ಬಸವೇಶ್ವರ



ಜಗಜ್ಯೋತಿ ಬಸವೇಶ್ವರ
********************
ಇವ ಮಹಾನ್ಚೇತನ ಯುಗಪುರುಷ
ಕಾಯಕದಲ್ಲೇ ಕೈಲಾಸವ ಕಂಡವ
ಧೀಮಂತನಿವ ಅತಿ ಕರುಣೆಯ ಮನ

ಕಂದಾಚಾರ, ಮೌಢ್ಯಗಳ ಬದಿಗೊತ್ತಿ
ಸಾಮಾಜಿಕ ಅಸಮಾನತೆಗೆ ಮುಕ್ತಿ
ಮಾನವತಾವಾದಕ್ಕೆ ಇವನೇ ಸೂಕ್ತಿ

ಪ್ರತಿಪಾದಕನಿವ ಮಾನವ ಹಕ್ಕುಗಳಿಗೆ
ದಾರಿದೀಪನಿವ ಅತಿ ದೀನ ದಲಿತರಿಗೆ
ಸಮಾನತೆಯಿತ್ತ ಮಹಿಳಾ ಸಾಧಕರಿಗೆ

ಅನುಭವ ಮಂಟಪದ ರೂವಾರಿ
ತೋರಿದನಿವ ಭಕ್ತಿಮಾರ್ಗಕ್ಕೆ ದಾರಿ
ಸರಳತೆಗಿವ ಜಗತ್ತಿಗೇ ಮಾದರಿ

ಜಾತಿಯಿಲ್ಲ,ಭಕ್ತರದ್ದೊಂದೇ ಜಾತಿ ಎಂದ
ದಯೆಯೊಂದೇ ಧರ್ಮಕ್ಕೆ ಮೂಲವೆಂದ
ಸಕಲ ಜೀವರಲಿ ಶಿವ ನೆಲೆಸಿಹನೆಂದ

ಆ ದೇವನಿತ್ತ ಕೊಡುಗೆ ಈ ಭುವಿಗೆ
ದೇವನಂತೆಯೇ ಕಂಡನಿವ ಅರಿತವರಿಗೆ
ಬಸವ ನೀನೇ ಹೊಂಬೆಳಕು ಈ ಜಗತ್ತಿಗೆ

            ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು