ಕವನ ಸಂಗ್ರಹ[9/18, 4:14 PM] Dr || B.N. Shylaja Ramesh: 💐💐💐 ರಾಧೇ 💐💐💐 ****************************** *** ಲೋಕದ ಕಣ್ಣಿಗೆ ರಾಧೆಯು ಕೂಡಾ ಎಲ್ಲರಂತೆ ಒಂದು ಹೆಣ್ಣು..... ಅವಳಂತರಂಗವ ಅರಿತವರಿಲ್ಲದೆ ಒದ್ದೆಯಾಯ್ತವಳ ಕಣ್ಣು ...... ರಾಧೇ ಎಂದಾಕ್ಷಣ ಬರುವನು ಕೃಷ್ಣ ಎಲ್ಲರ ಮನಮಾನಸದಿ ಯಾರೂ ಅರಿಯರು ರಾಧೆಯ ನೋವಾ ಒಳಗಿಹುದು ಬಹು ಬೇಗುದಿ...... ಹಾಲಾಹಲವ ಒಡಲೊಳಗಡ ಗಿಸಿ ನಗುವಳು ಹೂವಿನ ತೆರದಿ ಮುತ್ತಿದೆ ಮನವಾ ಸಾವಿರ ನೋವು ಆದರೂ ನಗುವಳು ಮುದದಿ.... ಬಾರದ ಕೃಷ್ಣನ ದಾರಿಯ ಕಾಯುತ ಕುಳಿತಳು ನಂದನ ವನದಿ ಒಳಹೊಕ್ಕವಳ ಅಂತರಂಗವ, ಕೃಷ್ಣಾ ನೀನಿಹೇ ಅಲ್ಲೇ ಚಂದದಿ..... ಶೈಲೂ...... [9/18, 4:14 PM] Dr || B.N. Shylaja Ramesh: -: ಸತ್ತ ಮನದ ಕಳಕಳಿ :- ಶಾಂತ ಮಾನಸ ಸರೋವರ ಕದಡಿ ಕೆನ್ನೀರಾಗಿ ಹಳಸಿ ನಾರುತಿದೆ ಪಟಪಟನೆ ಸುರಿವ ವಾಗ್ಜರಿಗೆ ಮನಸು ಬೀಗ ಮುದ್ರೆಯನೊತ್ತಿದೆ ಸುಂದರ ಕನಸು ಕಾಣುವ ಬೊಗಸೆ ಕಂಗಳು ತುಂಬಿದ ಕೊಳಗಳಾಗಿವೆ ಬಾನೆತ್ತರ , ಮುಗಿಲೆತ್ತರ ಕ್ಕೇರುವ ಮನಸು ಗರಿಮುದುರಿ ಮಲಗಿದೆ ಶುಧ್ಧ ಯೋಚನಾ ಲಹರಿಯು ಪ್ರಕ್ಷುಬ್ಧ ವಾಗಿದೆ ಪುಟ್ಟ ಅನುಮಾನದ ಬೀಜ ಆಂತರ್ಯದಿ...
Comments
Post a Comment