ನನ್ನ ಕವನಗಳು
[9/18, 4:25 PM] Dr || B.N. Shylaja Ramesh: ಬಂದ ಆನಂದದಿಂದ ಎನ್ನೊಡೆಯ ಬಂದ ಪರಮಾನಂದ ತಂದ ಶ್ರೀ ಕೃಷ್ಣ ಮುಕುಂದ ಕೊಟ್ಟಿದ್ದನ್ನ ಭಕ್ತಿಯಿಂದ ಪ್ರೀತಿಯಿಂದಲಿ.ತಿಂದ ಆಯಿತು ಮನಕಾನಂದ ಶ್ರೀ ಗೋವಿಂದ ತಂದ ಭಕ್ತಿಯಾ ಬಂಧ ಭಕ್ತಿಯಲೆಯಲಿ ತೇಲಿಸಬಂದ ನಿಜಭಕ್ತಿಗೆ ನಾ ನೊಲಿಯುವೆನೆಂದ ಇಂದು ನಾ ನಿನ್ನವನೆಂದ ಇಂದಾಯಿತೇನಗೆ ಅಮಿತಾನಂದ ಶ್ರೀಹರಿ ಗೋವಿಂದ ನಾಮವೇ ಚಂದ ಭಜಿಸುತ್ತಿದ್ದೇನವನ ಸಂಭ್ರಮದಿಂದ ಶೈಲೂ....... [9/18, 4:25 PM] Dr || B.N. Shylaja Ramesh: ಇಂದೆನ್ನ ಮನೆಗೆ ಕೃಷ್ಣಯ್ಯ ಬರುತ್ತಾನೆ ನನ್ನೆಲ್ಲ ಭಾಂಧವರೆ ನೋಡಬನ್ನಿ ಹಸುವಿನಾ ನೊರೆಹಾಲು ಹಸನಾದ ಮೊಸರ್ಬೆಣ್ಣೆ ಅವನಿಗಾಗಿ ತಂದಿರುವೆ ಕದ್ದು ತಿನ್ನುತ್ತಾನಂತೆ ನೋಡಬನ್ನಿ ಕೊರಳಲ್ಲಿ ಕೌಸ್ತುಭ ಕೈಯಲ್ಲಿ ಕೊಳಲು ಕಾಲ್ಗೆಜ್ಜೆ ರಿಂಗಣವ ಕೇಳಬನ್ನಿ ಅಂಬೆಗಾಲಿಡುತ್ತಾ ಮುದ್ದುಗರೆವುತ ಬರುತ್ತಾನೆ ಮುದದಿಂದವನ ನೋಡಬನ್ನಿ ವನದ ಸೀಬೆಹಣ್ಣು, ಅಡವಿ ಕಾರೇಹಣ್ಣು ಮರದ ನೆರಳೆಹಣ್ಣು ಅವನಿಗಿಷ್ಟವಂತೆ ಕೇಳಬನ್ನಿ ಅವನಿಗಿಷ್ಟದ್ದೆಲ್ಲ ಜೋಪಾನಮಾಡಿಟ್ಟಿ ರುವೆ ಈಗ ತಿನ್ನುತ್ತಾನೆ ನೋಡಬನ್ನಿ ಚಕ್ಕುಲಿ ಮುಚ್ಚೋರೆ ಕರಿದ ಆವಲಕ್ಕಿಯ ಮುದದಿಂದ ಮಾಡಿರುವೆ ನೋಡಬನ್ನಿ ತರತರದ ಉಂಡೆಗಳು ಜೊತೆಗೆ ಸಿಹಿ ಅವಲಕ್ಕಿ ಕಡೆದು ಮಾಡಿದ ಬೆಣ್ಣೆ ಭಕ್ತಿಯಲಿ ಮಾಡಿರುವೆ ನೋಡಬನ್ನಿ ಪುಟ್ಟ ಹೆಜ್ಜೆ ಇಡುತ, ಸದ್ದು ಮಾಡಿ ಮನೆಯಲ್ಲಿ ಮುದ್ದು ಮುಖವ ಸ್ಪಷ