253

ನನ್ನ ಜೀವನ ನನ್ನಕಥೆ##

ವಿಫಲವಾದ ನನ್ನ ಪ್ರಯತ್ನ##

        ನಂಗ್ಯಾಕೋ ಮೊದಲಿಂದಲೂ ವೈರಾಗ್ಯದ ಕಡೆಗೇ ಗಮನ,  ನಮ್ಮ ಸುಖ ಸಂಸಾರದ ಬಗ್ಗೆ ಅತೀವ ಅಭಿಮಾನವಿತ್ತಾದರೂ ಮನದಲ್ಲಿ ಇದಕ್ಕಿಂತಲೂ ಮೀರಿ ಬೇರೆ ಏನೋ ಇದೆ.. ಅದನ್ನ ಪಡೆಯುವ ಯತ್ನ ಮಾಡ್ಬೇಕು ಅನ್ನೋ ಅತೀವ ಆಸೆ,  ಹಾಗಾಗಿ ಬಾಲ್ಯದಿಂದಲೇ ಪುರಾಣ ಪುಣ್ಯ ಕಥೆಗಳ ಬಗೆಗೆ ಒಲವು.  ರಾಮಾಯಣ, ಮಹಾಭಾರತ  ಗ್ರಂಥದ ಪಾರಾಯಣ ಪ್ರತಿನಿತ್ಯ ಮಾಡ್ತಾಇದ್ದೆ..  ರಾಮಾಯಣದ ಮಾತಾ ಸೀತಾದೇವಿಯ ಪಾತ್ರ, ಮಂಡೋದರಿಯ ಪಾತ್ರ ಹಾಗೂ, ಮಾಹಾಭಾರತದ ಕುಂತಿಯ ಪಾತ್ರ ನನ್ನನ್ನು ಚಿಂತನೆಗೆ ಒರೆಗೆ ಹಚ್ಚಿದಂಥವು.  ಮಹಾಭಾರತದ  ಕೃಷ್ಣಲೀಲಾದಲ್ಲಿ ಬರುವ ರಾಧೆಯ ಪಾತ್ರವಂತೂ ಇಂದಿಗೂ ನನ್ನ ಕಾಡುವಂಥಹದು.   ಅವಳ ಅತೀವ ಪ್ರೇಮಭಕ್ತಿ, ಕೃಷ್ಣನ ಹೊರತಾಗಿ ಬೇರೆಲ್ಲಾ ವಿಷಯದಲ್ಲಿ ಅವಳ ನಿರ್ಲಿಪ್ತತೆ,.ಸಂಸಾರದಲ್ಲಿದ್ದೂ... ಇರದಂತಹ ಸ್ಥಿತಪ್ರಜ್ಞತೆ, ನನ್ನ ಮನಸ್ಸಿನಲ್ಲಿ ಏನೋ ಒಂತರಾ ವೈರಾಗ್ಯಭಾವ ಮೂಡಿಸಿಬಿಡ್ತು..  ಅದರಲ್ಲೂ ಶ್ರೀ ರಾಮಕೃಷ್ಣಾಶ್ರಮದ ಒಡನಾಟ ಬಂದ ಮೇಲಂತೂ ನಾನು ಸನ್ಯಾಸಿನಿ ಆಗಬೇಕು ಅನ್ನೋ ಆಸೆ ತೀವ್ರವಾಗುತ್ತಾ ಹೋಯ್ತು.. ಇದರ ಜೊತೆಜೊತೆಗೇ ವಿದ್ಯಾಭ್ಯಾಸ,  ಕಾಲೇಜು ಮುಗಿದ ತಕ್ಷಣವೇ ಆಶ್ರಮದ ಒಡನಾಟ, ಪ್ರತಿದಿನ ಅನೇಕ ಸದ್ವಿಚಾರಗಳ ಬಗ್ಗೆ ಪ್ರವಚನ ಕೇಳುತ್ತಾ, ಆಶ್ರಮದ ಹಿರಿಯ ಸನ್ಯಾಸಿಗಳಾದ ಶ್ರೀಮದ್ ಸ್ವಾಮಿ ಹರ್ಷಾನಂದಜಿ  ಮಹರಾಜ್, ಹಾಗೂ ಶ್ರೀಮದ್ ಸ್ವಾಮಿ ಪುರುಷೋತ್ತಮಾನಂದಜಿ ಮಹರಾಜ್  ರವರ ಕಿನ್ನರ ಕಂಠದಲ್ಲಿ  ಶ್ರೀ ಗುರುದೇವರ ಚರಿತ್ರೆಯ ಗಾಯನವನ್ನು ಕೇಳ್ತಾ ಅತೀವ ಸಂತೋಷದಿಂದ ಕಾಲ ಕಳೀತಾ ಇದ್ದೆ, ಧ್ಯಾನ ಜಪಾನುಷ್ಠಾನಕ್ಕಾಗಿ  ಶ್ರೀ ಮಠದಿಂದ ಮಂತ್ರೋಪದೇಶವನ್ನೂ ಪಡೆದು ಸದಾ ಧ್ಯಾನ ಜಪತಪದಲ್ಲಿ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡುತ್ತಿರುವಾಗಲೇ ಸಂಸಾರವನ್ನು ತೊರೆದು ಸನ್ಯಾಸಿನಿ ಆಗಬೇಕು ಅನ್ನೋ ಆಸೆ ತೀವ್ರವಾಗಿ ಸ್ವಾಮೀಜಿಯವರಲ್ಲಿ ಭಿನ್ನವಿಸಿದಾಗ,  ನಕ್ಕು ಸುಮ್ಮನಾದರು,ಯಾಕೆ ನನ್ನ ಆಸೆಯನ್ನ ಹೀಗೆ ಚಿವುಟುತ್ತೀರಿ..ಅಂತ ಬಲವಾಗಿ ಕೇಳ್ದೆ... ಆಸೆ ಇದ್ದರಷ್ಟೇ ಸಾಲದು, ಯೋಗಬೇಕು, ನಿನಗೆ ಆ ಭಾಗ್ಯವಿಲ್ಲ ಮಗು, ಪರಮಾತ್ಮನ ಸೇವೆಗೆ ಸನ್ಯಾಸಕ್ಕಿಂತ ಸಂಸಾರವೇ ಮೇಲು, ಜವಾಬ್ದಾರಿಗಲನ್ನ ಸಮರ್ಥವಾಗಿ ನಿರ್ವಹಿಸು, ಅದೇ ಈಶ ಸೇವೆ ಅಂತ ಹೇಳಿ ಸಂಸಾರದ ಕಡೆಗೆ ಹೊರಳುವಂತೆ ಮಾಡಿದರು...  ಇನ್ನೂ ಹಲವಾರು ಕಾರಣಗಳು ನನ್ನ ಸನ್ಯಾಸಿನಿ ಆಕಾಂಕ್ಷೆ ಗೆ ತಣ್ಣೀರೆರೆಚಿತು😔... ಇದು ನನ್ನ ಜೀವನದ ಅತ್ಯಂತ ಮೊದಲ, ಹಾಗೂ ಎಂದೆಂದಿಗೂ ಸರಿಪಡಿಸಲಾರದ ಸೋಲು. ವೈರಾಗ್ಯ ಜೀವನಡೆದೆಗೆ ಸಾಗಬೇಕೆಂದಿದ್ದ ನನ್ನ ಪ್ರಯತ್ನ ವಿಫಲವಾದದ್ದು ಹೀಗೆ😢
             ಶೈಲೂ.....

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ