62.ಮನಸ್ಸೊಂದಿದ್ದರೆ ಸಾಕು



ಮನಸ್ಸೊಂದಿದ್ದರೆ ಸಾಕು ಚುಕ್ಕಿ ಚಂದ್ರಮರೂ ಕೈಗೆಟುಕುವರು


ಕೈಲಾಗದೆಂದು ಕೈಕಟ್ಟಿ ಕುಳಿತರಾದೀತೇ ಹೇಳು?
ಮಗ್ನವಿರಲಿ ಮನವು ಸಾಧನೆಯ ಹಾದಿಯಲ್ಲಿ
ಛಲದಿಂದ ಮುನ್ನುಗ್ಗಿದರೆ ಜಯ ಕಟ್ಟಿಟ್ಟ ಬುತ್ತಿ ಕೇಳು
ಮನಸ್ಸೊಂದಿದ್ದರೆ ಚುಕ್ಕಿ ಚಂದ್ರಮರೂ ಕೈಗೆಟುಕುವರು

ತನ್ನಿಂದೇನೂ ಆಗದೆಂದು ಸೋತು ಕಂಗೆಟ್ಟರಾದೀತೇ?
ಧೃಢನಿಶ್ಚಯವೇ ಮನುಜ ದಾರಿ ತೋರುವ ಗುರುವು
ವಿಶ್ವಾಸವಿರಲಿ ಸದಾಕಾಲ ನಿನ್ನಸ್ಥಿತ್ವದ ಮೇಲೆ
ಸಂಶಯವೇ ಆತ್ಮವಿಶ್ವಾಸವ ಕುಗ್ಗಿಸುವ ನಿಜವೈರಿ

ಸಾಧಿಸಿಯೇ ತೀರುವೆನೆಂಬ ಛಲವೊಂದಿದ್ದರೇ ಸಾಕು
ಆತ್ಮಬಲವೂ ನುಗ್ಗಿ ಕೈ ಜೋಡಿಸುವುದು ಕೇಳು
ಪ್ರಬುದ್ಧಾಲೋಚನೆಯಲಿ ಶುದ್ಧ ಪ್ರಯತ್ನವೊಂದಿರೆ
ಯಶಸ್ಸು ಶ್ರೇಯಸ್ಸು ನಿನ್ನ
ಕಾಲಡಿಯ ಸ್ವತ್ತು

ಶುದ್ಧ ಮನ ಆತ್ಮವಿಶ್ವಾಸವೇ ಜಯದ ಮೂಲಮಂತ್ರ
ನಿಸ್ವಾರ್ಥ ಪ್ರೇಮ ಸತ್ಯದ ನಡೆನುಡಿ ಜಯವ ಸೆಳೆವ ತಂತ್ರ
ಪ್ರಕ್ಷುಬ್ಧಕ್ಕೆಡೆಕೊಟ್ಟರೇ ಹಿಂದೆಯೇ ಸೋಲಿಸುವ ಕುತಂತ್ರ
ದೈವಬಲವಿದ್ದರೆ ಸಾಧನೆಗೆ ಮನುಜ ನೀ ನಿಮಿತ್ತ ಮಾತ್ರ

            ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು