344 ಆಧುನಿಕ ವಚನ
#ಆಧುನಿಕ_ವಚನ
#ಶೀರ್ಷಿಕೆ
#ಹುಲಿತೊಗಲಿನ_ಮಾಯೆ
ಸುತ್ತೆಲ್ಲ ಕಳ್ಳರು ಖೂಳ ಖದೀಮರು
ಸಭ್ಯರಂತೆ ನಟಿಸುವ ವ್ಯಾಘ್ರನಂಥವರು
ಸುಳ್ಳಲ್ಲೇ ಮನೆಕಟ್ಟಿ ಮೆಟ್ಟಿ ನಿಲ್ಲುವವರು
ಸಮತ್ವಕೆ ಬೆಲೆಕೊಡದೆ ಬಡಿದು ತಿನ್ನುವರು
ಸುಲಿಗೆಕೋರರಿವರು ಮಹಾನ್ ವಂಚಕರು
ಸ್ವಾರ್ಥದಾಸೆಗೆ ಕಾಡನೂ ಕೊಳ್ಳೆಹೊಡೆವವರು
ಸಿಹಿಮಾತಲೇ ಸೆಳೆವ ನಯವಂಚಕರಿರಲು
ಸತ್ಯಧರ್ಮಕೆ ರಕ್ಷಕರಾರಯ್ಯ ಶ್ರೀಶೈಲನಾಥೇಶ್ವರ..!
Comments
Post a Comment