92.ಹಣತೆ

ಹಣತೆ
           
ಹಚ್ಚಬೇಕು  ಹಣತೆ
ತಮ ಬೆಚ್ಚಿ ಬೀಳುವಂತೆ
ಸುತ್ತಲೂ ಹಬ್ಬಿ ಬೆಳಕು
ಮನ ಹರುಷವಾಗುವಂತೆ

ನಿತ್ಯ ಬೆಳಗಬೇಕು
ಜ್ಯೋತಿ ಹೊತ್ತಿ ಉರಿಯಬೇಕು
ಮನದ  ವಿಷವ ತೊಳೆದು
ಪ್ರೀತಿ ಹಬ್ಬಿ ನಲಿಯಬೇಕು

ದ್ವೇಷದಂಧಕಾರ
ನಾಚಿ ತೊಲಗಬೇಕು
ಅಜ್ಞಾನ ಕೊಳೆಯ ತೊಳೆದು
ಜ್ಞಾನ ಪಸರಬೇಕು

ಮೃತ್ಯು ಮುಖದ ಶಕ್ತಿ
ಬೆಚ್ಚಿ ಓಡುವಂತೆ
ಅಮೃತತ್ವದೆಡೆಗೆ ಬದುಕು
ಸಾಗಿ ನಲಿಯುವಂತೆ

ಹಚ್ಚಬೇಕು  ಹಣತೆ
ನಗುವೆಲ್ಲೆಡೆ ತುಂಬುವಂತೆ
ಸೌಹಾರ್ದ ಬದುಕ ಬಯಸಿ
ಶಾಂತಿ  ಹರಡುವಂತೆ

          ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು