348 ಆಧುನಿಕ ವಚನ
#ಆಧುನಿಕ_ವಚನ
#ಶೀರ್ಷಿಕೆ
#ಸಂತೆ_ಒಳಗೆ_ಚಿಂತೆ_ಬೇಡ
ಸಲ್ಲದ ಆಲೋಚನೆಗಳು
ಮನದಲಿದ್ದರೆ ಚಿಂತೆಯಾಗದಿದ್ದೀತೇ.?
ಚಿಂತೆಗಳ ಕದನದಲಿ ಭುಗಿಲೆದ್ದ
ಭಾವಗಳು ಸಿಡಿಯದಿದ್ದೀತೆ.?
ಚಿಂತೆಯ ಸಂತೆಯೊಳಗೇ ಬೇಯುತ
ದೈವವ ಕಡೆಗಣಿಸಿಬಿಟ್ಟರೆ
ಮೆಚ್ಚನಾ ನಮ್ಮ ಶ್ರೀಶೈಲನಾಥೇಶ್ವರ..!!
ಭಾವನೆಗಳ ಭಾವಗೀತೆ ******************** ಬರಿದೇ ನೆನಪುಗಳ ಸುಳಿಯಲ್ಲಿ ಸಿಕ್ಕಿ ಹುಡುಕಿ ತಡಕಾಡಿ ಅಕ್ಷರಗಳ ಹೆಕ್ಕಿ ಮನದೊಳಗಿನ ಭಾವ ಪದಗಳಲಿ ತುರುಕಿ ಸುಖದುಃಖಗಳಲೆಯಲಿ ಮುಳುಗೇಳಿ ತೇಲಿ ಮನದೊಳಗಿನ ಪ್ರೀತಿಯನು ಮೊಗೆಮೊಗೆದು ನೀಡಿ ಸ್ನೇಹ ಕಾರಂಜಿಯ ರಸಧಾರೆ ಸಿಂಪರಿಸಿ ನೋವು ನಲಿವುಗಳ ಅಳೆದಳೆದು ತೂಗಿ ತೋಚಿದ್ದನ್ನು ಗೀಚುವ *ಸಂಚಯ ಕವನ ಸಂಕಲನವೇ* ನನ್ನ ಭಾವನೆಗಳ ಭಾವಗೀತೆ..!!
Comments
Post a Comment