344 ಆಧುನಿಕ ವಚನ

#ಆಧುನಿಕ_ವಚನ

#ಶೀರ್ಷಿಕೆ 

#ಹುಲಿತೊಗಲಿನ_ಮಾಯೆ

ಸುತ್ತೆಲ್ಲ ಕಳ್ಳರು ಖೂಳ ಖದೀಮರು
ಸಭ್ಯರಂತೆ ನಟಿಸುವ ವ್ಯಾಘ್ರನಂಥವರು
ಸುಳ್ಳಲ್ಲೇ ಮನೆಕಟ್ಟಿ ಮೆಟ್ಟಿ ನಿಲ್ಲುವವರು
ಸಮತ್ವಕೆ ಬೆಲೆಕೊಡದೆ ಬಡಿದು ತಿನ್ನುವರು
ಸುಲಿಗೆಕೋರರಿವರು ಮಹಾನ್ ವಂಚಕರು
ಸ್ವಾರ್ಥದಾಸೆಗೆ ಕಾಡನೂ ಕೊಳ್ಳೆಹೊಡೆವವರು
ಸಿಹಿಮಾತಲೇ ಸೆಳೆವ ನಯವಂಚಕರಿರಲು
ಸತ್ಯಧರ್ಮಕೆ ರಕ್ಷಕರಾರಯ್ಯ ಶ್ರೀಶೈಲನಾಥೇಶ್ವರ..!

        ಡಾ : B.N ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ