Posts

ನನ್ನ ಕವನಗಳು

[9/18, 4:25 PM] Dr || B.N. Shylaja Ramesh: ಬಂದ ಆನಂದದಿಂದ ಎನ್ನೊಡೆಯ ಬಂದ ಪರಮಾನಂದ ತಂದ ಶ್ರೀ ಕೃಷ್ಣ ಮುಕುಂದ ಕೊಟ್ಟಿದ್ದನ್ನ ಭಕ್ತಿಯಿಂದ ಪ್ರೀತಿಯಿಂದಲಿ.ತಿಂದ ಆಯಿತು ಮನಕಾನಂದ ಶ್ರೀ ಗೋವಿಂದ ತಂದ ಭಕ್ತಿಯಾ ಬಂಧ ಭಕ್ತಿಯಲೆಯಲಿ ತೇಲಿಸಬಂದ ನಿಜಭಕ್ತಿಗೆ ನಾ ನೊಲಿಯುವೆನೆಂದ ಇಂದು ನಾ  ನಿನ್ನವನೆಂದ ಇಂದಾಯಿತೇನಗೆ  ಅಮಿತಾನಂದ ಶ್ರೀಹರಿ ಗೋವಿಂದ ನಾಮವೇ ಚಂದ ಭಜಿಸುತ್ತಿದ್ದೇನವನ  ಸಂಭ್ರಮದಿಂದ                              ಶೈಲೂ....... [9/18, 4:25 PM] Dr || B.N. Shylaja Ramesh: ಇಂದೆನ್ನ ಮನೆಗೆ  ಕೃಷ್ಣಯ್ಯ ಬರುತ್ತಾನೆ ನನ್ನೆಲ್ಲ ಭಾಂಧವರೆ ನೋಡಬನ್ನಿ ಹಸುವಿನಾ ನೊರೆಹಾಲು ಹಸನಾದ ಮೊಸರ್ಬೆಣ್ಣೆ ಅವನಿಗಾಗಿ ತಂದಿರುವೆ ಕದ್ದು ತಿನ್ನುತ್ತಾನಂತೆ ನೋಡಬನ್ನಿ ಕೊರಳಲ್ಲಿ ಕೌಸ್ತುಭ ಕೈಯಲ್ಲಿ ಕೊಳಲು ಕಾಲ್ಗೆಜ್ಜೆ ರಿಂಗಣವ  ಕೇಳಬನ್ನಿ ಅಂಬೆಗಾಲಿಡುತ್ತಾ ಮುದ್ದುಗರೆವುತ ಬರುತ್ತಾನೆ ಮುದದಿಂದವನ  ನೋಡಬನ್ನಿ ವನದ ಸೀಬೆಹಣ್ಣು, ಅಡವಿ ಕಾರೇಹಣ್ಣು ಮರದ ನೆರಳೆಹಣ್ಣು ಅವನಿಗಿಷ್ಟವಂತೆ  ಕೇಳಬನ್ನಿ ಅವನಿಗಿಷ್ಟದ್ದೆಲ್ಲ  ಜೋಪಾನಮಾಡಿಟ್ಟಿ ರುವೆ ಈಗ ತಿನ್ನುತ್ತಾನೆ  ನೋಡಬನ್ನಿ ಚಕ್ಕುಲಿ ಮುಚ್ಚೋರೆ  ಕರಿದ ಆವಲಕ್ಕಿಯ  ಮುದದಿಂದ  ಮಾಡಿರುವೆ  ನೋಡಬನ್ನಿ ತರತರದ ಉಂಡೆಗಳು ಜೊತೆಗೆ ಸಿಹಿ ಅವಲಕ್ಕಿ ಕಡೆದು ಮಾಡಿದ ಬೆಣ್ಣೆ  ಭಕ್ತಿಯಲಿ ಮಾಡಿರುವೆ  ನೋಡಬನ್ನಿ ಪುಟ್ಟ ಹೆಜ್ಜೆ ಇಡುತ, ಸದ್ದು ಮಾಡಿ ಮನೆಯಲ್ಲಿ ಮುದ್ದು ಮುಖವ ಸ್ಪಷ

ನನ್ನ ಕವನಗಳು

ಕವನ ಸಂಗ್ರಹ[9/18, 4:14 PM] Dr || B.N. Shylaja Ramesh: 💐💐💐    ರಾಧೇ     💐💐💐 ****************************** *** ಲೋಕದ ಕಣ್ಣಿಗೆ  ರಾಧೆಯು ಕೂಡಾ ಎಲ್ಲರಂತೆ  ಒಂದು  ಹೆಣ್ಣು..... ಅವಳಂತರಂಗವ ಅರಿತವರಿಲ್ಲದೆ ಒದ್ದೆಯಾಯ್ತವಳ  ಕಣ್ಣು ...... ರಾಧೇ ಎಂದಾಕ್ಷಣ ಬರುವನು ಕೃಷ್ಣ ಎಲ್ಲರ ಮನಮಾನಸದಿ ಯಾರೂ ಅರಿಯರು ರಾಧೆಯ  ನೋವಾ ಒಳಗಿಹುದು  ಬಹು ಬೇಗುದಿ...... ಹಾಲಾಹಲವ ಒಡಲೊಳಗಡ ಗಿಸಿ ನಗುವಳು  ಹೂವಿನ ತೆರದಿ ಮುತ್ತಿದೆ  ಮನವಾ ಸಾವಿರ ನೋವು ಆದರೂ  ನಗುವಳು  ಮುದದಿ.... ಬಾರದ  ಕೃಷ್ಣನ  ದಾರಿಯ ಕಾಯುತ ಕುಳಿತಳು  ನಂದನ  ವನದಿ ಒಳಹೊಕ್ಕವಳ ಅಂತರಂಗವ,  ಕೃಷ್ಣಾ ನೀನಿಹೇ ಅಲ್ಲೇ ಚಂದದಿ.....           ಶೈಲೂ...... [9/18, 4:14 PM] Dr || B.N. Shylaja Ramesh: -: ಸತ್ತ ಮನದ ಕಳಕಳಿ :- ಶಾಂತ  ಮಾನಸ  ಸರೋವರ ಕದಡಿ ಕೆನ್ನೀರಾಗಿ ಹಳಸಿ ನಾರುತಿದೆ ಪಟಪಟನೆ ಸುರಿವ ವಾಗ್ಜರಿಗೆ ಮನಸು ಬೀಗ ಮುದ್ರೆಯನೊತ್ತಿದೆ ಸುಂದರ ಕನಸು ಕಾಣುವ  ಬೊಗಸೆ ಕಂಗಳು ತುಂಬಿದ ಕೊಳಗಳಾಗಿವೆ ಬಾನೆತ್ತರ , ಮುಗಿಲೆತ್ತರ ಕ್ಕೇರುವ ಮನಸು  ಗರಿಮುದುರಿ  ಮಲಗಿದೆ ಶುಧ್ಧ ಯೋಚನಾ ಲಹರಿಯು ಪ್ರಕ್ಷುಬ್ಧ ವಾಗಿದೆ ಪುಟ್ಟ  ಅನುಮಾನದ ಬೀಜ ಆಂತರ್ಯದಿ ಬಿರುಕೊಡೆದು ಟಿಸಿಲೊಡೆಯುತ್ತಿದೆ ನಿನ್ನ ತಣ್ಣನೆಯ  ಮೌನ ಅಡಕೆ ನೀರೆರೆದು ಪೋಷಿಸುತಿದೆ ಅದು ಹೆಮ್ಮರವಾಗಿ,  ಈ  ದೇಹ ಛಿದ್ರವಾಗುವ  ಮೊದಲು, ಆ ಪುಟ್ಟ ಸಸಿಯ ಬೇರುಸಹಿತ ಕಿತ್ತೊಗೆದು ಈ  ಜೀ

ನನ್ನ ಕವನಗಳು

ಕವನ ಸಂಗ್ರಹ[9/18, 4:14 PM] Dr || B.N. Shylaja Ramesh: 💐💐💐    ರಾಧೇ     💐💐💐 ****************************** *** ಲೋಕದ ಕಣ್ಣಿಗೆ  ರಾಧೆಯು ಕೂಡಾ ಎಲ್ಲರಂತೆ  ಒಂದು  ಹೆಣ್ಣು..... ಅವಳಂತರಂಗವ ಅರಿತವರಿಲ್ಲದೆ ಒದ್ದೆಯಾಯ್ತವಳ  ಕಣ್ಣು ...... ರಾಧೇ ಎಂದಾಕ್ಷಣ ಬರುವನು ಕೃಷ್ಣ ಎಲ್ಲರ ಮನಮಾನಸದಿ ಯಾರೂ ಅರಿಯರು ರಾಧೆಯ  ನೋವಾ ಒಳಗಿಹುದು  ಬಹು ಬೇಗುದಿ...... ಹಾಲಾಹಲವ ಒಡಲೊಳಗಡ ಗಿಸಿ ನಗುವಳು  ಹೂವಿನ ತೆರದಿ ಮುತ್ತಿದೆ  ಮನವಾ ಸಾವಿರ ನೋವು ಆದರೂ  ನಗುವಳು  ಮುದದಿ.... ಬಾರದ  ಕೃಷ್ಣನ  ದಾರಿಯ ಕಾಯುತ ಕುಳಿತಳು  ನಂದನ  ವನದಿ ಒಳಹೊಕ್ಕವಳ ಅಂತರಂಗವ,  ಕೃಷ್ಣಾ ನೀನಿಹೇ ಅಲ್ಲೇ ಚಂದದಿ.....           ಶೈಲೂ...... [9/18, 4:14 PM] Dr || B.N. Shylaja Ramesh: -: ಸತ್ತ ಮನದ ಕಳಕಳಿ :- ಶಾಂತ  ಮಾನಸ  ಸರೋವರ ಕದಡಿ ಕೆನ್ನೀರಾಗಿ ಹಳಸಿ ನಾರುತಿದೆ ಪಟಪಟನೆ ಸುರಿವ ವಾಗ್ಜರಿಗೆ ಮನಸು ಬೀಗ ಮುದ್ರೆಯನೊತ್ತಿದೆ ಸುಂದರ ಕನಸು ಕಾಣುವ  ಬೊಗಸೆ ಕಂಗಳು ತುಂಬಿದ ಕೊಳಗಳಾಗಿವೆ ಬಾನೆತ್ತರ , ಮುಗಿಲೆತ್ತರ ಕ್ಕೇರುವ ಮನಸು  ಗರಿಮುದುರಿ  ಮಲಗಿದೆ ಶುಧ್ಧ ಯೋಚನಾ ಲಹರಿಯು ಪ್ರಕ್ಷುಬ್ಧ ವಾಗಿದೆ ಪುಟ್ಟ  ಅನುಮಾನದ ಬೀಜ ಆಂತರ್ಯದಿ ಬಿರುಕೊಡೆದು ಟಿಸಿಲೊಡೆಯುತ್ತಿದೆ ನಿನ್ನ ತಣ್ಣನೆಯ  ಮೌನ ಅಡಕೆ ನೀರೆರೆದು ಪೋಷಿಸುತಿದೆ ಅದು ಹೆಮ್ಮರವಾಗಿ,  ಈ  ದೇಹ ಛಿದ್ರವಾಗುವ  ಮೊದಲು, ಆ ಪುಟ್ಟ ಸಸಿಯ ಬೇರುಸಹಿತ ಕಿತ್ತೊಗೆದು ಈ  ಜೀ

ನನ್ನ ಕವನಗಳು

[8/6/2020, 8:45 am] Dr. B. N. Shylaja Ramesh: ಇಂದು ನನ್ನ ಜೀವನದಲ್ಲಿ ಮರೆಯಲಾಗದ  ದಿನ ಸ್ವಾತಿ ಮತ್ತೊಂದನ್ನು ಪಡೆದ ಸುಂದರ ದಿನ ಹೊಸಬಾಳಿಗೆ ಕಾಲಿಟ್ಟ ಸುದಿನ ನಿಮ್ಮೆಲ್ಲರ ಹಾರೈಕೆಯಿರಲಿ ಈ ದಿನ🙏🙏 ಆಗಮನ ********* ಇಪ್ಪತ್ತೆರಡು  ವರ್ಷತುಂಬಿತು ಅವ  ನನ್ನ  ಜೀವನದಿ ಕಾಲಿಟ್ಟು ಈಗಲೂ  ಕೇಳುತ್ತಿದೆ ಆ ಮಂಗಳದ ನಾದ ಅವನದೇ  ನೆನಪಿನ ಆ  ಮಧುರ  ನಿನಾದ ನೆನಪಿದೆ ಇನ್ನೂ  ಅವ ಬದುಕಲಿ  ಬಂದದ್ದು ಸವಿ ಕನಸುಗಳ ಬಿತ್ತಿದ್ದು ಮಧುರ ನೆನಪ ಹೆಕ್ಕಿ  ತಂದದ್ದು ಅವ ಬಂದದ್ದೇ ಬಂದದ್ದು ಮರೆಯಾಯ್ತು ಅಂದೇ ಕಹಿನೆನಪ ಭಾವ ಉದಿಸಿ ನಲ್ಮೆಯಾ  ಬೆಳಕು ಮೇರೆ ಇಲ್ಲದೇ ಮೆರೆಯುತ್ತಿದೆ ಎದೆಯಲ್ಲಿ  ಅನುರಾಗ ಎಂದಿಗೂ  ಊಹಿಸಲಾರೆ ಅವನಿಲ್ಲದ  ಜೀವನ ಉಸಿರುಸಿರಿನಲ್ಲೂ ಅನುರಣಿಸುತ್ತಿದೇ ಅವನದೇ  ಧ್ಯಾನ ಅಬ್ಭಾ!!!!..... ಹೀಗೇಕೆ  ಉರುಳುತ್ತಿದೆ ಕಾಲ ನೆನ್ನೆ ಮೊನ್ನೆಯ  ಪ್ರೀತಿಗೆ ಆಗಲೇ  ಇಪ್ಪತ್ಮೂರು  ವರ್ಷಗಳಾಯ್ತಲ್ಲ ಆ  ದೇವನಾ  ದಯವಿರಲಿ ಒಲವ  ಜೀವನ  ಹೀಗೆಯೇ ಸಾಗಲಿ  ಮೆಲ್ಲ...             ಶೈಲೂ...... [8/6/2020, 8:45 am] Dr. B. N. Shylaja Ramesh: ನೀ  ಬಂದ ದಿನ ************* ಅಂದು ನೀ  ಬಂದ ದಿನ ಹೃದಯದಲಿ ರಾಗಗಳ ತನನ ಮಾತಿಲ್ಲ ಬರೀ ಮೌನ ಕಣ್ಸನ್ನೆಯಲೇ  ಶುಭಮಿಲನ ಹೃದಯದಲಿ ಚಿಲಿಪಿಲಿ ಅನುರಾಗದೋಕುಳಿ ಹರಿಸಿ ಪ್ರೀತಿಯ ಸುಧೆಯ ಸೆಳೆದೆ  ಸವಿ ಮಾತಲಿ ಬರೆದು ಒಲವ ಮುನ್ನುಡಿ ಇಟ್ಟು ಹೊಸಬಾಳಿಗೆ  ಅಡಿ ತುಳಿದು ನಗುತ  ಸಪ್