ಗಣರಾಜ್ಯೋತ್ಸವ


ಗಣರಾಜ್ಯೋತ್ಸವ##

ಸ್ವಾತಂತ್ರ್ಯ ಸಿಕ್ಕರೂ ಇರಲಿಲ್ಲ
ಸ್ವರಾಜ್ಯವಾಳುವ ಪ್ರೌಢಿಮೆ..!!
ಸಂವಿಧಾನ ರಚನೆಯಾನಂತರವೇ
ಗಣರಾಜ್ಯೋತ್ಸವದ ಗರಿಮೆ..!!

ಪರದಾಸ್ಯದಿಂದ ಮುಕ್ತಿ
ನಮ್ಮದೇ ಆಳ್ವಿಕೆಯ ಶಕ್ತಿ..!!
ಇರಲಿ ಭರತಾಂಬೆಯಲಿ 
ಅರ್ಪಣಾಭಾವದ ಭಕ್ತಿ..!!

ಬಾಬಾ ಸಾಹೇಬ್ ಅಂಬೇಡ್ಕರ್
ಸಂವಿಧಾನದ ಹರಿಕಾರ..!!
ಮುಖ್ಯಪಾತ್ರಧಾರಿಗಳು
ತೆರೆಮರೆಯಲ್ಲಿ ಸಾಕಾರ ..!!

ಪ್ರಜಾರಾಜ್ಯ ಪಾಲನೆಗೆ ಸಿಕ್ಕ
ಶಾಸನಬದ್ದ ಅನುಮೋದನೆ..!!
ಪ್ರಜೆಗಳಿಂದ ಪ್ರಜೆಗಳಿಗಾಗಿಯೇ
ಪ್ರಜೆಗಳೇ ರಾಜ್ಯವಾಳುವ ಸೂಚನೆ..!!

ಗಣತಂತ್ರದ ಈ ಸುದಿನದ
ಹಿಂದಿಹುದು ಸಹಸ್ತ್ರಾರು
ದೇಶಭಕ್ತರ , ಯೋಧರ
ಹುತಾತ್ಮರ ರಕ್ತ ತರ್ಪಣ..!!

ಶುದ್ಧ ರಾಜತಾಂತ್ರಿಕ ನಡೆ
ನ್ಯಾಯಾನ್ಯಾಯ ವಿವೇಚನೆ ಕಡೆ..!!
ಇದ್ದರೆಮ್ಮ ನಡೆನುಡಿ ಸಗ್ಗವಿಲ್ಲೇ
ಇದುವೇ ಭರತಮಾತೆಗರ್ಪಣ..!!

✍️   ಶೈಲಜಾ ರಮೇಶ್

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು