ನೀವಾದಿರೆಲ್ಲರ ಕಣ್ಮಣಿ
ಕ್ರಾಂತಿಯ ಹರಿಕಾರ ನಿಜಗುಣ ಭಕ್ತಿ ಭಂಡಾರಿ ಬಸವಣ್ಣ

ಜಗವ ಬೆಳಗಿದ ಜ್ಯೋತಿ ಮಹಾ ಮಾನವತಾವಾದಿ ಬಸವಣ್ಣ
ದೇವನೊಲಿಯುವ ಪರಿಗಿಹುದು ಶರಣು ಶರಣಾರ್ಥಿ ಶರಣ್ಯ

             ಶೈಲೂ......
[08/05 8:30 pm] drbnshylaramesh: ಸಂತೈಕೆ
*******

ಹಸಿವಾಗಿಹುದೇ..? ಅಳದಿರೂ ತಮ್ಮ
ಏನು ಮಾಡುವುದೇಳು ಹಸಿವೆಯೇ ನಮ್ಮ ಕರ್ಮ

ಎಲ್ಲೆಲ್ಲಿ ನೋಡಿದರೂ ಮರವಿಲ್ಲ ಬಟಾಬಯಲು
ಹಣ್ಣು ಹಂಪಲುಗಲಿಲ್ಲ ಹಸಿವನ್ನು ನೀಗಲು

ಅಂದಿತ್ತು  ಸಂವದ್ಧಿ ಫಲಭರಿತ ಮರಗಳು
ನಿತ್ಯ ಗೋಳಾಯ್ತೆಮಗೆ ಮರವೆಲ್ಲ ಕಡಿಯಲು

ಕಾಡೆಲ್ಲಾ ನಾಡಾಗಿ ಇಲ್ಲವಾಯ್ತೆಮಗೆ ನೆಲೆ
ಅರಸುತ್ತ ಆಹಾರ ಬಂದಿದ್ದೇವೆ ಗುಳೆ

ತುಸು ಸುಮ್ಮನಿರು ತಮ್ಮ ನೋಡುತಿಹಳಮ್ಮ ಆಚೀಚೆ
ಎಲ್ಲಾದರೂ ಕಾಣಸಿಗಬಹುದು ಹಣ್ಣು ಕಾಯಿಪೀಚು ಹೀಚು

ನಮಗೂ ಹಸಿವಾಗುತಿಹುದು ನೋಡು ನಾವು ಅಳುತ್ತಿಲ್ಲ
ಸ್ವಲ್ಪ ಸಾವರಿಸಿಕೊ ಕಂದ ಅಭ್ಯಾಸವಾಗುವುದು ಮೆಲ್ಲ

ಮನುಜರ ಅತ್ಯಾಸೆಗಿಂದು ನಾವು ಬೀದಿ ಪಾಲು
ಕೇಳುವರಾರಿಲ್ಲ ಇಲ್ಲಿ ನಮ್ಮಳಲಿನ ಅಹವಾಲು

ಕರೆದು ಉಣಲಿಕ್ಕುವರಿಲ್ಲ ನಾವು  ಮಂಗಗಳಂತೆ
ಬೆದರಿಸಿ ಕಸಿದರಾಯ್ತು ಹೊಡೆದೋಡಿಸುವರು ಮೃಗದಂತೆ

ಸುಮ್ಮನಿರಲೂ ಬಿಡರಲ್ಲ ಹಿಡಿದೆಮ್ಮ ಪಳಗಿಸಿ ಮಣಿಸಿ
ಅವರಾಟಕೆ ಕುಣಿಸುವರು ಹೊಡೆದು ಹೆದರಿಸಿ ಬೆದರಿಸಿ

ನಮ್ಮ ಅನ್ನ ಕಸಿದವರಿಗೆ ದುಡಿದು ಕೊಡಬೇಕು ಹಣ
ತನ್ನ ಹೊಟ್ಟೆ ತುಂಬಿಸಿಕೊಂಡು ನಮಗೆ  ಬರೀ ಅರೆಹೊಟ್ಟೆನಾ

ಬಾಯಲ್ಲೇನೋ ದೇವರೆಂದು ಕಟ್ಟಿದರು ಗುಡಿಗೋಪುರವ
ಕಂಡಲೆದುರು ಬೀಸುವರು ಕಲ್ಲು ಇದು ಮನುಜನ ತತ್ವವಾ.?

ಅತ್ತು ಹೈರಾಣಾಗದಿರು ಕುಡಿ ಅಮ್ಮನೆದೆಯ ಹಾಲು
ಸಿಕ್ಕಿದೊಡನೆ ಆಹಾರ ಕೊಡುವೆ  ನಿನಗೆ ಪಾಲು

              ಶೈಲೂ.....
[15/05 7:12 pm] drbnshylaramesh: ಇರಲೀಸುಖ ಅನವರತ
********************

ಯಾಕೋ ತುಸು ಆರಾಮಿಲ್ಲ
ಮಲಗಲೇ ಮಡಿಲಲಿ ನಲ್ಲ
ಕೈಕಾಲುಗಳಲೆನೋ ಸುಸ್ತು ಸೆಳೆತ
ಓಡಾಡಲಾಗದೇನೋ ನೋವು ಎಳೆತ

ಬಾ ಮಲಗು ರಾಧೇ
ನೀಗಿಸುವೆ ನಿನ್ನೆಲ್ಲ ಬಾಧೆ
ಏನಾಯಿತ್ಹೇಳೇ ಚಿನ್ನಾ
ಪರಿಹರಿಸುವೆ ನೋವನ್ನ

ಎನಿಲ್ಲವೋ ಗೋಪಾಲ
ನಿನ್ನನರಸುತ ಕಳೆದೆ ಕಾಲ
ಹುಡುಕಿ ಹುಡುಕಿ ಸುಸ್ತಾದೆ
ಅಲೆದಲೆದು ಆಯಾಸವಾಗಿದೆ

ಹೌದೇನೇ ರಾಧಾಮಣಿ
ನೆನೆದಿದ್ದರೆ ಸಾಕಿತ್ತಲವೇ ರಾಣಿ
ಓಡೋಡಿ ಬಂದಿರುತ್ತಿದ್ದೆ
ನೆನೆದೊಡನೆ ಹಾಜರು ಕಣ್ಮುಂದೆ

ಸಾಕು ಬಿಡು ಬಡಿವಾರ
ನಿನ್ನನೆನಪೇ ಪ್ರತಿದಿನ ವಾರ
ನೀನೇನೋ  ಜಗದಾದಿಪತಿ
ಇಹುದೆಲ್ಲಿ ನನ್ನೊಳು ಮತಿ

ನೆನೆದೊಡನೆ ಬಂದೆನಲ್ಲವೇ ನಾನು
ಹೇಳು ಜಾಣೆ ಮನದಳಲನ್ನು
ನಿನ್ನೊಡನೆಯೇ ನಾನಿಹೆನಲ್ಲ
ಜಗವೇ ರಾಧಾಕೃಷ್ಣ ಎನುವರಲ್ಲ

ಹೆಸರೊಂದೇ ಸಾಕೇ ನಲ್ಲ
ನಿನ್ನೊಡನಾಟ ಬೇಕಲ್ಲ
ಸದಾ ನಿನ್ನೊಡನಿರಬೇಕು
ಜಗದ ಪರಿವೇ ಮರೆಯಬೇಕು

ಹಾಗೆಂದರಾದೀತೇ ಹೇಳು
ಬೇಕಲ್ಲ ಎಲ್ಲರಿಗೂ ಸಮ ಪಾಲು
ನಿನ್ನೊಡನಾಟದ ಸಿರಿ ಸ್ನೇಹ ಸಖ್ಯ
ಜಗವ ತಣಿಸುವುದೂ ಅಷ್ಟೇ ಮುಖ್ಯ

ಸರಿ ಬಿಡು ಬಿಡು ಮಾಧವಾ
ಅರಿತಿರುವೆ ನಿನ್ನ ಮನವಾ
ಜಗವ ಪಾಲಿಪ ಸ್ವಾಮಿ ನೀನು
ನನಗೇ ಮೀಸಲಿರಲೆಂದು ಬಯೆಸೆನು

ಹೋಗಲಿ ಆ ಮಾತ ಬಿಡು ರಾಧೇ
ಇಂದಿನ ಇಡೀ ಸಮಯ ನಮ್ಮದೇ
ಸುಂದರ ಈ ಪ್ರಕೃತಿ ಮಡಿಲಿನಲಿ
ಕಳೆಯೋಣ ಸುಸಮಯ ಏಕಾಂತದಲಿ

ಅದಕೆಂದೇ ಬಯಸಿದೆ ಮಡಿಲು
ಎದೆಗೊರಗಿ ಆನಂದ ಸವಿಯಲು
ಆಹಾ ಏನೀಸುಖಮಯ ಪ್ರಶಾಂತ
ಇರಲೀ ಬೆಸುಗೆ ನಿತ್ಯ ಅನವರತ
  
                ಶೈಲೂ....
[15/05 8:12 pm] drbnshylaramesh: ತನ್ನದೆನ್ನುವಜೀವ ಉದರದೊಳರಳೆ
****************************
ಉದರದೊಳು ಮೊಳೆಯುತ್ತಿರುವ ಜೀವ
ತನ್ನದೆನ್ನುವ ಅತೀವ ಪ್ರೇಮ ಭಾವ
ಹೊತ್ತವಳ ಕಷ್ಟಕ್ಕೊದಗುವ ಜೀವ
ತಿಳಿಯುತ್ತಿದ್ದನವಳು ಪಡುವ ನೋವ

ಏನೇನೂ ಮಾಡಲು ಬರದವ
ಹೊತ್ತು ನೆತ್ತಿಗೇರಿದರೂ ಏಳದವ
ಇಂದೆಲ್ಲಾ ಕೆಲಸಕ್ಕೂ ಸಿದ್ದ ಸನ್ನದ್ದ
ಕರುಳ ಕುಡಿಯ ರಕ್ಷಣೆಗೆ ಬದ್ದ

ಬೇಯಿಸಿದ್ದ ರಮಿಸಿ ಉಣಿಸಬೇಕಿತ್ತು
ಕೂತೆಡೆಯೇ ಸರ್ವಸೇವೆಗೈಯ್ಯಬೇಕಿತ್ತು
ದರ್ಪಧಮಡಿ ಜೋರುಮಾತಿಗ್ಹೆದರಿ
ನಡುಗುತ್ತಿದ್ದೆ ಕೈಕಾಲುಗಳದುರಿ

ಈ ನಡುವೇನಾಯ್ತೋ ಎನ್ನರಸನಿಗೆ
ತುಂಬು ಆರೈಕೆ ಬಿಡನರಗಳಿಗೆ
ಮನೆಗೆಲಸಕೆಲ್ಲಾ ಸಹಾಯ ಹಸ್ತ
ಇರಬಹುದೇ ಗರ್ಭಧರಿಸಿದ ನಿಮ್ಮಿತ್ತ

ಅಡುಗೆಮಾಡಲೊಡನೆ ಇರುವ
ಬಟ್ಟೆ ತೊಳೆಯೇ ಜೊತೆಗೆ ಬರುವ
ಹೆಜ್ಜೆಯಿಟ್ಟರವ ಮೆಲ್ಲ  ಎನ್ನುವ
ಅಬ್ಬಾ..! ಅದೆಷ್ಟು ಕಾಳಜಿ ತೋರುವ

ತನ್ನದೆನ್ನುವ ಜೀವ ಉದರದೊಳರಳೆ
ಹಮ್ಮೆಲ್ಲ ಹುಸಿಯಾಯ್ತು ಹೆಮ್ಮೆಯರಳೆ
ಕರುಳಕುಡಿ ಹೊತ್ತವಳನ್ಹೊತ್ತು ಮೆರೆಸಿ 
ಜೀವ ತಾನಾಗಿಹ ಒಲವ ಸುರಿಸಿ

           ಶೈಲೂ.....
[16/05 10:02 am] drbnshylaramesh: ಕವಿಯ ಬೆರಗು ನೋಟವ ಕಂಡು
                 ಅವಳು
        ನಾಚಿ ಇಳೆಯಾದಳು
     ಚೆಲುವಿನ ಬಲೆಯಾದಳು
     ತಂಪೀವ ಮಳೆಯಾದಳು
       ಜೇನ ಹೊಳೆಯಾದಳು
[19/05 1:49 pm] drbnshylaramesh: 🌹🌹ಜನ್ಮೋತ್ಸವದ ಶುಭಾಶಯ🌹🌹

 ವರ್ಷದ ಕೂಸು
*************

ಕನ್ನಡದ ಕಂದ
ನಲ್ಮೆಯ ಬಾಲ ಮುಕುಂದ
ಎಲ್ಲರಚ್ಚುಮೆಚ್ಚಿನ ಕೂಸು
ನಡೆವ ಹಾದಿಯಲ್ಲೆಲ್ಲ  ಹೂ ಹಾಸು
ಮನಸು ತುಂಬಾ ಸ್ವಚ್ಛ
ಹೆಸರಿದಕೆ ಕನ್ನಡ *ಕಥಾಗುಚ್ಛ..!!* 
ಹಡೆದವರು ಹಲವು ದೇವಕೀಯರು..!!
ಪಾಲಿಸುವವರೆಲ್ಲ ಯಶೋಧೆಯರು..!!
ವಸುದೇವರುಗಳ
ಪಾತ್ರವನ್ತೂ  ವರ್ಣನಾತೀತ
ನಂದಗೋಪರುಗಳ
ಸಂಖ್ಯೆ ಅಪರಿಮಿತ..!!
ಗೋಪಿಕೆಯರದೂ ದೊಡ್ಡ ಹಿಂಡು
ಈ ಕೃಷ್ಣನ ರಮಿಸುವಲ್ಲಿ
ಸದಾ ಮುಂದು
ಅದೆಷ್ಟು ಪ್ರೇಮ ಭಕ್ತಿ
ಹಾಸ್ಯ ಕವನ ಕಥಾಹಂದರ
ನಡುವಲ್ಲೇ ಬೆಳೆಯುತ್ತಿರುವ
 *ಕಥಾಗುಚ್ಛ* ಸುಂದರ..!
ಹಾಲು ಮೊಸರು ಮಥಿಸಿ
ನವನೀತ ತೆಗೆದಂತೆ
ಹಲವು ಭಾವಗಳು ಮಿಳಿತ
ಸಂಕಲನ *ಪಯೋನಿಧಿ* ಯಂತೆ
ಉತ್ಕೃಷತೆಗೆ ಸಂದ ಗೌರವ *ಶಾರದಾತನಯ..!* 
ಸಂತೋಷ ಸಂಭ್ರಮಕೇ ಕಾರಣ
 *ಅನುಪಮಾ* ..!
ಹಲವು ಹೂ ಮನಗಳು
ಬೆಸೆದು ಹೊಸೆದ ಕೂಸು..!
ಅಂಬೆಗಾಲಿನಿಂದ ದಾಪುಗಾಲಿನ
ನಡಿಗೆಗಿಂದು ವರ್ಷವಾಯ್ತು
ಜನ್ಮ ಮಹೋತ್ಸವಕಿಂದು
ನಲ್ಮೆಯ ಹಾರೈಕೆ..!
ಹಲವು ಬಗೆಬಗೆಯ ಚಂದದ
ಈ ಹೂಗುಚ್ಛದೊಂದಿಗೆ
ಈ ನಾರೂ ಸ್ವರ್ಗ ಸೇರುವ ಬಯಕೆ.!

            *ಶೈಲೂ.....*
[19/05 3:19 pm] drbnshylaramesh: ನನ್ನೊಳಗಿನ ನಾನು
****************

ನನ್ನೊಳಗೊಂದು ಅಭಿವ್ಯಕ್ತಿ
ಉದ್ಭವಿಸಿದೆ ನನ್ನದೇ ಭಿತ್ತಿ
ನೋವು ನಲಿವುಗಳಿಗೆ ಸಂಗಾತಿ
ನನ್ನೊಳಿಹ ಉತ್ತಮೊತ್ತಮ ಗೆಳತಿ

ದೃಢಹೆಜ್ಜೆಗೆ ಸಹಕಾರಿಯಾದವಳು
ತಪ್ಪೋಪ್ಪುಗಳ ತಿಳಿಹೇಳಿದವಳು
ಕಣ್ಣೀರೊರೆಸಿ ನೋವ ಮರೆಸಿದವಳು
ಸೋತು ಕಂಗೆಟ್ಟಾಗ ಮಾಡಿಲಾದವಳು

ಮುಂದಡಿಯಿಡಲು ಒತ್ತಾಸೆಯಾದವಳು
ಆತ್ಮವಿಶ್ವಾಸ ನೀಡಿ ನಲಿವಿತ್ತವಳು
ಗುರಿಯೆಡೆಗೆ ಗುರುವಿನಂತಾದವಳು
ಏಕಾಂಗಿತನಕೆ ಜೊತೆಯಾದವಳು

ಬದುಕಿಗೆ ಭರವಸೆಯಿತ್ತವಳು
ಸಾಧಿಸುವ ಚಲವಿತ್ತ ವಳು
ಕಾಲೆಳೆವವರ ಕಡೆಗಣಿಸೆ0ದವಳು
ನನಗಾಗಿ ಕಣ್ಣೀರಸುರಿಸುವವಳು

ನನ್ನೊಳಗಿನ ಈ ನಾನು ಅಹಂ ಅಲ್ಲ
ಎಲ್ಲದೋಳರಿವಿತ್ತ ಸುಮನಸೇ ಎಲ್ಲ
ಧೈರ್ಯ ಗುಂದದಂತೆ ನೀಡಿ ಶಕ್ತಿ
ನನ್ನತನವ ಎತ್ತಿ ಹಿಡಿವ ಅಭಿವ್ಯಕ್ತಿ..!!

           ಶೈಲೂ...
.
[19/05 5:29 pm] drbnshylaramesh: ಸಪ್ತಪದಿ
*******

ಏಳು ಹೆಜ್ಜೆಗಳ ಈ ಬಂದ
ಜನ್ಮಜನ್ಮಗಳ ಅನುಬಂಧ
ಎರಡು ಮುಗ್ಧ ಮನಗಳ ಬೆಸೆಗೆ
ಪ್ರೀತಿ ಸಾಂಗತ್ಯ ಕೆ ಸೇತುವೆ

ಸನಾತನ ಸಂಸ್ಕೃತಿಯ ಪ್ರತೀಕ
ಸತ್ಸಂಪ್ರಧಾಯದ ದ್ಯೋತಕ
ವೇಧಘೋಷ ಮೇಳಗಳ ನಡುವೆ
ಸಂಬಂಧ ಅನುರಾಗದ ಒಸಗೆ

ಸಂಸಾರಸಾಗರದಲಿ ಈಸಲು
ಪರಸ್ಪರರಲಿ ಸಹಕಾರವಿರಿಸಲು
ಮುಂದಿಡಲು ಸಜ್ಜು ಬಾಳ ಹೆಜ್ಜೆ
ಮುನ್ನಡಿಯಿದು ಈ ಏಳು ಹೆಜ್ಜೆ

ಧರ್ಮೇಚ ಅರ್ಥೇಚ ಕಾಮೇಚ
ನೀನಿಲ್ಲದೇ ನಾತಿ ಚರಾಮಿ..!!
ನಂಬುಗೆಯಡಿಯಲಿ ಸಾಗುವ
ಈ ಜೀವ ನಿನಗೆ ಸಮರ್ಪಯಾಮಿ..!!

ಜೀವದೊಳೊಂದಾಗೆ ಅಗ್ನಿಸಾಕ್ಷಿ
ವಚನಬದ್ಧತೆಗೆ ಆ ದೈವಸಾಕ್ಷಿ
ಹದಿಬದೆಯ ಧರ್ಮಕಡಿಪಾಯ
ಸಪ್ತಪದಿ ಸುಖ ಜೀವನಕುಪಾಯ

ಜೀವನದ ಸರ್ವ ಸುಖ ದುಃಖ
ಜನನಮರಣಗಳೆರಡರಲೂ ಸಾಂಗತ್ಯ
ಉಸಿರಲುಸಿರಾಗಿ ಬಾಳಹಸಿರಾಗಿಸಿ
ಬೆಸೆವ ಬಂಧನ ಸಪ್ತಪದಿಯ ಸ್ವಾರಸ್ಯ

                 ಶೈಲೂ.....
[19/05 10:32 pm] drbnshylaramesh: Vishwanathkv Kamath ಮನದೊಳಗಿನ
    ಮರಿದುಂಬಿ
        ಸುಶ್ರಾವ್ಯವಾಗಿ
            ಹಾಡಿದಾಗ
                ಮೂಡಿಬಂದ
                   ಮಧುರಾನುಭವದ
                       ಮನದ
                          ಮಾತುಗಳು...
🙏🙏🙏🙏😊😊😊😊😊😊
[20/05 2:19 pm] drbnshylaramesh: ಹಸಿರು ಗಾಜಿನ ಬಳೆಗಳೇ
**********************

ನೋಡೇ ಅಮ್ಮ ಎಷ್ಟು ಚಂದವಿದೆ
ಘಲ್ ಘಲ್ ಬಳೆಗಳ ನಾದ
ನಿನ್ನಂತೆಯೇ ಇದೆ ಅಂದದ ಕೈಯಲಿ
ತುಂಬಿದ ಬಳೆಗಳ ಮೋದ

ಹೌದು ಪುಟಾಣಿ ಮಕ್ಕಳ ರಾಣಿ
ಬಳೆಗಳೇ  ಹೆಣ್ಣಿಗೆ  ಭೂಷಣ
ಚಂದದ ಕೈಯಲ್ಲಿ ಹಸಿರಿನ ಬಳೆಗಳು
ಸೌಭಾಗ್ಯದ ಸಿರಿಗೆ ಕಾರಣ

ಗಾಜಿನ ಬಳೆಯಿದು ಒಡೆದರೆ ತೊಂದರೆ
ಬಹು ಜಾಣ್ಮೆಯಲಿ ಸಂಭಾಳಿಸು
ಸ್ತ್ರೀತ್ವದ ಸೌಭಾಗ್ಯದ ಸಂಕೇತವಿದು
ತೊಟ್ಟು ಸದಾ ಹಸಿರಂತೆ ಕಂಗೊಳಿಸು

ಚಿನ್ನ ವಜ್ರಕಿಂತ ಅತಿಬೆಲೆಯುಳ್ಳದ್ದು
ಹಸಿರು ಬಳೆಗಳಿಗುಂಟೆ ಸರಿಸಮ
ಐದು ಮುತ್ತುಗಳಲಿ ಸರ್ವಶ್ರೇಷ್ಠವಿದು
ಸದಾ ಧರಿಸುವುದೇ ಸತೀಧರ್ಮ

ಅಂದದ ಕೈಯಲಿ ಬಳೆಗಳು ತುಂಬಿರಲಿ
ಸಕಲ ಸೌಭಾಗ್ಯ ನಿನದಾಗಲಿ ಮಗು
ಹಸಿರು ತುಂಬಿರುವ ಭೂಮಾತೆ ನಲಿದಂತೆ
ಮೊಗದಲ್ಲಿ  ತುಂಬಿರಲಿ ಸದಾ ನಗು

          ಶೈಲೂ
[20/05 2:27 pm] drbnshylaramesh: ಕಥಾಗುಚ್ಛವೆಂಬ 
ಹೂಗುಚ್ಛ ದಲಿ ಅರಳಿದ
ಸುಮಗಳು ನಾವೆಲ್ಲಾ
ಪ್ರೀತಿ ಸಿಂಚನವ
ಸಿಂಪರಿಸಿ ಆರೈಕೆಮಾಡುವ
ನಿರ್ವಾಹಕರಿರುವಾಗ
ಬಾಡುವ ಭಯವೂ ನಮಗಿಲ್ಲ
ನಳನಳಿಸಿ ಅಕ್ಷರ ಸೌಗಂಧವ
ಪಸರಿಸೆಲ್ಲೆಡೆ  ಸಾಹಿತ್ಯ ದೇವಿಯ
ಪಡದಡಿ ನಲಿಯೋಣ
ಬನ್ನಿರೆಲ್ಲ...
ಜ್ಞಾನ ರಥದಲ್ಲಿ ವಿರಾಜಿಸುತ್ತಿರುವ
ಸಾಹಿತ್ಯದೇವಿಯ
ಕರಸೇವಕರು  ನಾವು
ಸುಮನದ ಸಮಾನ ಮನಸ್ಕ
ಸ್ನೇಹಿತರೊಡನೆ  
ತಾಯ ಸೇವೆಗೈಯಲು
ಕಂಕಣಬದ್ದರು ನಾವು
ನಿಮ್ಮೊಡನಾಟದ
ರಸಗಳಿಗೆಗೆ ಕಟಿಬದ್ದರು ನಾವು
🙏🙏
[21/05 5:09 pm] drbnshylaramesh: ದ್ರೌಪದಿ ಸ್ವಯಂವರ
******************
ಪಾಂಚಾಲಾಧಿಪತಿ ದ್ರುಪದ ಮಾಹಾರಾಜ
ನಡೆಸಿದ ವೈಖಾನವೆಂಬ ಯಜ್ಞದಿಂದ
ಆವಿರ್ಭವಿಸಿದ ತ್ರಿಭುವನ ಚೆಲುವೆ..!!
ಹೆಸರಿಹುದು ದ್ರೌಪದಿ, ಕೃಷ್ಣೆ, ಪಾಂಚಾಲಿ..!!
ವೃದ್ಧಿಚಂದ್ರನಂತೆ ದಿನಂಪ್ರತಿ ಬೆಳಗುತ್ತಿರುವ
ತ್ರೈಲೋಕ್ಯ ಸುಂದರಿ ಕುವರಿಗೆ
ಅನುರೂಪ ವರನ ಆರಿಸುವ ನಿಮಿತ್ತ
ಸ್ವಯಂವರಕ್ಕೆ ಸಜ್ಜಾಗಿತ್ತು ಪಾಂಚಾಲದೇಶ..!
ಜಗದೇಕವೀರ ಧನಂಜಯ ತನ್ನಳಿಯನಾಗಳೆಂದು
ಅವ ಮಾತ್ರ ಬೇಧಿಸುವ 
ಮತ್ಸ್ಯಯಂತ್ರವ ಪಣವಾಗಿರಿಸಿ
ಗರಗರನೇ ತಿರುಗುವ ಮತ್ಸ್ಯವನಿರಿಸಿ
ಬೇಧಿಸುವವನೇ ವಿಜೇತನವಗೆ ಮಗಳ ಕೊಡುವೆನೆಂದು ಸಾರಿದರು..!
ದೇಶವಿದೇಶದಿಂದಾಗಮಿಸಿದ ರಾಜಕುಮಾರರು
ಕೃಷ್ಣೆಯ ಚೆಲುವಿಗೆ ಬೆರಗಾಗಿ ನಿಂತರು.!
ಧನುವನು ಹೆದೆಯೇರಿಸಿ ಪಂಚಬಾಣಗಳ ಹೂಡಿ
ತಿರುಗುವ ಮತ್ಸ್ಯಯಂತ್ರವ ಭೇಧಿಸುವಲ್ಲಿ ಸೋತರು.!!
ಚೇದಿರಾಜ್ಯದ  ಶಿಶುಪಾಲ ಮಗಧದ ಜರಾಸಂಧ
ಘಟಾನುಘಟಿ ರಾಜರೆಲ್ಲ ಸೋತು ತಲೆತಗ್ಗಿಸಿದರು.!
ಅಂಗರಾಜ ಕರ್ಣ ಹೆದೆಯೇರಿಸಲು ನಡೆಯೇ
ಸೂತಪುತ್ರನ ವರಿಸಲು ನಾನೊಲ್ಲೆನೆಂದಳು ಕೃಷ್ಣೆ..!
ಕ್ಷತ್ರಿಯರೆಲ್ಲ ಕಡೆಗಾಣಿಸಿ ಬಸವಳಿದು ಸೋತಾಗ
ಸಭೆಯಲ್ಲಿದ್ದ ಬ್ರಾಹ್ಮಣ ವರರಾದರೂ 
ಯತ್ನಿಸಬಹುದೆಂಬ ಅಣತಿಯ ಮೇರೆಗೆ
ಕೌರವರ ಉಪಟಳಕೆ ಬೇಸತ್ತು ಬ್ರಾಹ್ಮಣ ವೇಷದಿ 
ತಲೆಮರೆಸಿ ಅಡಗಿದ್ದ ಗಾಂಢೀವಿ ಎದ್ದು ಅಣಿಯಾದನು
ಆವನಿವ ಬ್ರಾಹ್ಮಣ.. ರಾಜಾದಿರಾಜರೇ ಸೋತು ಶರಣಾದಾಗ
ಇವನೇನ ಮಾಡಬಲ್ಲನೆಂದು ನಗುತ್ತಿದ್ದರು ಸಭಿಕರು.!
ದ್ರುಪದನಾಹ್ವಾನ ಮನ್ನಿಸಿ ಯುಧಿಷ್ಠಿರನ ಸಮ್ಮತಿಯ ಮೇರೆಗೆ
ಮನದಲ್ಲೇ ಚಿರಬಂದು ಶ್ರೀಕೃಷ್ಣ ನಿಗೊಂದಿಸಿ
ಸ್ವಯಂವರ ಮಂಟಪದೆಡೆ ಬಂದು..ಧನುವನು
ಲೀಲಾಜಾಲದಿ ಹೆದೆಯೇರಿಸಿದನು..!
ತೈಲಬಾಂಡದಲಿ ನೋಡುತ ಮೇಲಿದ್ದ ಮತ್ಸ್ಯದೆಡೆಗೆ ಲಕ್ಷ್ಯವನಿರಿಸಿ
ಹೂಡಿ ಬಾಣಗಳ ಮತ್ಸ್ಯಯಂತ್ರವ ಬೇಧಿಸಿದ ಪಾರ್ಥನು.!
ಎಲ್ಲೆಲ್ಲೂ ಜಯಘೋಷ ಮಂಗಳವಾದ್ಯ ಮೊಳಗಲು
ಲಜ್ಜೆಯಾಭರಣ ತೊಟ್ಟ ಚೆಲುವಿನರಸಿ ಪಾಂಚಾಲಿ
ವಿಜಯಮಾಲೆಯನು ತೊಡಿಸಿದಳು..!
ಅಪಮಾನಿತರಾದ ನೃಪರೆಲ್ಲ ದ್ವೇಷಾಸೂಯೆಯಲಿ
ಪಾಂಚಾಲನ ಮೇಲೆ ದಂಡೆತ್ತಿ ಬರಲು..!
ವೇಷ ಮರೆಸಿದ್ದ ಭೀಮಾರ್ಜುನರರಪರಿಮಿತ
ಕಾಳಗದ ದೆಸೆಯಿಂದ ದ್ರುಪದ ಜಯಗಳಿಸಿದನು..!
ಸ್ವಯಂವರದಲ್ಲಿ ವರಿಸಿದ್ದ ಪಾಂಚಾಲಿಯೊಡನೆ
ತಮ್ಮ ಕುಠೀರಕೈತಂದು 
ಅಮ್ಮಾ... ಹೆಣ್ಣು ತಂದೆವೆಂದಿದ್ದನ್ನು ಹಣ್ಣೆಂದು ಭ್ರಮಿಸಿದ ಕುಂತಿ
ಸರ್ವರೂ ಸಮಪಾಲಾಗಿ ಹಂಚಿಕೊಳ್ಳಿರೆನಲು..!
ಅಮ್ಮಾ.. ಇದು ಹಣ್ಣಲ್ಲ.. ಹೆಣ್ಣು..
ದ್ರುಪದ ಕುವರಿ ದ್ರೌಪದಿಯ  ಸ್ವಯಂವರ ದಲಿ ಗೆದ್ದು
ವರಿಸಿ ಬಂದಿದ್ದೇವೆನಲು.. ತಾನುಡಿದ ತಪ್ಪಿಗಾಗಿ ಮರುಗಿದಳು..!
ತಾಯ ನುಡಿ ಅನೃತವಾಗಬಾರದೆಂದೆಣಿಸಿ 
ವ್ಯಾಸಮಹರ್ಷಿಗಳಾಣತಿಯಂತೆ
ಪಾಂಡವರೈವರೂ ಕೃಷ್ಣೆಯ ಪತಿಗಳಾದರು..!!
ಹಿಂದಿನ ಜನ್ಮದಲ್ಲಾಕೆ ಶಿವನನ್ನು ಒಲಿಸಿ ನಮಿಸಿ
ಸರ್ವಗುಣಸಂಪನ್ನ ಜಗದೇಕವೀರ ನಾದ
ಪತಿಂದೇಹಿ..ಪತಿಂದೇಹಿ ಎಂದೈದು ಬಾರಿ ಕೇಳಲಾಗಿ..!
ಒಬ್ಬನಲೇ ಸರ್ವಗುಣಸಂಪನ್ನತೆ
ಸಿಗದೆಂಬ ಕಾರಣಕೆ
ಐದು ಪತಿಗಳ ಸತಿಯಾಗೆಂದು ವರ  ಕರುಣಿಸಿದ್ದ ನಿಮಿತ್ತ
ಇಂದಾಕೆ ಪಂಚ ಪಾಂಡವರ ಸತಿಯಾದಳು..!

             ಶೈಲೂ....
[21/05 9:34 pm] drbnshylaramesh: ನನ್ನವನು...
***********

ಎಲ್ಲರಂತಲ್ಲ ನನ್ನವನು
ಕರುಣಾರಸ ಭರಪೂರಹರಿವ
ಕನಸು ಕಂಗಳ ಚೆಲುವ ಸೊಗಸುಗಾರ...

ಮುಗ್ಧಮುಖ ತುಂಬಿಹುದು
ಬೆಳದಿಂಗಳ ಚಂದ್ರಕಳೆ
ಮನಸೆಳೆವ ಮಾಂತ್ರಿಕ ಮೋಡಿಗಾರ...

ನೀಲ ಮೇಘದ ವರ್ಣ
ಮನವಿಹುದು ಹಳದಿಯ ಚಿನ್ನ
ಸಮ್ಮೋಹಕ ನುಡಿಗಳ ಮಾತುಗಾರ...

ತುಸು ಮುನಿಸು,ಪ್ರೀತಿ ಕಡಲು
ಸುಗಂಧಬೀರುವ ಹೂಮನಸು
ತುಂಟತನದ ಭಂಟ ಮೋಜುಗಾರ...

ದಿಟ್ಟ ನಡೆ ಮಾರ್ಮಿಕ ನುಡಿ
ದುಷ್ಟರ ತರಿದು ಶಿಷ್ಟರ ಪೊರೆವ
ಜಗದೊದ್ಧಾರಕ ಕೃಷ್ಣ ಪೊರೆವನೆಲ್ಲರ...

ಹಾಸ್ಯ ಭರಿತ ತುಂಟತನ
ಕದ್ದನವ ಎಲ್ಲರ ಮನ
ಹಸುಮಗುವಿನ ಮನದ ಜೊತೆಗಾರ...

ಸ್ನೇಹ ತೋರಿದರೆ ಭಂಟ
ಪ್ರೀತಿ ಮಾಡಿದರೆ ನೆಂಟ
ಶರಣಾಗತರ ಪೊರೆವ ಕರುಣಾಕರ...

ಹೆಚ್ಚೇನು ಹೇಳಲಿ..?
ವರ್ಣನೆಗೆ ನಿಲುಕನವ
ದಾಟಿಸುವನವ ಭಾವಸಾಗರ...

ಹೃದಯವೈಶಾಲ್ಯತೆಯ ಕಡಲು
ಅಪ್ಪಿದರೆ ತಾಯ್ಮಡಿಲು
ಸರ್ವಸ್ವ ಅವನೆನ್ನ ಮುರಳೀಧರ...

             ಶೈಲೂ....
[22/05 2:44 pm] drbnshylaramesh: ಸುಗ್ಗಿಕಾಲ
*********

ಬಂದಿದೆ ನೋಡು ಸುಗ್ಗಿಕಾಲ
ವರ್ಷದ ದುಡಿಮೆಯ ಪ್ರತಿಫಲ
ಉತ್ತು,ಬಿತ್ತು, ಕಳೆ, ಸುಗ್ಗಿ ಕೊಯ್ಲು
ಇಂದು ಈ ಕಣದಲಿ ಬಟಾ ಬಯಲು

ಮನೆಮಂದಿಗೆಲ್ಲ ಕೈತುಂಬ ಕೆಲಸ
ವರ್ಷಂಪ್ರತಿ ದಿನ ಪ್ರತಿದಿವಸ
ದುಡಿದು ದಣಿದು ಭೂತಾಯಿ ಸೇವೆಮಾಡಿ
ಉದರನಿಮಿತ್ತ ಬೆಳೆದದ್ದು ಕಾಳುಕಡಿ

ಮಳೆ ಚಳಿ ಬಿಸಿಲೆನ್ನದ ಕಾಯಕ
ತುತ್ತು ಕೂಳಿಗೂ ಒಮ್ಮೊಮ್ಮೆ ಕಂಟಕ
ದುಡಿತದ ಪ್ರತಿಫಲಕೆ ಕಾಯಬೇಕು ವರ್ಷ
ರಾಶಿಯಲಿ ಧಾನ್ಯವ ಕಂಡಾಗ ಹರುಷ

ಸುಗ್ಗಿಯೆಂದರೇನೋ ಹಿಗ್ಗು ಮನಕೆ
ತೆನೆಯಲಿ ಪೋಣಿಸಿದ್ದ ಕಾಳ ಹೆಕ್ಕುವ ಬಯಕೆ
ಕೊಯ್ದ ಪೈರು ಕಲ್ಲುಗುಂಡಲಿ ತುಳಿಸಿ
ಬೇರ್ಪಡಿಸಿದ್ದ ಕಾಳ ರಾಶಿಯನ್ನಾಗಿಸಿ

ಹೊಟ್ಟು ಬೇರ್ಪಡಿಸಿ ಗಟ್ಟಿಕಾಳನ್ನಾರಿಸಿ
ತೂರಿ ಕೇರಿ ಜೊಳ್ಳುಗಳ ಪ್ರತ್ಯೇಕಿಸಿ
ರಾಶಿಯಾಗಿಸಿ ಹಣ್ಣುಕಾಯಿತ್ತು ಪೂಜಿಸಿ
ಮೊರತುಂಬಿದ ಕಾಳು ಬಡವನಿಗರ್ಪಿಸಿ

ವಂದಿಸಿ ಬೆಳೆಯಿತ್ತ ಭೂತಾಯಿಗೆ
ಸಹಕರಿಸಿ ಜೊತೆಯಾದ ದನ ಕರುವಿಗೆ
ಬೆಳೆದ ರೈತನಿಗೆ ನಂತರವೇ ತುತ್ತು
ಇದುವೇ ತಾನೇ ಸತ್ಸಂಸ್ಕಾರದ ಗತ್ತು

               ಶೈಲೂ.......
[23/05 9:52 am] drbnshylaramesh: ಮೌನವೇಕೆ ರಾಧೇ
****************

ಮೌನಕ್ಕೆ ಶರಣಾದೆ ಏಕೆ ಗೆಳತಿ ರಾಧೇ.?
ಮನದಲೇಲಿನಿತು  ಚಿಂತೆ ಆವರಿಸಿದೆ
ನಿನ್ನೀ ಮೌನಕೆ ಬೃಂದಾವನವೇ ಸ್ಥಬ್ಧ
ನೋಡೀ ಪರಿಸರ ತಾಳಿತೆಂತು ನಿಶ್ಯಬ್ದ..!!

ನಿನ್ನ ನಲಿವಿಲ್ಲದೇ ಸೃಷ್ಟಿ ಚೈತನ್ಯಕೆಲ್ಲಿ ನಲಿವು
ಪುಷ್ಪಗಂಧಗಳಲೂ ಇನಿತಿಲ್ಲ ಚೆಲುವು
ನೋಡಲ್ಲಿ ಮಂದಾಲಿನವೂ  ಮೌನವಾಗಿಹ
ಉರಿವ ಸೂರ್ಯನೂ ಅದೇಕೋ ಬಳಲಿಹ.!!

ನೀ ಬೃಂದಾವನದ ಚೆಲುವಿನ ಖನಿ
ಮರೆಯಾಯ್ತೆಕೇ ನಿನ್ನುಲಿತದ ಇನಿದನಿ?
ಮಾಧವನ ಕಾಣದೇ ಬೇಸರವೇ?
ಅವನ ಅನುಪಸ್ಥಿತಿ ಮೌನಕೆ ಕಾರಣವೇ..!!

ಎನಿಹುದೇಳು ಮನದ ನೋವು?
ಶ್ಯಾಮನಿಲ್ಲದಿದ್ದುದಕೇನು ಕೊರಗು?
ಇರಬಹುದವನಿಗೆನೇನೋ ಕೆಲಸ
ಬಿಟ್ಟಿಲ್ಲೇ ಹೋಗಿರುವನಲ್ಲ ಮನಸ..!!

ಅವನ ನೆನಪಿಹುದಷ್ಟು ರಾಶಿ ರಾಶಿ
ಮನವಿರಿಸಿ ಅವನನೆನಪಲ್ಲೆ ಕಾಣೋಣ ಖುಷಿ
ನೋವು ನಲಿವುಗಳನ್ನೆಲ್ಲಾ ಅವನಿಗರ್ಪಿಸಿ
ಸೆಟೆದೇಳು ಗೆಳತಿ ಮೌನ ಮರ್ಧಿಸಿ..!!

ನೆನಪಿಗಿಹುದಲ್ಲ ಅವನ ಕೊಳಲು
ಕೊಳಲಲ್ಲವಿದು  ಅವನದೇ ನೆರಳು
ಸಾವಿರಜನ್ಮಕ್ಕಾಗುವಷ್ಟಿದೆ ಅವನೊಡನಾಟದ ಸುಖ
ಮೌನವ ತೊರೆದೇಳು ಬಾ ಗೆಳತಿ ಧರಿಸುತ ಹಸನ್ಮುಖ..!!

             ಶೈಲೂ......
[24/05 11:37 am] drbnshylaramesh: ನಯನ
******

ಮನದ ಕನ್ನಡಿಯಿದು ನಯನ
ಅಂದದ ಮೊಗಕೆ ಮುನ್ನುಡಿ ನಯನ
ಮುಖಾರವಿಂದದಲಿ ಚಂದದ ಭಿತ್ತಿ
ಮನದ ಭಾವನೆ ಅರುಹುವ ಅಭಿವ್ಯಕ್ತಿ..!

ಹಾಲಿನ ಬಟ್ಟಲೊಳು ಕಪ್ಪು ದ್ರಾಕ್ಷಿ ಇಟ್ಟಂತೆ
ಹರಿವ ನೀರಿನೊಳು ಮೀನು ಹೊರಳಿದಂತೆ
ಮುಖದ ಕಮಲದಲ್ಲಿ ಜೋಡಿ ಕಮಲವಂತೆ
ಅಬ್ಬಾ..!! ಏನೇನು ಉಪಮೆ ನಯನಕೆ

ಸಂತಸದಿ ಅರಳರಲಿ ನಗುವುದು
ದುಃಖವಾದೊಡೆ ತಾನೇ ಅಳುವುದು
ಆಶ್ಚರ್ಯ ಸಂಭ್ರಮಕೇ ಬೆರಗು ನೋಟ
ಆಹಾ... ನಯನದಲೇನಿನಿತು ಬಗೆ ಬಗೆ ಮಾಟ

ಮನದ ಮಾತುಗಳ ಅರುಹುವುದು ನೋಟ
ಅದೇನು ಕರುಣೆ ಪ್ರೀತಿ ಒಡನಾಟ
ಜಗವನನುಭವಿಸಿ ಕಾಣಲು ಬೇಕು ದೃಷ್ಠಿ
ಆಹಾ.. ಅದೇನು ಸೊಬಗು ಆ ದೇವನ ಸೃಷ್ಟಿ

ಒಂದೊಂದು ಭಾವಕೊಂದೊಂದು ನೋಟ
ಭಯ ರೌದ್ರ ಭೀಕರ ಕರುಣಾ ಶೃಂಗಾರ
ಕೋಪತಾಪಕೂ ಹುಸಿ ಮುನಿಸ ನೋಟ
ಒಳಮರ್ಮವರಿವುದಕೆ ನೇರ ನೋಟ

ಶಾಂತಿಯನರಸಲು ನಯನ ಬುದ್ಧ ಪ್ರಬುದ್ಧ
ಅಂತಃಚಕ್ಷು ತೆರೆದರೆ ಸತ್ಯದರ್ಶನ ಸಂವೃದ್ಧ
ಮನದ ಬಿಂಬದ ಪ್ರತಿಬಿಂಬವೀ ಕಣ್ಣು
ಹೃದಯಭಾಷೆಯನರಿವ ನಯನವೇ  ಹೊನ್ನು

ಸೃಷ್ಟಿ ಸೌಂದರ್ಯ ಸವಿಯೆ ದೇವನಿತ್ತ ವರದಾನ
ದೇಹಸೌಂದರ್ಯಕೂ ಕಾರಣವೀ ನಯನ
ದೃಷ್ಠಿಹೀನರ ಕಂಡು ಕರಗಿ ಮರುಗುವುದು ಮನ
ತಮ್ಮೊಂದಿಗೆ ಮಣ್ಣಾಗಲು ಬಿಡದೆ ಮಾಡಿ ನೇತ್ರದಾನ

             ಶೈಲೂ......
[24/05 8:23 pm] drbnshylaramesh: ನಾವಿಬ್ಬರೊಂದೇ..!!
*****************

ನಾವಿಬ್ಬರೊಂದೇ ಯಾಕೀ ಮೊರೆತ
ಬೇರಾದರೂ ಬೇರಲ್ಲವಿದು  ಆನೃತ
ಪ್ರುರುಷ - ಪ್ರಕೃತಿ ಒಂದಾದ ವೇಷ
ತಿಳಿ ನಾವರ್ಧನಾರೀ ಪುರುಷ

ನಾ ನಿನ್ನ ಕೈಯೊಳ ಕೊಳಲು
ನೀನಾಗಿ ಹೊಮ್ಮಿ ಅದರ ದನಿ
ಬೆಸೆದು ನವ ರಾಗ ಹೊಸೆಯೇ
ಹೊರಹೊಮ್ಮದೇ  ಇನಿದನಿ.?

ನಾನವನಿ ನೀನಾದೆ ಅಂಬರ
ಭೋರ್ಗರೆದು ಪ್ರೇಮ ಧಾರಾಕಾರ
ಎನಿಂಥ ಚುಂಬಕ ಸೆಳೆತವೀ ಅಮಲು.!
ತಡೆಹಿಡಿಯಿತೇ ಕಯ್ಯಲ್ಲಿನ ಕೊಳಲು ?

ತುಸು ಲಜ್ಜೆ ಬೆರೆಸಲಾರೆ ಕಣ್ಣು
ಇಂಥ ಸನಿಹ ಎದುರಿಸಲ್ಹೇಗೆ ನಾ ಹೆಣ್ಣು.!
ನೀಲದೊಳಗೇ ಗೌರ ಮಿಳಿತು
ನೀಲವಾಯ್ತು ಜಗ ಅವನೊಡನೆ ಕಲೆತು

ಹೇಗಿದ್ದರೂ ನಾವಿಬ್ಬರೊಂದು
ಬಿಡಿಸಲಾಗದ್ದು ಅನಂತವೀ ಸಖ್ಯ
ನಿನ್ನೊಳಗೆ ನಾನಾಗಿ ನನ್ನೊಳು ನೀನು
ದೂರಾಗದೆ ಬೆರೆಯುವುದು ಮುಖ್ಯ

              ಶೈಲೂ.....
[25/05 8:09 pm] drbnshylaramesh: ದಾರಿ ಕಾಯುತ ನಿಂತೆ
*******************

ದಾರಿಕಾಯುತಿರುವೆ ನಲ್ಲ
ಇನ್ನೂ ನೀ ಏಕೆ ಬರಲಿಲ್ಲ
ಕನಸುಗಳ ಬೆನ್ನತ್ತಿ ನಿಂತೆ
ನೆನಪುಗಳ ಭಾರಕೆ ಸೋತೆ

ಮನದೊಳು ಅಳತೆ ಮೀರಿದ
ಭಾವಗಳ  ಆಂದೋಳನ
ಮನತುಂಬಿ ಓಡಿ ಬರುವ
ನೆನಪುಗಳ  ಸಮ್ಮಿಲನ

ಅನುರಾಗದ ಹೊಳೆಯಲ್ಲಿ
ಕೊಚ್ಚಿಹೋದ ಆ ಘಳಿಗೆ
ಬಿಡದೆ ಕಾಡುವ ಕನಸುಕಂಗಳ
ತುಂಬಾ ಭಾವಬಿಂಬದ ಮಳಿಗೆ

ಬಿಡದೆ ಭೋರ್ಗರೆವ ನಿನ್ನ
ಭಾವದಲೆಯಲಿ ಕೊಚ್ಚಿಹೋಗಿ
ಹಂಬಲಿಕೆ ಬಲವಾಯ್ತು
ಬರಲಿಲ್ಲೇಕಿನ್ನುನನ್ನ ಹೆಸರು ಕೂಗಿ

ಸಾವಿರ ಕನಸಿಗೆ ರಂಗು ಬಳಿದು
ಕಾದಿರುವೆ ನಿನಗಾಗಿ ಅಂಗಳದಲಿ
ಮಳೆಯಾಗಿ ಹನಿಸಿ ಕಾರ್ಮೋಡ ಕರಗಿ
ಕಾಣಲು ತವಕಿಸುತ್ತಿರುವೆ ಗೋಡೆಗೊರಗಿ

             ಶೈಲೂ.....
[28/05 5:01 pm] drbnshylaramesh: ಮುಗಿಯದ ಕಥೆ
**************

ನೋವುಗಳ ಹಿಂದಿಕ್ಕಿ
ನೋವು ನುಸುಳುವುದಲ್ಲ
ನಗುವೆಂವುದು ಮರೀಚಿಕೆ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ನಾಳೆಗಳಂದದ ಬದುಕಿಗೆ
ಇಂದು ಅಡಿಗಲ್ಲನಿಡಲು
ಕಾಲೆಳೆದು ಹೀಗಳೆವರೆಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಕಂಡ ಕನಸುಗಳನ್ನೆಲ್ಲ
ನನಸಾಗಿಸುವ ಬಯಕೆ
ಚುಚ್ಚಿ ಮನ ಹಿಂಡುವರಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಆಸೆಬಳ್ಳಿಗೆ ನೀರನುಣಿಸಿ
ಹೆಮ್ಮರವಾಗಿಸುವ ಬಯಕೆ
ಚಿಗುರಲ್ಲೇ ಚಿವುಟುವರು ಮಂದಿ
 ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಚಂದದ ಸಾವಿರ ಕುಸುರಿ
ಚಿತ್ತಾರದೆಳೆಯಲ್ಲೂ 
ಕಪ್ಪೊಂದು ಹುಡುಕುವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ರಾಜಾಸನದಿ ಕೂರಿಸಿ
ಸರ್ವಸೇವೆಗೈದರೂ
ತಪ್ಪೊಂದು ಹುಡುಕುವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಅಸನ ವಸನವಿತ್ತು
ತುತ್ತಿತ್ತು ತಣಿಸಿದರೂ
ದ್ರೋಹ ಬಗೆವವರೇ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಕಷ್ಟದಲಿ ಜೊತೆಯಿದ್ದು
ಸಹಕಾರವಿತ್ತರೂ ಕೊನೆಗೆ
ಬೆನ್ನ ಇರಿಯುವ ಮಂದಿ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಸಹಜ ಸ್ನೇಹವನಿತ್ತು
ಅಪ್ಪಿ ಅಧರಿಸಿದರೂ
ತಪ್ಪೇಣಿಸುವವರೆ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಬೆಳಕೀವ ದೀಪದ ಬೆಳಕಿದ್ದರೂ
ಅಡಿಯ ಕತ್ತಲೆಯನೆತ್ತೆತ್ತಿ
ಅಡಿಕೊಳ್ಳುವ ಮಂದಿಯಿವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಜ್ಯೋತಿಯೊಲು ತಾನುರಿದು
ಮನೆಗೆ ಬೆಳಕಾದರೂ ಸಹಿತ
ಹೆಣ್ಣೆಂದು ಜರಿವವರೆ ಎಲ್ಲ
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಹೆತ್ತವರ ಮರೆತು ಕೈಹಿಡಿದವರ
ಅನುಸರಿಸಿ ತೃಪ್ತಿಯಿಂದಿದ್ದರೂ
ತೆಪ್ಪಗಿರರೀಮಂದಿ ಕುಹಕ ನುಡಿವವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಸಹಜತೆಯ ಮರೆತೇಕೆ
ಅಸಹಜತೆಯ ದಾರಿಯಲಿ
ಕುಹಕವಾಡುವರಿವರು
ಅಯ್ಯೋ ಬಿಡಿ ಇದು ಮುಗಿಯದ ಕಥೆ..!!

ಮುಗಿಯದೀ ಕಥೆಯ
ಎಂದು ಮುಗಿಸುವೆದೇವ
ಸಹನೆ ತಪ್ಪುವುದರೊಳಗೆ
ಮನ್ನಿಸಿ ಮುಗಿಸಿಬಿಡು ಬಾಳ ವ್ಯಥೆ...

           ಶೈಲೂ......
[30/05 10:45 am] drbnshylaramesh: ನಾನಾಗಬೇಕಿತ್ತು
***************

ಮೋಡದ ಮರೆಯಿಂದಿಣುಕಿ
ಹಾಲುಚೆಲ್ಲುದಂತೆ ಸುತ್ತಮುತ್ತ
ನಗುವ ಬೆಳದಿಂಗಳ ಕಂಡು
ಉಕ್ಕುಕ್ಕಿ ಹರಿವ ಕಡಲು ನಾನಾಗಬೇಕಿತ್ತು.!

ಇರುಳು ಬಾನಿನ ಲಾಂದ್ರ
ಹೊಳೆದೆಳೆವ ಸಮಯದಲಿ
ತಿಳಿಗೊಳದಿ ಬಿಮ್ಮನರಳಿ
ನಗುವ ನೈದಿಲೆ ಹೂವು ನಾನಾಗಬೇಕಿತ್ತು.!

ಕಾರ್ಮೋಡ ತಾ ಕರಗಿ
ಹನಿಹನಿಯಾಗಿ ಧರೆಗಿಳಿದು
ಭುವಿಯೊಡಲ ತಣಿಸುವ
ತುಂತುರು ಸೋನೆ ಮಳೆ ನಾನಾಗಬೇಕಿತ್ತು.!

ಗುಡುಗು ಸಿಡಿಲಾರ್ಭಟಡಿ
ಧೋ ಎಂದು ಮಳೆ ಸುರಿದಾಗ
ಬೆಚ್ಚಿ ಬೆದರದೆ ತಾನು
ಅಪ್ಪಿ ಅಲಂಗಿಸುವ ಇಳೆ ನಾನಾಗಬೇಕಿತ್ತು.!

ಮಳೆ ಬಿಸಿಲಿನಾಟಕೆ
ಪ್ರತಿಫಲಿಸಿ ಪ್ರತಿದ್ವನಿಸಿ
ವರ್ಣ ಮೇಳಗಳ ಸಂತೆಯಲಿ
ಮನಸೆಳೆವ ಇಂದ್ರಧನುಶ್ ನಾನಾಗಬೇಕಿತ್ತು.!

ಪಚ್ಚೆಗಿಡಗಳಲರಳಿ ಮೆಲ್ಲ
ಸೌಗಂಧದಲೇ ಬಂಧಿಸೆಲ್ಲ
ಕ್ಷಣಿಕ ಬದುಕಿದ್ದರೂ ಸಾಕು
ಅಚ್ಚ ಬಿಳಿಯ ಮಲ್ಲಿಗೆ ನಾನಾಗಬೇಕಿತ್ತು.!

ದೇವ ಆಸೆಯಿಹುದೇನೋ ಬಹಳ 
ನಾ ನೀನಿಟ್ಟಂತೆ ಇರುವ ಮರುಳ
ಆದರೂ ಕೊನೆಗೊಂದಾಸೆ
ನಿನ್ನೊಡಲಲ್ಲಿ ನಲಿವ ಕೈಗೂಸು ನಾನಾಗಬೇಕಿತ್ತು.!

        ಶೈಲೂ.
.
[31/05 12:45 pm] drbnshylaramesh: ಕವಲುದಾರಿ
***********

ಇದು ಮುಗಿಯದ ಬಾಳ ಪಯಣ
ನಿತ್ಯ ನಿರಂತರ ಸಾಗುವುದೇ ಜೀವನ
ಸಾಗುತ್ತ ಸಾಗುತ್ತ ಸವೆಸಿ ಅರ್ಧದಾರಿ
ಧುತ್ತನೆದುರು ನಿಂತಿತೇಕೆ ಈ ಕವಲುದಾರಿ?

ಎತ್ತಕಡೆಗಿನ್ನು ಪಯಣ ತಿಳಿಯದಾಯ್ತೆ
ಇತ್ತಲೋ ಅತ್ತಲೋ ಎತ್ತಲೋ ಎದುರಾಯ್ತು ಚಿಂತೆ
ಎತ್ತ ನಡೆದರೆ ಇಹುದು ಪಯಣ ಸುಗಮ
ತಪ್ಹೆಜ್ಜೆ  ಇಟ್ಟರದು ಕವಲುದಾರಿಯ ಭ್ರಮಾ

ಪ್ರಮುಖ.ಘಟ್ಟವಿದು ಬಾಳ ಪಯಣಕೆ
ನಿರ್ಧರಿಸಲಾಗದು ಏಕೋ ಹೆದರಿಕೆ
ನಿರ್ಣಯದಲಿಹುದು ಬದುಕ ಸಿಹಿ ಕಹಿ
ತಪ್ಪುದಾರಿಯ ನಡಿಗೆ ಭರಿಸಲಾಗದ ಕಹಿ

ತೋಚದಾಗಿದೆ... ಈಗ ಎತ್ತ ನಡೆಯಲಿ?
ಭರವಸೆಯ ಜ್ಯೋತಿ ಬೇಕಿದೆ  ದೃಢ ನಿಲುವಿನಲಿ
ಕರಹಿಡಿದೆನ್ನ ಮುನ್ನೆಡೆಸು ಹೇ ಮಾಧವಾ
ಸರಿದಾರಿಯಲೆನ್ನ ನಡೆಸು ಹೇ ಯಾದವಾ..

           ಶೈಲೂ.....
[02/06 4:57 pm] drbnshylaramesh: ಪರಿಸರ ಸಂರಕ್ಷಣೆ
***************

ಜೀವ ಸಂಕುಲದ ಉಳಿವಿಗಿರಬೇಕು ಕಾಡು
ಗಿಡಮರವ ಕಡಿದು ಬೋಳಾಗಿಸಿ ಮಾಡಿಹರು ನಾಡು
ಅರಿವಿನ ಕೊರತೆಗೆ ವಾಯು ನೆಲ ಜಲ ಕಲುಷಿತ
ಅವಿವೇಕದ ನಡತೆಗೆ ಪರಿಸರವೇ ದೂಷಿತ

ಪರಿಶುದ್ಧ ಗಾಳಿಗೂ ಬಂತು ಸಂಚಕಾರ
ಗಿಡಮರವ ಕಡಿದು ತಂಪಿಲ್ಲದೆ ಆಹಾಕಾರ
ಅಧಿಕ ಹೊಗೆಯುಗುಳುವ ಕಾರ್ಖಾನೆ ವಾಹನ
ಪರಿಶುದ್ಧ ಗಾಳಿಯಿರದೆ ಜೀವಕೆಲ್ಲಿ ಚೇತನ

ಜೀವ ಜಲಕೂ ತ್ಯಾಜ್ಯ ವಸ್ತುಗಳ ಸುರಿವರೀ ಜನ
ಶುದ್ಧತೆ ಇನ್ನೆಲ್ಲಿ ಕೊಳಕಿನಿಂದಲೇ ರೋಗರುಜಿನ
ಹಸಿರೆಲ್ಲ ಕನಸು ಬರಿದೇ ಕಾಂಕ್ರೀಟ್ ಕಾಡು
ಮುಂದೊಮ್ಮೆ ಕಾದಿದೆ ಮನುಜನಿಗೆ ನಾಯಿಪಾಡು

ಹಸಿರಿನ ಸ್ವಚ್ಛ ಪರಿಸರ ಜಗದ ಜೀವನಾಡಿ
ಗಿಡನೆಡಿ ಮುಂದೊಮ್ಮೆ ಅದುವೆನಮ್ಮ ಒಡನಾಡಿ
ಮನುಜನ ಕೈಯಲ್ಲಿದೆ ಅಳಿವುಉಳಿವಿನ ಪ್ರಶ್ನೆ
ಮರೆಯದೇ ಮಾಡಿ ಪರಿಸರ ಸಂರಕ್ಷಣೆ

             ಶೈಲೂ.....
[03/06 8:10 pm] drbnshylaramesh: ಥೀಮ್ ಬರಹ##
ಮಾತಿನ ಮೇಲೆ ನಿಗಾ ಇರಲಿ##

ನುಡಿದರೆ ಮಾತು ಮುತ್ತಿನ ಹಾರದಂತಿರಲಿ
ಪ್ರತಿ ಮಾತಿನಲ್ಲಿಯೂ ಸಹಜತೆಯಿರಲಿ..
ಕೃತಿಮ ನುಡಿಗೆಂದೂ ಎಡೆಕೊಡದಿರಲಿ..
ಎಲುಬಿಲ್ಲದ ನಾಲಿಗೆಯ ಮೇಲೆ ಹಿಡಿತವಿರಲಿ..

ನುಡಿದರಿರಬೇಕು ಹೊಳಪು ಮಾಣಿಕ್ಯದ ತೆರದಂತೆ ..
ಗುರುಹಿರಿಯರಲ್ಲಿ ಗೌರವಾದರದ  ಬೇಕಂತೆ..
ಕಿರಿಯರಲಿ ವಾತ್ಸಲ್ಯಭರಿತ ನುಡಿಯಿರಲಿ..
ಸ್ನೇಹಭರಿತ ನುಡಿಯು ಗೆಳೆಯರಲ್ಲಿರಲಿ..

ಜೀವನೋತ್ಸಾಹವಿಲ್ಲದವಗೆ ಉತ್ಸಾಹನುಡಿಯಿರಲಿ..
ದುಃಖದಲಿ ಮಿಂದವಗೆ ಸಾಂತ್ವಾನವಿರಲಿ..
ಕೈಲಾಗದವನಿಗೆ ಹುರುಪುತುಂಬಲಿ ಮಾತು..
ಸಾಂತ್ವನದ ನುಡಿಯು ಮರುಹುಟ್ಟು ನೀಡಲಿ..

ಜ್ಞಾನಿಗಳೊಡನೆ ಲಾಲಿತ್ಯವಿರಲಿ ಮಾತಿನಲಿ..
ಅಜ್ಞಾನಿಗಳೊಡನೆ ಮಾತು ಮೌನವಾಗಿರಲಿ..
ಅಸಂಬದ್ಧ ಮಾತುಕಥೆಯಿಂದ ದೂರವಿರಲಿ ಮನಸು..
ತರ್ಕದಲಿ ಮಾತು  ಅತಿ ತೂಕವಿದ್ದರೆ ಸೊಗಸು.. 

ವಿತಂಡವಾದದಲಿ ಮಾತು ಮಣಿಸುವಂತಿರಲಿ..
ಪ್ರಿಯರಜೊತೆ ಮಾತಿನಲಿ ಒಲವು ತುಂಬಿರಲಿ..
ಕಷ್ಟದಲಿ ನೊಂದವಗೆ ದಾರಿದೀಪವಾಗಲಿ ಮಾತು..
ಜಗಳದಲಿ ಗೆಲ್ಲಲು ಆಯುಧವೆ ಮಾತೆಂಬ ಮುತ್ತು..

ಮಾತಿನಲಿ ಸಿಹಿಯಿರಲಿ ಜೇನಹನಿಯಂತೆ..
ಸಕಲರೊಡನೆ ಬಾಂಧವ್ಯ ಬೆಸೆವುದು ಸವಿಮಾತಂತೆ..
ಹೃದಯ ಶ್ರೀಮಂತಿಕೆಯ ಗುರುತು ಸವಿಮಾತು..
ಹಿಡಿತವಿರೆ ಮಾತಿನಲಿ ಅದೇ ಸೌಜನ್ಯದ ಹೆಗ್ಗುರುತು..

           ಶೈಲೂ.....

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

356 ತಿಳಿಯುವ ಬಾ