223 ಕರಿಮೋಡ ಚದುರಿತ್ತುಉದಯರವಿಯ ಕಂಡು
ಉದಯರವಿಯ ಕಂಡು
ನಭಕೆ ಹೊನ್ನೆಳೆಯ ಚಿತ್ತಾರ
ಬಿಡಿಸಿದ್ದ ಭಾಸ್ಕರನು ಬಂದು
ಹಸಿರೊದ್ದು ಮಲಗಿದ್ದ
ಭೂತಾಯಿ ಮೈಮೇಲೆ
ಹೊನ್ನನೀರ ತುಳುಕಿಸಿ
ನಲಿಸಿತ್ತು ಭಾಸ್ಕರನ ಲೀಲೆ
ಬಿರಿಯಲವಣಿಸಿದ್ದ ಮೊಗ್ಗೆಲ್ಲ
ಹೂವಾಗಿ ಅರಳಿ ನಗುತಾ
ಪಸರಿಸೆಲ್ಲೆಡೆ ಸೌಗಂಧ
ಕೋರುತಿದೆ ದಿನಕರಗೆ ಸ್ವಾಗತಾ
ಶೈಲೂ....
Comments
Post a Comment