ನನ್ನ ಕವನಗಳು


ಕವನ ಸಂಗ್ರಹ[9/18, 4:14 PM] Dr || B.N. Shylaja Ramesh: 💐💐💐    ರಾಧೇ     💐💐💐
*********************************
ಲೋಕದ ಕಣ್ಣಿಗೆ
 ರಾಧೆಯು ಕೂಡಾ
ಎಲ್ಲರಂತೆ  ಒಂದು  ಹೆಣ್ಣು.....
ಅವಳಂತರಂಗವ
ಅರಿತವರಿಲ್ಲದೆ
ಒದ್ದೆಯಾಯ್ತವಳ  ಕಣ್ಣು ......

ರಾಧೇ ಎಂದಾಕ್ಷಣ
ಬರುವನು ಕೃಷ್ಣ
ಎಲ್ಲರ ಮನಮಾನಸದಿ
ಯಾರೂ ಅರಿಯರು
ರಾಧೆಯ  ನೋವಾ
ಒಳಗಿಹುದು  ಬಹು ಬೇಗುದಿ......

ಹಾಲಾಹಲವ
ಒಡಲೊಳಗಡ ಗಿಸಿ
ನಗುವಳು  ಹೂವಿನ ತೆರದಿ
ಮುತ್ತಿದೆ  ಮನವಾ
ಸಾವಿರ ನೋವು
ಆದರೂ  ನಗುವಳು  ಮುದದಿ....

ಬಾರದ  ಕೃಷ್ಣನ 
ದಾರಿಯ ಕಾಯುತ
ಕುಳಿತಳು  ನಂದನ  ವನದಿ
ಒಳಹೊಕ್ಕವಳ
ಅಂತರಂಗವ,  ಕೃಷ್ಣಾ
ನೀನಿಹೇ ಅಲ್ಲೇ ಚಂದದಿ.....

          ಶೈಲೂ......
[9/18, 4:14 PM] Dr || B.N. Shylaja Ramesh: -: ಸತ್ತ ಮನದ ಕಳಕಳಿ :-

ಶಾಂತ  ಮಾನಸ  ಸರೋವರ ಕದಡಿ
ಕೆನ್ನೀರಾಗಿ ಹಳಸಿ ನಾರುತಿದೆ
ಪಟಪಟನೆ ಸುರಿವ ವಾಗ್ಜರಿಗೆ
ಮನಸು ಬೀಗ ಮುದ್ರೆಯನೊತ್ತಿದೆ
ಸುಂದರ ಕನಸು ಕಾಣುವ 
ಬೊಗಸೆ ಕಂಗಳು
ತುಂಬಿದ ಕೊಳಗಳಾಗಿವೆ
ಬಾನೆತ್ತರ , ಮುಗಿಲೆತ್ತರ ಕ್ಕೇರುವ
ಮನಸು  ಗರಿಮುದುರಿ  ಮಲಗಿದೆ
ಶುಧ್ಧ ಯೋಚನಾ ಲಹರಿಯು
ಪ್ರಕ್ಷುಬ್ಧ ವಾಗಿದೆ
ಪುಟ್ಟ  ಅನುಮಾನದ ಬೀಜ
ಆಂತರ್ಯದಿ ಬಿರುಕೊಡೆದು
ಟಿಸಿಲೊಡೆಯುತ್ತಿದೆ
ನಿನ್ನ ತಣ್ಣನೆಯ  ಮೌನ
ಅಡಕೆ ನೀರೆರೆದು ಪೋಷಿಸುತಿದೆ
ಅದು ಹೆಮ್ಮರವಾಗಿ,  ಈ  ದೇಹ
ಛಿದ್ರವಾಗುವ  ಮೊದಲು,
ಆ ಪುಟ್ಟ ಸಸಿಯ
ಬೇರುಸಹಿತ ಕಿತ್ತೊಗೆದು
ಈ  ಜೀವವವನುಳಿಸುವೆಯಾ??
ಪ್ರೀತಿಯ ಅಮೃತ ವ  ಬಡಿಸಿ
ಸತ್ತ ಮನಕೆ  ಸಿಹಿ ಮುದ್ರೆಯನೊತ್ತಿ
ಜೀವದಾನ  ಮಾಡುವೆಯಾ ????

                ಶೈಲೂ........
[9/18, 4:15 PM] Dr || B.N. Shylaja Ramesh: ಸಾಧನೆಯ ಹಾದಿಯಾ ದಾರಿಯಲಿ
ಕಲ್ಲು ಮುಳ್ಳುಗಳ ಹಾಸು
ಹೆದರಿ ನಿಲ್ಲದೆ ನಡೆವವರಿಗದುವೆ
ಹೂವಿನಾ ಹಾಸು

ದೃಢವಿರಲಿ  ಹೆಜ್ಜೆ
ಚುಚ್ಚಲೇಕೆ ಕಲ್ಲು
ನಡೆವ ಕಲೆಯ ಬಲ್ಲವಗೆ
ಆಗುವುದದುವೆ  ಮಕಮಲ್ಲೂ

ಜೀವನದ ಪ್ರತಿ ನಡೆಯೂ
ಕಷ್ಟದಾ  ಹಾದಿ
ಸಹಿಸಿ ನಡೆದರದುವೆ
ಗೆಲುವಿನಾ ಹಾದಿ

ಹತ್ತಿ ನಡೆಯಿರಿ 
ಒಂದೊಂದೇ ಮೆಟ್ಟಿಲು
ಗೆಲುವಿನ ಸಂಭ್ರಮಕ್ಕೆ
ಅದುವೇ  ಹೊಸ್ತಿಲು

ಏರಿ ಮೇಲೇರಿ
ದೃತಿಗೆಡದೆ  ಸಾಗಿ
ಬಂದ ಕಷ್ಟಗಳು 
ಸರಿಯುವುವು  ಬಾಗಿ

ಮೇಲೇರಿದಾ ಮೇಲೆಯೇ
ಹರುಷದಾ  ಗಾದಿ
ಮರೆಯದಿರಿ ಗೆಳೆಯರೇ
ನಡೆದು ಬಂದಾ ಹಾದಿ

              ಶೈಲೂ.......
[9/18, 4:17 PM] Dr || B.N. Shylaja Ramesh: 🌷🌷🌷🌷🌷🌷🌷🌷

ಕಾತರಿಸುತಿದೇ ಮನ
ಕಾಣಲು ಕೃಷ್ಣನ
ಅನುಪಮ ರೂಪನ
ಮೋಹಕಮಯನಾ ...

ಕಣ್ಣಲಿ ತುಂಬಿದೇ
ನಿನ್ನಯ ರೂಪವೇ
ಕನಸಲು ಮನಸಲು
ನಿನ್ನಯ ಧ್ಯಾನವೇ...

ಉಸಿರಲಿ ಬೆರೆತಿದೆ
ನಿನ್ನಯ ಹೆಸರು
ನಿನ್ನೀ ಹೆಸರಲೇ
ನನ್ನಯಾ ಉಸಿರು...

ಮುರಲಿಯ ಗಾನಕೆ
ಸೋತಿದೆ ಮನವೂ
ಮೋಹಕ ಚೆಲುವಿಗೆ
ಬಾಗಿದೆ ತನುವೂ...

ತೆರೆದಿದೆ ಬಾರೇಲೋ
ನನ್ನಯಾ ಮನವೂ
ಬಂದಾಕ್ಷಣವೇ
ಅರಳಿತು  ನಗುವೂ...

ರಾಧೆಯ ಮನವಿದು 
ನಿನ್ನಯ ಗುಡಿಯೂ
ಮನಸಿನ  ಮಲ್ಲಿಗೆ
ಏರಲಿ  ಮುಡಿಯೂ...

ತರುವುದು ಹರುಷವು
ಕೃಷ್ಣನೆನ್ನುವ  ನುಡಿಯು
ಬೀರೆಲೋ ಮಾಧವ
ಕೃಪೆ ಎನ್ನ ಕಡೆಯೂ...

               ಶೈಲೂ.....
[9/18, 4:17 PM] Dr || B.N. Shylaja Ramesh: ಮೋಡದ ಮರೆಯಲಿ
ಇಣುಕುವ ಶಶಿಯೊಲು
ಕಾಣುತಿದೆ  ಸಿರಿ ಮೊಗವು
ಭಕ್ತಿಯ ಆಲೆಯಲಿ  
ಸುಮ ಅರಳುವ ತೆರದಲಿ
ಮನದಲಿ  ಮೂಡುತಿದೆ ತಿಳಿನಗುವು....

ಕೃಷ್ಣ ನಿನ್ನ ಪ್ರೀತಿಗೆ
ಒಲವಿನ ನೋಟಕೆ
ಕಾದಿಹೆ ನಾನೂ  ಮುದದಿಂದ
ಗೋಪಿಯರೊಡನೆ
ಮೋಹದಿ ನಡೆಸುವ
ಲಾಸ್ಯದಾ  ಪರಿ ಚಂದ.....

ಕೃಷ್ಣನದೀ ಮನ
ಆತನೇ ಜೀವನ
ಕೃಷ್ಣ ನಲ್ಲವೇ ನನ್ನುಸಿರು
ಕೇಳದೆ ಈ ಮೊರೆ
ನೀ ಬಾರದೆ  ಹೋದರೆ
ನಿಲ್ಲುವುದೂ  ನನ್ನುಸಿರು...

               ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ